ಬ್ಯಾಟರಾಯನಪುರ : ಏ.23ರಿಂದ ಆರಂಭವಾಗಿ 9 ದಿನಗಳ ಕಾಲ ವಿವಿಧ ದೇವತಾ ಕಾರ್ಯಗಳನ್ನು ನೆರವೇರಿಸುತ್ತಾ ಸಾಗಿ ಬಂದ ಹೆಬ್ಬಾಳ ದಾಸರಹಳ್ಳಿಯ ಕರದಮ್ಮ,  ಚೌಡೇಶ್ವರಿ, ಅನ್ನಪೂರ್ಣೇಶ್ವರಿ, ವೀರಭದ್ರೇಶ್ವರ ಸ್ವಾಮಿ ಕರಗ ಮಹೋತ್ಸವ ಕಂಬದರಾಯ ಸ್ವಾಮಿಯ ಸಂಕೇತವಾದ ಅತ್ತಿಮರದ ರೆಂಬೆಯನ್ನು ಬಾವಿಯಲ್ಲಿ ವಿಸರ್ಜನೆ ಮಾಡುವ ಮೂಲಕ ಗುರುವಾರ ತೆರೆ ಕಂಡಿತು.

ಕರಗ ಮಹೋತ್ಸವದ ಕೊನೆಯ ಶಾಸ್ತ್ರದ ಪ್ರಯುಕ್ತ ಕಂಬದರಾಯ ಸ್ವಾಮಿಗೆ  ಹರಿಶಣ ಲೇಪನ ಶಾಸ್ತ್ರ ಮಾಡಿ, ಗ್ರಾಮದ ನೂರಾರು ಮಹಿಳೆಯರು ಉಪವಾಸ ದೊಂದಿಗೆ ಗ್ರಾಮದಲ್ಲಿ ಮೆರವಣಿಗೆಯ ಮೂಲಕ ಸಾಗಿ ಕಂಬದರಾಯಸ್ವಾಮಿ ಸಂಕೇತವಾದ ಅತ್ತಿಮರದ ರಂಬೆಯನ್ನು ಬಾವಿಯಲ್ಲಿ ವಿಸರ್ಜನೆ ಮಾಡುವ ಮೂಲಕ ಕರಗಕ್ಕೆ ವಿದ್ಯಕ್ತವಾಗಿ ತೆರೆ ಎಳೆಯಲಾಯಿತು.

ಈ ವೇಳೆ ಗ್ರಾಮದ ಮುಖಂಡರು, ಕರವೇ ರಾಜ್ಯ ಉಪಾಧ್ಯಕ್ಷರಾದ ದಾ.ಕೃ.ದೇವರಾಜ್, ನರೇಂದ್ರ ಬಾಬು, ರಘುಕುಮಾರ್ ಮಂಜುನಾಥ್ ಸೇರಿದಂತೆ ಗ್ರಾಮದ ಹಲವು ಮುಖಂಡರು, ಮಾತೆಯರು ಸೇರಿದಂತೆ ಅಸಂಖ್ಯಾತ ಜನರಿದ್ದರು.

Leave a Reply

Your email address will not be published. Required fields are marked *