
ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಜಾಲ ಹೋಬಳಿಯ ಗೋಪಾಲಪುರ ಗ್ರಾಮದ ಶ್ರೀ ವರಪ್ರದ ಅಭಯ ಆಂಜನೇಯಸ್ವಾಮಿ ಪ್ರತಿಷ್ಠಾಪನೆ ಯಾಗಿ 48 ದಿನಗಳು ಪೂರ್ಣ ಗೊಂಡ ಹಿನ್ನೆಲೆಯಲ್ಲಿ ಸೋಮವಾರ ಸ್ವಾಮಿಗೆ ಮಂಡಲ ಪೂಜೆ ಕಾರ್ಯ ವನ್ನು ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲಾಯಿತು.
ಮಂಡಲ ಪೂಜೆ ಪ್ರಯುಕ್ತ ವರಪ್ರದ ಅಭಯ ಆಂಜನೇಯಸ್ವಾಮಿಗೆ ವಿವಿಧ ಬಗೆಯ ಹೂಗಳಿಂದ ವಿಶೇಷ ಅಲಂಕಾರ ಮಾಡಿ, ಹೋಮ-ಹವನಾದಿ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸ ಲಾಯಿತು. ವಿಶೇಷ ಪೂಜೆ ನೆರವೇ ರಿಸಿದ ನಂತರ ಸ್ವಾಮಿಯನ್ನು ಗ್ರಾಮದ ರಾಜಬೀದಿಗಳಲ್ಲಿ ವೇಧಘೋಷ, ವಿವಿಧ ಜಾನಪದ ಕಲಾ ತಂಡಗಳಿಂದ ಮಂಗಳವಾಧ್ಯ, ನೃತ್ಯ ಪ್ರದರ್ಶನದ ಮೂಲಕ ಕಳಶ ಪ್ರದಕ್ಷಿಣೆ, ಮೆರವಣಿಗೆ ನೆರವೇರಿಸ ಲಾಯಿತು. ಮೆರವಣಿಗೆಯಲ್ಲಿ ಗೋಪಾಲಪುರ ಗ್ರಾಮದ ಸಹಸ್ರಾರು ಜನ ಭಕ್ತರು ಪಾಲ್ಗೊಂಡಿದ್ದು, ವರಪ್ರದ ಅಭಯ ಆಂಜನೇಯಸ್ವಾಮಿಗೆ ಉಘೇ ಉಘೇ ಎಂದು ಮುಗಿಲು ಮುಟ್ಟುವ ರೀತಿಯಲ್ಲಿ ಘೋಷಣೆ ಕೂಗಿ ಭಕ್ತಿ ಸಮರ್ಪಿಸಿದರು.
ಮಂಡಲ ಪೂಜೆಯ ಈ ವಿಶೇಷ ದೈವ ಕಾರ್ಯದಲ್ಲಿ ಗೋಪಾಲಪುರ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತ ಲಿನ ಗ್ರಾಮಗಳ ಗ್ರಾಮಸ್ಥರು, ವರಪ್ರದ ಅಭಯ ಆಂಜನೇಯ ಸ್ವಾಮಿ ಭಕ್ತರು ಪಾಲ್ಗೊಂಡಿದ್ದು, ಮಂಡಲಪೂಜೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.