


೨೨ ಡಿಸೆಂಬರ್ ೨೦೨೩ರ ಶುಕ್ರವಾರ ದಿವಸ ಅನೋನ್ಯ ಸೇವಾ ಕೂಟದ ಬಂಧುಗಳು ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣ, ಕೀಮ್ಸ್ ಆಸ್ಪತ್ರೆ ಆವರಣ, ರೈಲು ನಿಲ್ದಾಣ, ಚೆನ್ನಮ್ಮ ಸರ್ಕಲ್ ಮತ್ತು ಹಳೇ ಕೋರ್ಟ್ ಸರ್ಕಲ್ ಬೀದಿಯ ಅಕ್ಕ - ಪಕ್ಕ, ಸುತ್ತಮುತ್ತಲು ಇರುವ ರೋಗಿಗಳು, ಅನಾಥರು ಮತ್ತು ವಯೋವೃದ್ಧರನ್ನು ಹುಡುಕಿ ಅನೋನ್ಯತಾ ಸೇವಾ ಕೂಟದ ಸದಸ್ಯರು ನೀರಿನ ಬಾಟಲ್, ಊಟದ ಪ್ಯಾಕೆಟ್, ಉಣ್ಣಿಯ ಚಾದರ (ಬೆಡ್ ಶಿಟ್, ಬ್ಲಾಂಕೇಟ್) ಗಳನ್ನು ನೀಡಿ ಯೋಗಕ್ಷೇಮ ವಿಚಾರಿಸಿದರು. ಅನನ್ಯತಾ ಸೇವಾ ಕೂಟದ ಸೇವಕರಾದ ಬಸವರಾಜ ಚವ್ಹಾಣ, ಶಿವಾನಂದ ಲಮಾಣಿ, ಸುಭಾಷ್ ಹೇಮಣ್ಣಾ ಚವ್ಹಾಣ, ಶಿವು ಲಮಾಣಿ, ಮಂಜುನಾಥ ಲಮಾಣಿ, ಪ್ರವೀಣ ಲಮಾಣಿ, ನೇಮಣ್ಣಾ ಚವ್ಹಾಣ, ಗಣೇಶ, ಸಂತೋಷ ರಾಠೋಡ, ಪವನಕುಮಾರ ರಾಠೋಡ, ಜೇಮ್ಸ್ ಮೊದಲಾದ ಸದಸ್ಯರು ತಮ್ಮ ವರ್ಷದ ದುಡಿಮೆಯ ಒಂದು ಪ್ರತಿಶತ ಹಣವನ್ನು ಈ ರೀತಿ ಸಮಾಜ ಹಿತಕಾರಿ ಸೇವೆಗೆ ವಿನಿಯೋಗಿಸಿದರು. ಎರಡು ಆಟೋಗಳಲ್ಲಿ ಸಂಚರಿಸಿ ೩೦ ಊಟದ ಪ್ಯಾಕೆಟ್, ೦೧ ಕೆಸ್ ನೀರಿನ್ ಬಾಟಲ್, ೨೦ ಉಣ್ಣಿಯ ಚಾದರ (ಬೇಡ್ ಶೀಟ್ಗಳು) ವಿತರಿಸಿ ನೊಂದವರಿಗೆ ಅಲ್ಪ ಸಹಾಯ ಮಾಡಿ ಸಂತಸ ಪಟ್ಟರು. ಸಂತೋಷವಾಗಿ ಕೊಡುವವನ ಮೇಲೆ ದೇವರ ಪ್ರೀತಿ ಮತ್ತು ಕೃಪೆ ಉಂಟು ಎಂಬ ಧ್ಯೇಯವಾಕ್ಯವನ್ನು ಅನುಸರಿ ಪರೋಪಕಾರ ದಾರಿ ಹಿಡಿರುವರು. ಕಾರಣಾಂತರಗಳಿಂದ ಕೆಲವರು ಪೂರ್ಣಪ್ರಮಾಣದ ನಿರಾಶ್ರಿತ ಅನಾಥರಾಗಿದ್ದರೆ, ಇನ್ನೂ ಕೆಲವರಿಗೆ ಎಲ್ಲ ಸಂಬಧಿಕರಿದ್ದರು ಜಗಳ ತಂಟೆ ತಕರಾರಿನಿಂದ ಕುಟುಂಬದಿಂದ ಹೊರ ಹಾಕಲ್ಪಟ್ಟವರಿದ್ದರು. ಇನ್ನೂ ಕೆಲವರಿಗೆ ಮಕ್ಕಳು ಕಳ್ಳು - ಬಳ್ಳಿ ಇದ್ದರು ಸಹ ಅವರೂ ಇವರ ಉಪಚಾರ ಮಾಡದ ಕಾರಣ ಆಸ್ಪತ್ರೆಗೆ ತೋರಿಸಲು ಬಂದ ನಿರ್ಧನಿಕರಾಗಿದ್ದು; ಬಿದಿ ಬದಿಯಲ್ಲಿ ವಾಸಿಸುವರಾಗಿದ್ದರು. ನನಗೆ ಊಟಾ ಬೇಡ, ರಾತ್ರಿ ಬಹಳ ಚಳಿಯಾಗುವುದರಿಂದ ನಿದ್ದೆ ಮಾಡಲು ಆಗುತ್ತಿಲ್ಲ ದಯಮಾಡಿ ಚಾದರ ಕೊಡಿ ಎಂದು ವಿನಂತಿಸಿ ಕೊಂಡರು. ಪ್ರತಿಯೊಂಬ ನಿರಾಶ್ರಿತರ ಕಥೆ - ವ್ಯಥೆ ಭಿನ್ನವಾಗಿತ್ತು. ಅವರು ಆಹಾರಕ್ಕಿಂತ ಪ್ರೀತಿ, ವಿಶ್ವಾಸ, ಸಾಂತ್ವಾವನಕ್ಕಾಗಿ ಹಸಿದವರಾಗಿದ್ದರು ಎಂದು ಅನನ್ಯ ಕೂಟದವರ ಕಳಕಳಿಯಾಗಿತ್ತು. ಈ ರೀತಿ ಬಡತನ ಮತ್ತು ಕಾಳಜಿ ಉಪಚಾರ ವಂಚಿತ ಜನರ ಸೇವೆಯನ್ನು ಪ್ರತಿ ವರ್ಷ ಒಂದರೆಗಳಿಗೆ ಮಾಡಿ ಆತ್ಮ ತೃಪ್ತಿ ಹೊಂದಲು ಬಯಸುತ್ತೇವೆ ಎಂದು ತಮ್ಮ ಮನದಾಳದ ಉದ್ದೇಶ ಹೇಳಿದರು.
ಅನೋನ್ಯತಾ ಸೇವಾ ಕೂಟ