
ದಿನಾಂಕ 10-2-2024 ರ ಶನಿವಾರ 1-00 ಗಂಟೆಯಿಂದ 3.00 ಗಂಟೆಯವರೆಗೆ ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರದ ಅಲ್ಯುಮಿನಿ ಸಮಿತಿ ಆಯೋಜಿಸಿದ್ದ “ಹಳೆ ವಿದ್ಯಾರ್ಥಿಗಳ ಸಮ್ಮಿಲನ” ಸಮಾರಂಭದಲ್ಲಿ 2017 ರಿಂದ 2023ರ ವರೆಗಿನ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿಗಳು ಆಗಮಿಸಿ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾಲೇಜಿನ ಘನತೆಯನ್ನು ಪ್ರಸ್ತಾಪ ಮಾಡಿದರು. ತಮ್ಮ ಸ್ನೇಹಿತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಮೂಹಕ್ಕೆ ಸೇರ್ಪಡೆ ಮಾಡಿಕೊಂಡು ಕಾಲೇಜಿಗೆ ಕೊಡುಗೆ ನೀಡುತ್ತೇವೆಂದು ತಿಳಿಸಿದರು. ಬಸವೇಶ್ವರ ವಾಣಿಜ್ಯ ಕಲಾವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಶೀಲಾದೇವಿ ಎಸ್ ಮಳೀಮಠರವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತ “ಹಳೆವಿದ್ಯಾರ್ಥಿಗಳು ಕಾಲೇಜಿನ ಕೇಂದ್ರಬಿಂದು- ಇಂತಹನಿರಂತರ ಸಮರ್ಪಕ ಕಾರ್ಯಕ್ರಮಗಳಿಂದ ವರ್ತಮಾನದ ವಿದ್ಯಾರ್ಥಿಗಳಿಗೆ ಮಾದರಿ ಆಗುತ್ತದೆ” ಎ೦ದು ತಿಳಿಸಿದರು. ಹಿರಿಯ ಅಧ್ಯಾಪಕ ವಿಜಯ ಕುಮಾರ ಪಾಟೀಲ್ – ಅವರು ಮಾತನಾಡಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ನಿಮಗೆಲ್ಲರಿಗೂ ವಂದನೆಗಳೆಂದು ಅವರನ್ನು ಪ್ರಶಂಸಿದರು. ಶ್ರೀಮತಿಲಲಿತ ತಾಂಡೂರ – ಶ್ರೀ ಗಿರೀಶ ವೈ- ಶ್ರೀಗಿರೀಶ ಪಿ ಹೆಚ್.ಕು -ರುಶಿಕ ಕು ನಿಖಿತಾ – ಕು-ಕಾವ್ಯ ಕು ಹಿಂದೂಜಾ – ಮುಖ್ಯ ಅತಿಥಿ – ಬೋಧಕೇತರ ವರ್ಗದವರೆಲ್ಲರೂ ಉಪಸ್ಥಿತರಿದ್ದರು. ಹೂಗುಚ್ಚ ನೀಡಿ ಹಿರಿಯ ವಿದ್ಯಾರ್ಥಿಗಳನ್ನು ಬರಮಾಡಿಕೊಂಡು ಸಿಹಿ ಹಂಚಿ – ಪುಷ್ಕಳವಾದ ಲಘು ಭೋಜನದೊಂದಿಗೆ ಕಾರ್ಯಕ್ರಮವು ಸಂಭ್ರಮದಿಂದ ನಡೆಯಿತು. ಕು.ಕಾವ್ಯ ರಾಜ್ಯಶಾಸ್ತ್ರ ಉಪನ್ಯಾಸಕರು ಸ್ವಾಗತ ಕೋರಿದರು ಹಾಗೂ ಕು.ಹಿಂದೂಜಾ ಹಿರಿಯ ವಿದ್ಯಾರ್ಥಿನಿ ಅರ್ಥಶಾಸ್ತ್ರದ ಉಪನ್ಯಾಸಕರು ವಂದನೆಗಳನ್ನು ಸಲ್ಲಿಸಿದರು. ಎನ್ ಎಸ್ ಎಸ್ ಅಧಿಕಾರಿ ಶ್ರೀಗಿರೀಶ ವೈ ಇತಿಹಾಸ ವಿಭಾಗದ ಉಪನ್ಯಾಸಕರು ವಿಶೇಷ ಮನರಂಜನಾ ಕಾರ್ಯಕ್ರಮದಿಂದ ವಿದ್ಯಾರ್ಥಿಗಳನ್ನು ರಂಜಿಸಿದರು. ಕು-ರುಸಿಕಾ – ಕು ಕಾವ್ಯ ಹಳೆವಿದ್ಯಾರ್ಥಿಗಳೊಡನೆ ಸಮೂಹ ಗಾಯನ ನಡೆಯಿಸಿಕೊಟ್ಟರು ಶ್ರೀಗಿರೀಶ ಪಿ ಹೆಚ್ ಅವರ ನಿರೂಪಣೆಯೊಂದಿಗೆ “ಸಮ್ಮಿಲನ” ಸಮಾಗಮ ಅರ್ಥಪೂರ್ಣವಾದ ಸಮ್ಮಿಲನವಾಗಿತ್ತು.