
ಯಲಹಂಕ : ಬಾಬಾ ಸಾಹೇಬ್ ಅಂಬೇಡ್ಕರ್ ರವರು ಬರೆದಿರುವ ನಮ್ಮ ದೇಶದ ಸಂವಿಧಾನ ದಲಿತರು, ಹಿಂದುಳಿದವರು, ಅಲ್ಪ ಸಂಖ್ಯಾತರು ಮತ್ತು ತುಳಿತಕ್ಕೊಳ ಗಾದ ನಿಮ್ನ ಸಮುದಾಯಗಳ ಪಾಲಿಗೆ ಪವಿತ್ರ ಗ್ರಂಥವಾಗಿದ್ದು, ಅದರ ಉಳಿವಿಗಾಗಿ ದಲಿತರು, ಹಿಂದುಳಿದ ಸಮುದಾಯದ ಜನತೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸ ಬೇಕಿದೆ, ಇಲ್ಲದೇ ಹೋದರೆ ಬಿಜೆಪಿ ಪಕ್ಷದವರು ಮುಂದಿನ ದಿನಗಳಲ್ಲಿ ಸಂವಿಧಾನವನ್ನು ಬದಲಿಸುವ ಅವಕಾಶಗಳೇ ಹೆಚ್ಚಿವೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಯೋಜಕರು, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯ ಮುಖ್ಯಸ್ಥರಾದ ವಿ.ನಾಗರಾಜ್ ದಲಿತ ಸಂಘಟನೆಗಳ ಮುಖಂಡ ರಿಗೆ ಸಲಹೆ ನೀಡಿದರು.
ಯಲಹಂಕ ಮಾಧ್ಯಮ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ವತಿಯಿಂದ ಸೋಮವಾರ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ‘ಬಿಜೆಪಿ ಪಕ್ಷದ ಹಲವು ಮುಖಂಡರು ಹಲವಾರು ಬಾರಿ ಸಂವಿಧಾನ ಬದಲಾವಣೆಯ ಬಗ್ಗೆ ಏರುಧ್ವನಿಯಲ್ಲಿ ಮಾತನಾಡಿದ್ದಾರೆ, ಆದರೆ ಬಿಜೆಪಿ ಪಕ್ಷದ ವರಿಷ್ಠರು ಯಾರ ಮೇಲೂ ಶಿಸ್ತು ಕ್ರಮ ಕೈಗೊಳ್ಳದಿರುವುದನ್ನು ನೋಡಿದರೆ ಬಿಜೆಪಿ ಪಕ್ಷದ ಕಾರ್ಯ ಸೂಚಿಗಳಲ್ಲಿ ಸಂವಿಧಾನ ಬದಲಾವಣೆಯ ಅಜೆಂಡಾ ಇರುವುದು ಗೋಚರ ವಾಗುತ್ತದೆ. ಇಲ್ಲಿ ಸೇರಿರುವ ನಾವ್ಯಾರೂ ಕಾಂಗ್ರೆಸ್ ಮುಖಂಡ ರಲ್ಲ, ಆದರೆ ಸ್ವಾತಂತ್ರ್ಯ ನಂತರದ ಕಾಂಗ್ರೆಸ್ ನ ಆಶಯಗಳನ್ನು ಗಮನಿಸಿದಾಗ ಕಾಂಗ್ರೆಸ್ ನವರಿಗೆ ಜನಪರ, ಬಡವರ ಪರ, ಹಿಂದುಳಿದ ಮತ್ತು ತುಳಿತಕ್ಕೊಳಗಾದ ನಿಮ್ನ ಸಮುದಾಯಗಳ ಏಳಿಗೆಯ ಆಶಯ ವ್ಯಕ್ತವಾಗುತ್ತದೆ.
ನಾನು ಕಂಡಂತೆ ಬಿಜೆಪಿ ಯವರು ಶ್ರೀಮಂತರು, ಮೇಲ್ಜಾತಿಯವರು, ಉದ್ಯಮಿಗಳ ಪರವಾದ ನಿಲುವನ್ನು ಹೊಂದಿದ್ದು, ಅವರಿಂದ ಬಡವರು, ದಲಿತರ ಉದ್ಧಾರ ಕನಸಿನ ಮಾತಷ್ಟೇ ಎನಿಸುತ್ತದೆ. ರಾಜ್ಯದಲ್ಲಿ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವರಿಗೆ ಸೂರು, ಅನ್ನ, ಉಚಿತ ವಿದ್ಯುತ್, ಬಡ ಮಹಿಳೆಯರಿಗೆ 2 ಸಾವಿರ ರು., ಉಚಿತ ಪ್ರಯಾಣದ ಸೌಕರ್ಯ ನೀಡಿದ್ದು, ಇದು ಬಡವರ ಪಾಲಿಗೆ ಭರವಸೆಯ ಬೆಳಕು ಮೂಡಿಸಿದೆ. ಈ ನಿಟ್ಟಿನಲ್ಲಿ ನಾವು ರಾಜ್ಯಾದ್ಯಂತ ಪ್ರವಾಸ ಮಾಡಿ, ಕಾಂಗ್ರೆಸ್ ಬೆಂಬಲಿಸುವಂತೆ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಕೈಗೊಂಡಿದ್ದೇವೆ ಎಂದರು.
ದಲಿತಪರ ಚಳುವಳಿಗಾರರು, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಜಕ್ಕೂರು ರವಿಕುಮಾರ್ ಮಾತನಾಡಿ ‘ಕಾಂಗ್ರೆಸ್ ಪಕ್ಷಕ್ಕೆ ಬಡವರ ಪರವಾದ ಕಾಳಜಿಯಿದೆ, ದಲಿತೋದ್ಧಾರದ ಆಶಯವಿದೆ, ಸಂವಿಧಾನದ ಬಗ್ಗೆ ಅಪಾರ ಗೌರವ ವಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ನೀಡಿರುವ ಐದು ಗ್ಯಾರೆಂಟಿಗಳು ಬಡವರ ಪಾಲಿಗೆ ಪಂಚರತ್ನಗಳಾ ಗಿದ್ದು, ಬಡವರಿಗೆ ಸಾಕಷ್ಟು ಅನುಕೂಲವಾಗಿದೆ, ಈ ನಿಟ್ಟಿನಲ್ಲಿ ನಾವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದು ಈ ವಿಷಮ ಸಂದರ್ಭದಲ್ಲಿ ಅವಶ್ಯವಿದೆ ಎಂದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಯೋಜಕ ರಾಮಗೊಂಡನಹಳ್ಳಿ ರಮೇಶ್ ಮಾತನಾಡಿ ‘ಕೇಂದ್ರ ಬಿಜೆಪಿ ಸರ್ಕಾರ ಉದ್ಯಮಿಗಳ 16 ಲಕ್ಷ ಕೋಟಿ ರು. ಸಾಲ ಮನ್ನಾ ಮಾಡಿದೆ, ಆದರೆ ಬಡವರ ಬಾಳು ಬೆಳಗಿಸುವ ಯೋಜನೆಗಳನ್ನು ಜಾರಿಗೆ ತರುವಲ್ಲಿ ವಿಫಲವಾಗಿದೆ, ಈ ದಿಸೆಯಲ್ಲಿ ಬಡವರು, ದಲಿತರು, ತುಳಿತಕ್ಕೊಳಗಾದ ಜನರ ಕಲ್ಯಾಣದ ಆಶಯಕ್ಕಾಗಿ ದಲಿತ ಸಂಘಟನೆ ಗಳು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದೊಡ್ಡಬಳ್ಳಾ ಪುರದ ದಲಿತ ಸಂಘಟನೆಯ ಮುಖಂಡ ಮಂಜುನಾಥ್, ಚಿಕ್ಕ ಬಳ್ಳಾಪುರದ ಶ್ರೀಧರ್, ಬಾಗೇಪಲ್ಲಿ ಯ ಹೇಮಂತ್ ಕುಮಾರ್, ಗೌರಿಬಿದನೂರಿನ ಕಿನ್ನಣ್ಣ, ಸಿಂಗನಾಯಕನ ಹಳ್ಳಿಯ ಸುರೇಶ್ ಮೃತ್ಯುಂಜಯ, ಅಳ್ಳಾಳಸಂದ್ರದ ಎಸ್.ಮಾರುತಿ, ರಾಮಣ್ಣ ಸೇರಿದಂತೆ ವಿವಿಧ ಜಿಲ್ಲೆಗಳ ದಲಿತ ಮುಖಂಡರಿದ್ದರು.