
ಬೀದರ ನಗರದ ಮೈಲೂರ ರಸ್ತೆಯಲ್ಲಿರು ವಿದ್ಯಾಶ್ರೀ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಬೀದರ ಅಡಿಯಲ್ಲಿ ನಡೆಯುತ್ತಿರುವ ವಿದ್ಯಾಶ್ರೀ ಮಾದರಿ ಪ್ರಾಥಮಿಕ ಶಾಲೆ ಹಾಗೂ ವಿದ್ಯಾನಿಧಿ ಪ್ರೌಢ ಶಾಲೆ ಬೀದರ ಶಾಲೆಯಲ್ಲಿ ಮಕ್ಕಳಿಂದ ವಿಜ್ಞಾನಮತ್ತು ಕಲಾ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಸಲೀಂ ಪಾಶಾ ಮಾನ್ಯ ಆಗಮಿಸಿದರು, ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಉಪಾಧ್ಯಕ್ಷರಾದ ರಾಜೇಂದ್ರಕುಮಾರ ಗಂದಗೆ, ಕಲಬುರಗಿ ಹಾಗೂ ವಿಜಯಪೂರ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿಗಳಾದ ಮೂಲಿಮನಿ ಬಸವರಾಜ ಜಿ., ಆಗಮಿಸಿದರು, ಅತಿಥಿಗಳಾಗಿ ಶ್ರೀ ರೇವಣಸಿದ್ದಪ್ಪ ಜಲಾದೆ ಜಿಲ್ಲಾ ಸಂಚಾಲಕರು ವಿಕಾಸ ಅಕಾಡೆಮಿ ಬೀದರ, ಶ್ರೀ ರಾಜಶೇಖರ ಮಂಗಲಗಿ ಜಿಲ್ಲಾ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೀದರ, ಶ್ರೀ ಬಸವರಾಜ ಜಕ್ಕಾ ಜಿಲ್ಲಾ ಗೌರವಾಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೀದರ ಹಾಗೂ ಅಧ್ಯಕ್ಷತೆಯನ್ನು ಶ್ರೀ ಗಣಪತಿ ಸೋಲಪೂರೆ ಕಾರ್ಯದರ್ಶಿಗಳು ವಿದ್ಯಾಶ್ರೀ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಬೀದರ, ಶಾಲೆಯ ಅಧ್ಯಕ್ಷರಾದ ಶೀಲಾ ಮುರಳಿಧರ ದೇಶಪಾಂಡೆ ಹಾಗೂ ಟ್ರಸ್ಟ್ನಸ ಖಜಾಂಚಿಯಾದ ಶ್ರೀಮತಿ ರೇಣುಕಾ ಆರ್. ಮಂಗಲಗಿ ಹಾಗೂ ವಿದ್ಯಾರ್ಥಿಗಳ ಪಾಲಕ ಪೋಷಕರು ಈ ಒಂದು ಪ್ರದರ್ಶನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನದಲ್ಲಿ ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದರು.