ರಕ್ಷಾರಾಮಯ್ಯ ಸಾರಥ್ಯದಲ್ಲಿ ಪ್ರಬುದ್ಧ ರಾಷ್ಟ್ರ ನಿರ್ಮಾಣಕ್ಕಾಗಿ ಚಿಕ್ಕಬಳ್ಳಾಪುರದಲ್ಲಿ ಬ್ರಹತ್ ತಿರಂಗಾ ರಿಯಾಲಿ ಜಾಥ,ಜಾಥಾಕ್ಕೆ ಹರಿದು ಬಂದ ಜನ ಸಾಗರ.
ಚಿಕ್ಕಬಳ್ಳಾಪುರ: ಯುವಕರು ತಮ್ಮಲ್ಲಿ ದೇಶಾಭಿಮಾನ
ಬೆಳಸಿಕೊಳ್ಳಬೇಕು,ತಿರಂಗಾ ಮಹತ್ವವನ್ನು ಅರಿಯಬೇಕು,ದೇಶದ ಅಭಿವೃದ್ಧಿಗೆ ತಮ್ಮ ಪಾತ್ರ ವಹಿಸಬೇಕು ನಾವೆಲ್ಲರೂ ಭಾರತೀಯರು ಒಂದೇ ಎನ್ನುವ ಸಂದೇಶ ಸಾರಬೇಕು,ಯಾವುದೇ ರೀತಿಯ ಪ್ರಚೋದನೆ ಒಳಗಾಗಬಾರದು ಎಂದು ಎಮ್. ಎಸ್.ರಾಮಯ್ಯ ಯೂಥ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಹೇಳಿದರು.ಎಂ.ಎಸ್.ರಾಮಯ್ಯ ಯೂಥ್ ಫೌಂಡೇಶನ್ ವತಿಯಿಂದ ಶನಿವಾರ ನಗರದಲ್ಲಿ 75 ನೇ ಗಣರಾಜ್ಯೋತ್ಸವದ ಅಂಗವಾಗಿ ಪ್ರಬುದ್ಧ ರಾಷ್ಟ್ರ ನಿರ್ಮಾಣಕ್ಕಾಗಿ ಎಂ.ಎಸ್.ರಾಮಯ್ಯ ಯೂತ್ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಎಂ.ಎಸ್.ರಕ್ಷಾ ರಾಮಯ್ಯ ಅವರ ಸಾರಥ್ಯದಲ್ಲಿ ಹಮ್ಮಿಕೊಂಡಿದ್ದ ಬೃಹತ್ ತಿರಂಗಾ ರಿಯಾಲಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಾವೆಲ್ಲರು ಸೇರಿ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ದೇಶ ಕಟ್ಟುವ ಕೆಲಸ ಮಾಡಬೇಕು. ಹೊರತು ಒಡೆಯುವ ಕೆಲಸ ಮಾಡಬಾರದು ದೇಶದ ಆರ್ಥಿಕ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ದಾರಿ ತಪ್ಪಬಾರದು ಎಂದರು.
ತಿರಂಗಾದ ಮಹತ್ವ ಹಾಗೂ ಶಕ್ತಿಯನ್ನು ಯುವ ಸಮುದಾಯಕ್ಕೆ ಅರಿವು ಮೂಡಿಸುವ ಸಲುವಾಗಿ ಇಂದು ತಿರಂಗಾ ರಿಯಾಲಿ ಹಮ್ಮಿಕೊಳ್ಳಲಾಗಿದ್ದು ಉತ್ತಮವಾದ ಸ್ಪಂದನೆ ದೊರೆತಿದೆ. ಚಿಕ್ಕಬಳ್ಳಾಪುರ ಅಲ್ಲದೆ ಸುತ್ತಮುತ್ತಲಿನ ಅನೇಕ ಪ್ರದೇಶಗಳಿಂದ ಜನರು ಅಪಾರ ಸಂಖ್ಯೆಯಲ್ಲಿ ಸೇರಿದ್ದು ಕಾರ್ಯಕ್ರಮ ಯಶಸ್ವಿ ಕಂಡಿದೆ.ಇಂತಹ ಕಾರ್ಯಕ್ರಮಗಳ ಮುಖಾಂತರ ಯುವಕರಲ್ಲಿ ದೇಶಾಭಿಮಾನ ಹೆಚ್ಚು ಮಾಡಲು,ತಿರಂಗಾ ಮಹತ್ವವನ್ನು ಸಾರುವ ಪ್ರಯತ್ನ ಮಾಡಲಾಗಿದೆ. ಯುವಕರು ದೇಶದ ಬೆನ್ನೆಲುಬು ಅವರಿಗೆ ಉದ್ಯೋಗ ಸೃಷ್ಟಿ ಮಾಡುವ ಬಗ್ಗೆ ಚಿಂತನೆ ನಡೆಸಬೇಕಾಗಿದೆ ಎಂದರು.
ಚಿಕ್ಕಬಳ್ಳಾಪುರ ಅಲ್ಲದೆ ಇಂತಹ ಜಾಥ ಕಾರ್ಯಕ್ರಮ ಗೌರಿಬಿದನೂರು,ಯಲಹಂಕ ಹೊಸಕೋಟೆ,ಹಾಗೂ ಇನ್ನು ಅನೇಕ ಕಡೆ ಹಮ್ಮಿಕೊಂಡು ಯುವಕರಲ್ಲಿ ದೇಶಾಭಿಮಾನ ಬಗ್ಗೆ ಹುಮ್ಮಸ್ಸು ತುಂಬಿಸಲಾಗುವುದು.ಎಂ.ಎಸ್.ರಕ್ಷಾ ರಾಮಯ್ಯ ಅವರ ಸಾರಥ್ಯದಲ್ಲಿ ಚಿಕ್ಕಬಳ್ಳಾಪುರದ ಡಿವೈನ್ ಸಿಟಿ ಎಂ.ಜಿ.ರಸ್ತೆಯಿಂದ ಭೋಗ ನಂದೀಶ್ವರ ದೇವಸ್ಥಾನದವರೆಗೆ ತಿರಂಗಾ ಜಾಥ ಸಾಗಿತು ಬೃಹತ್ ಜನ ಸಮೂಹ ರಕ್ಷಾ ರಾಮಯ್ಯ ಅವರ ಜೊತೆಯಿತ್ತು.ದೇಶದ ಸಾರ್ವಭೌಮತೆ,ಸಮಗ್ರತೆ ಎತ್ತಿಹಿಡಿಯುವ ಘೋಷಣೆಗಳೊಂದಿಗೆ ಅಪಾರ ಜನಸ್ತೋಮ ರಿಯಾಲಿಯಲ್ಲಿ ಭಾಗವಹಿಸಿತ್ತು.ತ್ರಿವರ್ಣ ಧ್ವಜ ಹಿಡಿದು ಸಾಗಿದ ಜನ,ಸಂವಿಧಾನ,ತ್ರಿವರ್ಣ ಧ್ವಜದ ಮಹಿಮೆ,ಗಣರಾಜ್ಯೋತ್ಸವದ ವೈಶಿಷ್ಟ್ಯಗಳ ಕುರಿತು ಇದೇ ಸಂದರ್ಭದಲ್ಲಿ ಜನರಲ್ಲಿ ಅರಿವು ಮೂಡಿಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೇಶವರೆಡ್ಡಿ,ಮಾಜಿ ಜಿಲ್ಲಾಧ್ಯಕ್ಷ ನಂದಿ ಆಂಜಿನಪ್ಪ,ಅಡ್ಗಲ್ ಶ್ರೀಧರ್,ಬಿ. ಎಸ್. ರಫೀಉಲ್ಲಾ, ಪ್ರೇಸಂದ್ರ ದಯಾನಂದ್, ಯುವ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಕುಬೇರ್ ಅಚ್ಚು, ಮಂಚೆನಹಳ್ಳಿ ಯುವ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಮಾರುತಿ, ಕಾರ್ಮಿಕರ ಘಟಕದ ತಾಲ್ಲೂಕು
ಅಧ್ಯಕ್ಷ ಶೇಷಾದ್ರಿ,ಜಗದೀಶ್, ಶಂಕರ,
ಅಲ್ಲು ಅನೀಲ್, ಹಮೀಮ್,
ಮುಖಂಡರಾದ ಜಾವಿದ್ ಪಾಷಾ,ಜಾಫರ್,ಡ್ಯಾನ್ಸ್ ಶ್ರೀನಿವಾಸ್,ಮಂಡಿಕಲ್ಲು ಕುಪೇಂದ್ರ,ಇನ್ನು ಹಲವಾರು ಮುಖಂಡರು ಉಪಸ್ಥಿತರಿದ್ದರು.




