
ಬೆಂಗಳೂರಿನ ಉದಯಭಾನು ಕಲಾಸಂಘದ ಉನ್ನತ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಿದ್ದ ಹಳಗನ್ನಡ ಸಾಹಿತ್ಯ ತರಗತಿಗಳಲ್ಲಿ ದಿನಾಂಕ 6.2, 2024-7-2- 2024-13-2- 2024-14- 2 – 2024ರಂದು 5, 30ಯಿಂದ 7.00 ಗಂಟೆಯವರೆಗೆ ಪಠ್ಯಭಾಗ ಜ್ವಾಲೆಯ ಪ್ರಸಂಗವನ್ನು ವಿಶ್ಲೇಷಿಸುತ್ತ ಲಕ್ಷ್ಮೀಶನ ಜೈಮಿನಿ ಭಾರತವನ್ನು ವೈಯಕ್ತಿಕ ಅರ್ಥ ಗ್ರಹಿಕಾ ನೆಲೆಯಲ್ಲಿ ಓದಿಕೊಳ್ಳುತ್ತ – ಬೌದ್ಧಿಕ ಶಕ್ತಿಯ ಅನನ್ಯತೆಯ ಅಧ್ಯಯನ ಮಾಡಬೇಕೆಂದು ತಮ್ಮ ಚಿಂತನೆಯನ್ನು ಮಂಡಿಸಿದರು. ಆನ್ ಲೈನ್ ತರಗತಿಗಳಲ್ಲಿ ಇಂತಹ ಸಾಹಿತ್ಯಾತ್ಮಕ ಚಿಂತನೆಗಳನ್ನು ಕೇಳುಗರಿಗೆ ಮನ ಮುಟ್ಟಿಸಲು ಸಾಧ್ಯವಾದ ಸಂಪರ್ಕಕೊಂಡಿ ಎ೦ದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳಿಗೆ ಸಂವಾದದ ಮೂಲಕ ಬೋಧಿಸಿದ್ದು, ವಿದ್ಯಾರ್ಥಿಗಳ ವೈಚಾರಿಕ ದೃಷ್ಟಿಕೋನದ ಪ್ರಗತಿಗೆ ದಿಕ್ಸೂಚಿಯಾಯ್ತು. ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪ್ರಾಂಶುಪಾಲರಾದ ಡಾ. ಶೀಲಾದೇವಿ ಎಸ್ ಮಳೀಮಠರವರು ಕರ್ತವ್ಯ ನಿರ್ವಹಿಸುತ್ತಿದ್ದು ಜವಾಬ್ದಾರಿಗಳ ನಡುವೆಯೂ ‘ ಕನ್ನಡ ಉಪನ್ಯಾಸ ಅವರ ಬೋಧನಾ ಶೈಲಿ – ಹಳಗನ್ನಡ ಸಾಹಿತ್ಯದ ಬಗ್ಗೆ ಅವರ ವಿದ್ವತ್ತು ಮೆಚ್ಚುಗೆಗೆ ಪಾತ್ರವಾಯಿತ್ತೆಂದು ‘ ಕನ್ನಡ ಭಾಷೆ – ಸಾಹಿತ್ಯ ಸಂಸ್ಕೃತಿಯ ಬಗೆಗಿನ ಅವರ ಕಾಳಜಿಯನ್ನು ಪ್ರಶಂಸಿಸಲಾಯ್ತು