
ಬ್ಯಾಟರಾಯನಪುರ : ಬೆಟ್ಟಹಲಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಸರ್ವಾಂಗೀಣ ಪ್ರಗತಿಗೆ ಹೆಚ್ಚಿನ ಆಧ್ಯತೆ ನೀಡಿ, ಕಾರ್ಯ ನಿರ್ವಹಿಸುವುದಾಗಿ ನೂತನ ಗ್ರಾ.ಪಂ.ಅಧ್ಯಕ್ಷ ಬಿ.ಎಸ್.ಅನಿಲ್ ಕುಮಾರ್ ತಿಳಿಸಿದರು.
ಬೆಟ್ಟಹಲಸೂರು ಗ್ರಾ.ಪಂ.ಕಚೇರಿ ಯಲ್ಲಿ ಗುರುವಾರ ಏರ್ಪಡಿಸಿದ್ದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯರು, ಗ್ರಾಮದ ಮುಖಂಡರಿಂದ ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ಅವರು ‘ಅಧಿಕಾರ ಶಾಶ್ವತವಲ್ಲ ಆದರೆ ಆ ವೇಳೆಯಲ್ಲಿ ಶಾಶ್ವತವಾಗಿ ಉಳಿಯುವಂತಹ ಜನೋಪ ಯೋಗಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಸಾರ್ಥಕತೆಯ ಕಡೆಗೆ ಸಾಗಬೇಕು ಎಂಬುದು ನನ್ನ ನಿಲುವಾಗಿದ್ದು, ಜನತೆ ನೀಡಿರುವ ಈ ಅಧಿಕಾರ ವನ್ನು ಜನತೆಯ ಸೇವೆಗಾಗಿಯೇ ವಿನಿಯೋಗಿಸುವ ಮೂಲಕ ಅವರ ಋಣ ತೀರಿಸಬೇಕಿದೆ. ಗ್ರಾಮಾಭಿ ವೃದ್ಧಿಯ ವಿಷಯದಲ್ಲಿ ಗ್ರಾ.ಪಂ.ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಸಲಹೆ, ಮಾರ್ಗ ದರ್ಶನದ ಮೇರೆಗೆ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ವಿಮಲಾ ಗಣೇಶ್, ತಾ.ಪಂ.ಮಾಜಿ ಸದಸ್ಯ ನಾಗರಾಜ್(ಬಾಬು), ಬ್ಯಾಟರಾಯನಪುರ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಟಿ.ಪಿ.ಪ್ರಕಾಶ್, ಬಿಜೆಪಿ ಮುಖಂಡರಾದ ಸುಗ್ಗಟ್ಟ ಸುರೇಶ್, ಬಂಡಿಕೊಡಿಗೇಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷ ಜನಾರ್ಧನ್ ಪಿ., ಗ್ರಾ.ಪಂ.ಸದಸ್ಯರಾದ ರಾಮಾಂಜಿನಪ್ಪ, ಹೇಮಾವತಿ, ರತ್ನಮ್ಮ, ತುಳಸಮ್ಮ, ಸಾವಿತ್ರಮ್ಮ, ಸುವರ್ಣ, ಮಮತಾ, ಪ್ರೇಮ, ಮುನಿಕೃಷ್ಣ ಸೇರಿದಂತೆ ಗ್ರಾಮಸ್ಥರಿದ್ದು ನೂತನ ಅಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಿದರು.