(ವರದಿಗಾರರು ವೈ.ಜಿ ನರಸಿಂಹಮೂರ್ತಿ ಬಯಲುಸಿಂಹ ಪೀಣ್ಯ ದಾಸರಹಳ್ಳಿ)
ಪೀಣ್ಯ,ದಾಸರಹಳ್ಳಿ: ‘ನಿಷ್ಠೆಯಿಂದ, ನ್ಯಾಯಯುತವಾಗಿ, ಧೈರ್ಯವಾಗಿ ಕನ್ನಡದ ಪರವಾಗಿ ಮತ್ತು ನಾಡಿನ ಸಂಸ್ಕೃತಿ, ನೆಲ, ಜಲ, ಭಾಷೆಗಾಗಿ ಹೋರಾಡಿದಾಗ ಮಾತ್ರ ಕನ್ನಡ ಭಾಷೆಯನ್ನು ಉಳಿಸಲು ಬೆಳೆಸಲು ಸಾಧ್ಯವಾಗುತ್ತದೆ’, ಎಂದು ಸಮಾಜ ಸೇವಕರು ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಎಸ್.ಎಚ್ ಬಿರಾದಾರ್ ಹೇಳಿದರು.
ಪೀಣ್ಯ 2ನೇ ಹಂತ ಸಮೀಪದ ರಾಜಗೋಪಾಲನಗರ ಮುಖ್ಯರಸ್ತೆಯ ಓಂ ಶಕ್ತಿ ದೇವಸ್ಥಾನದ ಮುಂಭಾಗದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅಭಿಮಾನಿಗಳ ಬಳಗದ ವತಿಯಿಂದ ಬಿ.ಪಿ ರವಿಗೌಡ ಮತ್ತು ತಂಡದವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನಾಡಿನ ನೆಲ ಜಲ ಭಾಷೆಗಾಗಿ ಕನ್ನಡ ನಾಡಿನ ಕೆಚ್ಚೆದೆಯ ಕಟ್ಟಾಳುಗಳು ತಮ್ಮ ಜೀವನವನ್ನೇ ಮುಡುಪಾಗಿಟ್ಟು ಅದೆಷ್ಟೋ ತ್ಯಾಗ ಬಲಿದಾನಗಳು ನಡೆದು ಹೋಗಿವೆ. ಪರಭಾಷಿಗರು ಸಹ ನಮ್ಮ ನಾಡಿನಲ್ಲಿ ನೆಲೆಸಿ ಕನ್ನಡಿಗರ ಮೇಲೆ ದಬ್ಬಾಳಿಕೆಗಳನ್ನು ನಡೆಸುತ್ತಿದ್ದಾರೆ ಇದೆಲ್ಲವನ್ನು ಸರಿಗಟ್ಟಲು ನಾವುಗಳು ಸದಾ ಸಿದ್ದರಿರಬೇಕು’, ಎಂದು ತಿಳಿಸಿದರು.
ಧ್ವಜಾರೋಹಣದ ಬಳಿಕ ಕನ್ನಡ ಭುವನೇಶ್ವರಿ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು. ನಂತರ ಬಡ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪೆನ್ಸಿಲ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ನೆರೆದಿದ್ದವರಿಗೆ ಸಿಹಿ ಹಂಚಲಾಯಿತು.
ಈ ಸಂದರ್ಭದಲ್ಲಿ ರವಿ, ಸಿಂಗಾರಿಗೌಡ, ಸಿ.ಡಿ ನಾಗರಾಜ್, ಸ್ಪೀಕರ್ ಮಲ್ಲೇಶ್, ಗ್ಯಾಸ್ ನಾಗರಾಜ್, ಬಾರ್ ವಿನುಗೌಡ, ಫೈನಾನ್ಸ್ ರವಿ, ಐರನ್ ಬಾಬು, ದೀಪು, ದಿನೇಶ್, ಪ್ರತಾಪ್, ವಾಚ್ ರಾಜಣ್ಣ, ಸೋನ್ ಲಾಲ್, ಸಂಜಯ್ಯ, ಅಶೋಕ್, ಕಿಶೋರ್, ಗೌರಮ್ಮ, ನಂಜುಂಡಸ್ವಾಮಿ, ಆರ್ ಮುರುಗೇಶ್ ಶ್ರೀಕಾಂತ್ ಸೇರಿದಂತೆ ಹಲವಾರು ಗಣ್ಯರು, ಹಿತೈಷಿಗಳು, ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.
