: ದಿನಾಂಕ 16- 2 – 2024 ರ ಶುಕ್ರವಾರದಂದು ಬಹುಶಿಸ್ತೀಯ ಮಹಿಳಾ ಘಟಕ ಕಾಲೇಜು ಮಲ್ಲೇಶ್ವರಂ ಬೆಂಗಳೂರು ಇವರು ಆಯೋಜಿಸಿರುವ ಎನ್ಎಸ್ಎಸ್ ವಾರ್ಷಿಕ ಶಿಬಿರದಲ್ಲಿ ಮೊದಲ ದಿನದ ಉಪನ್ಯಾಸ ಕಾರ್ಯಕ್ರಮದಲ್ಲಿ ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಕಾಲೇಜು ರಾಜಾಜಿನಗರ ಪ್ರಾಂಶುಪಾಲರಾದ ಡಾ. ಶೀಲಾ ದೇವಿಎಸ್ ಮಳೀಮಠರವರು- ಗ್ರಾಮಆತ್ಮ ನಿರ್ಭರತೆ ಎಂಬ ವಿಷಯವನ್ನು ಕುರಿತು ಸ್ವಯಂ ಸೇವಕರಿಗೆ ದೃಢನಿಲುವು ಗ್ರಾಮಆತ್ಮ ನಿರ್ಭರತೆಯಲ್ಲಿ ಸ್ವಾವಲಂಬನೆ ಆತ್ಮ ವಿಶ್ವಾಸದ ಪೂರ್ಣತ್ವವನ್ನು ತಿಳಿಸಿದರು. ಶ್ರೀಗಿರೀಶ ವೈ ಎನ್ ಎಸ್ಎಸ್ ಅಧಿಕಾರಿಗಳು ಸ್ವಯಂಸೇವಕರಿಗೆ ಚಟುವಟಿಕೆಗಳ ಮೂಲಕ ಸ್ವಯಂಸೇವಾ ತನವನ್ನು ಮನ ಮುಟ್ಟಿಸಿದರು. ಶ್ರೀಗಿರೀಶ ಪಿಹೆಚ್ ಅವರು ಮಾತನಾಡಿ ಆಯ್ದಕ್ಕಿ ಲಕ್ಕಮ್ಮನ ಸೇವಾ ಮನೋಭಾವವನ್ನು ತಿಳಿಸಿದರು. ಶ್ರೀಮೇಲಗವಿ ವೀರಸಿಂಹಾಸನ ಸಂಸ್ಥಾನ ಮಠ ಶಿವಗಂಗಾ ಕ್ಷೇತ್ರ ನೆಲಮಂಗಲ ತಾಲ್ಲೂಕು ಇಲ್ಲಿನ ಶ್ರೀ ಷ.ಬ್ರ ಡಾ. ಮಲಯ ಶಾಂತಮುನಿ ಶಿವಾಚಾರ್ಯ ಸಂಸ್ಥಾನಮಠ ಸ್ವಾಮಿಗಳು ಡಾ. ಶೀಲಾದೇವಿ ಎಸ್.ಮಳೀಮಠ ಅವರನ್ನು ಸನ್ಮಾಸಿದರು. ನಿಜ ಅರ್ಥದಲ್ಲಿ ಬಹುಶಿಸ್ತೀಯ ಶಿಬಿರ ಸಂಪನ್ನಗೊಂಡಿತು. ವಿದ್ಯಾರ್ಥಿಗಳಿಗೆ ಹಣ್ಣುಗಳ ನ್ನುವಿತರಿಸುವುದರ ಮೂಲಕ ಸ್ವಯಂ ಸೇವಕರಿಗೆ ಸೇವಾದಾನದ ಮಹತ್ವದ ಬಗ್ಗೆ ತಿಳುವಳಿಕೆ ಮೂಡಿಸಿದಂತಾಯ್ತು.. ಬಹುಶಿಸ್ತೀಯ ಮಹಿಳಾ ಘಟಕ ಕಾಲೇಜಿನ ಡಾ. ಶಿವಣ್ಣರವರು ಎನ್ಎಸ್ಎಸ್ ಶಿಬಿರಾಧಿಕಾರಿ ವಂದನೆ ಸಲ್ಲಿಸಿದರು. ಗಂಗಾ ತಂಡದ ನಾಯಕಿ ಕು.ರಾಧಿಕಾ ಸ್ವಾಗತವನ್ನು ಕೋರಿದರು ಉಪನ್ಯಾಸಕರಾದ ಶ್ರಾವ್ಯ – .ಐಶ್ವರ್ಯ , ಅಕ್ಷತಾ . ಯಶವಂತ್ ಮುಂತಾದವರು ಕಾಲೇಜಿನ ಪರವಾಗಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *