ಬ್ಯಾಟರಾಯನಪುರ : ಫೆ.19ರಂದು ನಡೆಯಲಿರುವ ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆ ಪ್ರಯುಕ್ತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಬಂಡಿಕೊಡಿಗೇಹಳ್ಳಿ ಗ್ರಾ.ಪಂ.ವತಿ ಯಿಂದ ಶನಿವಾರ ಆಯೋಜಿಸಿದ್ದ 2 ದಿನಗಳ ಕ್ರಿಕೆಟ್ ಪಂದ್ಯಾವಳಿಗೆ ಬಂಡಿಕೊಡಿಗೇಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಚೈತ್ರರಾಜಶೇಖರ್ ಚಾಲನೆ ನೀಡಿದರು. 

ನಂತರ ಅವರು ಮಾತನಾಡಿ ‘ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕ್ರಿಕೆಟ್ ಕ್ರೀಡಾ ಕೂಟವನ್ನು ಆಯೋಜಿಸಿದ್ದು, ಇತ್ತೀಚೆಗೆ ತಾನೆ ಬಂಡಿಕೊಡಿಗೇಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ಮಹದೇವಕೊಡಿಗೇಹಳ್ಳಿ ಗ್ರಾಮದಲ್ಲಿ ನಡೆದ ಬಾಲಕ ಮತ್ತು ಬಾಲಕಿಯರ ಕಬಡ್ಡಿ ಪಂದ್ಯಾವಳಿ ಯಶಸ್ವಿ ಯಾಗಿ ನೆರವೇರಿದ್ದು, ಫೆ.19ರಂದು ನಡೆಯಲಿರುವ ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆ ಪ್ರಯುಕ್ತ  ಇಂದು ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದೇವೆ. ಎರಡು ದಿನಗಳ ಕಾಲ ನಡೆಯಲಿರುವ ಈ ಕ್ರಿಕೆಟ್ ಪಂದ್ಯಾವಳಿ ಯಲ್ಲಿ ವಿಜೇತರಾದ ತಂಡಗಳಿಗೆ ಫೆ.19 ರಂದು ನಡೆಯಲಿರುವ ಸಂವಿಧಾನ ಜಾಗೃತಿ ಜಾಥಾ ರಥ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಟ್ರೋಫಿ, ಪ್ರಶಸ್ತಿ ಪತ್ರ ವಿತರಿಸಲಾಗುತ್ತದೆ. ಇಂದಿನ ಈ ಪಂದ್ಯಾವಳಿಯಲ್ಲಿ ಬಂಡಿಕೊಡಿಗೇಹಳ್ಳಿ, ಮೈಲನಹಳ್ಳಿ, ಮಹದೇವ ಕೊಡಿಗೇಹಳ್ಳಿ, ಹುಣಸೂರು, ಅರೇಬನ್ನಿ ಮಂಗಲ, ಕಾಡಯರಪನಹಳ್ಳಿ ಸೇರಿದಂತೆ ಒಟ್ಟು11 ತಂಡಗಳು ಪಾಲ್ಗೊಂಡಿದ್ದು, ಅತ್ಯಂತ ಉತ್ಸುಕತೆಯಿಂದ ತಮ್ಮ ಕ್ರೀಡಾ ಪ್ರತಿಭೆಯನ್ನು ಅನಾವರಣ ಗೊಳಿಸುತ್ತಿ ದ್ದಾರೆ, ಕ್ರೀಡೆಗೆ ಅಗತ್ಯವಾದ ಎಲ್ಲಾ ನೆರವು ಮತ್ತು ಸೌಕರ್ಯಗಳನ್ನು ಗ್ರಾ.ಪಂ.ವತಿಯಿಂದ ನೀಡಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಬಂಡಿಕೊಡಿಗೇ ಹಳ್ಳಿ ಗ್ರಾ.ಪಂ. ಅಧ್ಯಕ್ಷರಾದ ಚೈತ್ರರಾಜಶೇಖರ್, ಉಪಾಧ್ಯಕ್ಷ ರಾದ  ಬಿ.ಕೆ.ಮಂಜು, ಮಾಜಿ ಗ್ರಾ.ಪಂ.ಅಧ್ಯಕ್ಷರಾದ ಜಗದೀಶ್ ಎನ್., ಜನಾರ್ಧನ್ ಪಿ.,ಸದಸ್ಯರಾದ ಅನಿತಾ ನಾರಾಯಣ, ಆಶಾರವೀಂದ್ರ ಆಂಜಿನಪ್ಪ ಕೆ (ಮಯೂರ್), ಚೈತ್ರ ಪಿ ತಿಮ್ಮೇ ಗೌಡ, ಭಾರತಿ ನಾರಾಯಣಸ್ವಾಮಿ, ಮುನೇಗೌಡ, ಗಿರೀಶ್, ದೇವರಾಜ್, ನವೀನ್, ಸುಬ್ರಮಣಿ, ಪುಷ್ಪ ನಾರಾಯಣಸ್ವಾಮಿ, ಪವಿತ್ರ ಸುಬ್ರಮಣಿ, ಪವಿತ್ರ ಹರೀಶ್, ಮಂಜುನಾಥ್, ಶ್ವೇತಾ ಚನ್ನಕೇಶವ, ಜಯಲಕ್ಷ್ಮಮ್ಮ, ರಾಮಕೃಷ್ಣರಾಜು, ಅಮರನಾರಾ ಯಣಸ್ವಾಮಿ, ಕೃಷ್ಣಪ್ಪ , ಗಾಯಿತ್ರಿ ಬಸವರಾಜು, ಉಮಾಮುನಿರಾಜು, ಭಾಗ್ಯಲಕ್ಷ್ಮೀ ಚಂದ್ರಮುರಳಿ, ಬಿಜೆಪಿ ಮುಖಂಡ ಮುನಿರಾಜು(ಅ.ದ.ಕ್ರಿ.ಸ.), ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭಾರತಿ ಎ., ಕಾರ್ಯದರ್ಶಿ ಎ.ಟಿ.ಶಿವಣ್ಣ, ಕ್ರೀಡಾ ತರಬೇತುದಾರ ಮೋಹನ್, ಗ್ರಾ.ಪಂ.ಸಿಬ್ಬಂದಿ ಗಳಾದ ನಾಗರಾಜ್, ಮಂಜೇಶ್, ಮಂಜುನಾಥ್, ಮೇಘನಾ ಸೇರಿದಂತೆ ಗ್ರಾಮಸ್ಥರಿದ್ದರು.

Leave a Reply

Your email address will not be published. Required fields are marked *