
ದಿನಾಂಕ 29- 12- 2023ರ ಶುಕ್ರವಾರದಂದು 11-30 ಗಂಟೆಗೆನಡೆದ 120ನೇ ಕುವೆಂಪು ಹುಟ್ಟುಹಬ್ಬದ ನೆನಪಿನಲ್ಲಿ ವಿಶ್ವಮಾನವ ದಿನಾಚರಣೆಯಲ್ಲಿ ನಾಲ್ಕು ಗೋಷ್ಠಿಗಳನ್ನು ಏರ್ಪ ಡಿಸಿದ್ದು ಮೊದಲ ಗೋಷ್ಠಿಯಲ್ಲಿ ಡಾ. ಬೆ. ಗೊ ರಮೇಶ – ಹಿರಿಯ ಸಾಹಿತಿಗಳು “ಕುವೆಂಪುರವರ ಸಮಗ್ರಕಾವ್ಯ” ಪ್ರಬಂಧ ಮಂಡಿಸಿದರು. ಎರಡನೆಯ ಗೋಷ್ಠಿಯಲ್ಲಿ ಡಾ.ರಾಜು ಗುಂಡಾಪುರ – ಜಾನಪದ ವಿದ್ಯಾಂಸರು ಹಾಗೂ ವಿಮರ್ಶಕರು “ಕುವೆಂಪುರವರ ಸಮಗ್ರ ನಾಟಕ “ಗಳ ಕುರಿತು ವಿಚಾರ ಮಂಡಿಸಿದರು ಮೂರನೆಯ ಗೋಷ್ಠಿಯಲ್ಲಿ ಡಾ. ನಕ್ಷತ್ರ ರವರು ಕುವೆಂಪುರವರ ಬದುಕು ತಮ್ಮ ಬದುಕು” ಕುರಿತು ವಿಷಯ ಮಂಡಿಸಿದರು. ನಾಲ್ಕನೆಯ ಗೋಷ್ಠಿಯಲ್ಲಿ ಡಾ.ಕುಸುಮ ರವರು ಕುವೆಂಪು ಸಾಹಿತ್ಯ ಹಾಗೂ ವೈಚಾರಿಕತೆ ವಿಷಯದಲ್ಲಿ ಪ್ರಬಂಧ ಮಂಡಿಸಿದರು. ಒಟ್ಟು 8 ವಿದ್ಯಾರ್ಥಿಗಳು ತಮ್ಮ ಪ್ರಬಂಧ ಮಂಡಿಸುವುದರ ಮೂಲಕ ವಿಚಾರ ಸಂಕಿರಣವನ್ನು ಸಂಪನ್ನಗೊಳಿಸಿದರು. ಕುದೀಪಾ ತಂಡದವರಿಂದ ಕುವೆಂಪು ಗೀತೆ – ಗಿರೀಶ ಅವರಿಂದ ಸ್ವಾಗತ – ಗಿರೀಶ ವೈ ಅವರಿಂದ ವಂದನಾರ್ಪಣೆ – ನೆರವೇರಿತು. ಕುನಿಖಿತಾ ರವರ ನಿರೂಪಣೆ ಕಾರ್ಯಕ್ರಮದಲ್ಲಿ ಹೊಸ ವಿನ್ಯಾಸದಂತಿತ್ತು, ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರು ಅಧ್ಯಕ್ಷೀಯ ನುಡಿಗಳಲ್ಲಿ ಕುವೆಂಪು ವೈಬಾರಿಕತೆಯ ಸಾಕ್ಷಿಪ್ರಜ್ಞೆ ಎಂದು ಅಭಿಪ್ರಾಯ ವ್ಯಕ್ತಪಡಿಸ್ತಿ ಸರ್ವಜನಾಂಗದ ಶಾಂತಿಯ ತೋಟದ ಮೂಲಕ ಪಂಚಸೂತ್ರವನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿದರು. ಕನ್ನಡ ವಿಭಾಗ – ಕನ್ನಡ ಸಂಘದಿಂದ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆ ನೇತಾಜಿ ಯುವಕರ ಸಂಘದ ಸಹಕಾರದೊಂದಿಗೆ ಅದ್ದೂರಿಯಾಗಿ ಯಶಸ್ವಿ ಹೊಂದಿತು.