

ಬ್ಯಾಟರಾಯನಪುರ : ನಗರದ ಮಂಡೂರು ಸಮೀಪದ ಕಾಟುಗೊಲ್ಲಹಳ್ಳಿಯಲ್ಲಿರುವ ಕ್ರಿಸ್ ಕೆನಡಿಯನ್ ಗ್ಲೋಬಲ್ ಸ್ಕೂಲ್ನಲ್ಲಿ ನಿರ್ಮಿಸಿದ್ದ ನೂತನ ಈಜುಕೊಳವನ್ನು ಶಾಲೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್.ರಾಬರ್ಟ್ ಕ್ರಿಸ್ಟೋಫರ್ ಉದ್ಘಾಟಿಸಿದರು.
ಇದೇ ವೇಳೆ ಮಾತನಾಡಿದ ಅವರು ‘ಕಾಟುಗೊಲ್ಲಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಕ್ರಿಸ್ ಕೆನಡಿಯನ್ ಗ್ಲೋಬಲ್ ಸ್ಕೂಲ್ ಗ್ರಾಮೀಣ ಮಕ್ಕಳಿಗೆ ಜಾಗತಿಕ ಮಟ್ಟದ ಸೌಲಭ್ಯಗಳನ್ನು ಒಳಗೊಂಡ ಶಿಕ್ಷಣ ನೀಡಬೇಕು ಎಂಬ ಮಹತ್ವದ ಉದ್ದೇಶ ದಿಂದ ಆರಂಭಿಸಲಾಗೀದೆಯೇ ಹೊರತು, ವ್ಯಾವಹಾರಿಕ ದೃಷ್ಟಿಯಿಂದ ಶಾಲೆ ಆರಂಭಿಸಿಲ್ಲ.
ನೂತನ ಶಾಲೆಯಲ್ಲಿ ಅತ್ಯಾಧುನಿಕ ವಿಜ್ಞಾನ ಪ್ರಯೋಗಾಲಯ, ಕಂಪ್ಯೂಟರ್ ವ್ಯವಸ್ಥೆ ಸೇರಿದಂತೆ ಸಂಪೂರ್ಣ ಡಿಜಿಟಲೀಕರಣ ವ್ಯವಸ್ಥೆ ಇದೆ. ಕಲಿಕಾ ವಿಧಾನದಲ್ಲೂ ಸಹ ಡಿಜಿಟಲ್ ಕಲಿಕೆಗೆ ಆಧ್ಯತೆ ನೀಡಲಾಗಿದೆ. ಉಳಿದಂತೆ ಮಕ್ಕಳಿಗೆ ಕ್ರೀಡಾ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅತ್ಯಾಧುನಿಕ ಕ್ರೀಡಾಂಗಣ, ವಿಶೇಷವಾಗಿ ಸುರಕ್ಷಿತ ಕ್ರಿಕೆಟ್ ಕಲಿಕೆಗಾಗಿ ಹೊಸ ನೇಟ್ ಕ್ರಿಕೆಟ್ ಪಿಚ್ ವ್ಯವಸ್ಥೆ ಕಲ್ಪಿಸ ಲಾಗಿದೆ. ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಈಜುಕೊಳ ಹೊಂದಿರುವ ಏಕೈಕ ಶಾಲೆ ಎಂಬ ಹೆಗ್ಗಳಿಕೆಗೆ ಕ್ರಿಸ್ ಕೆನಡಿಯನ್ ಗ್ಲೋಬಲ್ ಶಾಲೆ ಭಾಜನವಾಗಿದೆ. ಗ್ರಾಮೀಣ ಮಕ್ಕಳಿಗೆ ಜಾಗತಿಕ ಮಟ್ಟದ ಶಿಕ್ಷಣ ನೀಡುವ ಧ್ಯೇಯದೊಂದಿಗೆ ಶಾಲೆಯನ್ನು ನಡೆಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಫಾಸ್ಟರ್ ಗಳಾದ ಶಿಬು, ಸೆಲ್ವರಾಜ್, ರವಿಮಣಿ, ಕ್ರಿಸ್ ಕೆನಡಿಯನ್ ಗ್ಲೋಬಲ್ ಶಾಲೆಯ ಟ್ರಸ್ಟಿ ಜೋಯ್ಸ್ ಕ್ರಿಸ್ಟೋಫರ್, ಶಾಲೆಯ ಪ್ರಾಂಶುಪಾಲರಾದ ಶೀಬಾ ಡೆನ್ನಿಸ್ ಸೇರಿದಂತೆ ಇನ್ನಿತರ ಗಣ್ಯರಿದ್ದರು.