ಪಬ್ಲಿಕ್ ಪವರ್
ಯಲಹಂಕ ಸುದ್ದಿ

ಬ್ಯಾಟರಾಯನಪುರ : ಕ್ಷೇತ್ರದ ದಾಸರಹಳ್ಳಿಯ ಭುವನೇಶ್ವರಿ ನಗರದ ಭುವನೇಶ್ವರಿ ಪಾರ್ಕ್ ಬಳಿ ವೀರಶೈವ ವೇದಿಕೆಯ ವತಿಯಿಂದ ಶುಕ್ರವಾರ ಬಸವ ಜಯಂತಿ ಆಚರಿಸಲಾಯಿತು. ಬಸವ ಜಯಂತಿ ಪ್ರಯುಕ್ತ ಸಾರ್ವಜನಿಕ ರಿಗೆ ಪಾನಕ, ಕೋಸಂಬರಿ ವಿತರಿಸಿದರು. ಇದೇ ಸಂದರ್ಭದಲ್ಲಿ ವೀರಶೈವ ವೇದಿಕೆಯ ಅಧ್ಯಕ್ಷ ಜಿ.ಪಿ.ದಯಾನಂದ್, ಕಾರ್ಯದರ್ಶಿ ಪಿ.ಎನ್.ಚಂದ್ರಶೇಖರ್, ಖಜಾಂಚಿ ಮಲ್ಲಿಕಾರ್ಜುನ, ಪದಾಧಿಕಾರಿ ಗಳಾದ ವೈ.ಎಂ. ಪಾಟೀಲ್, ಕುರುವತ್ತಿ ಆನಂದ್ ಕುಮಾರ್, ಮಲ್ಲಿಕಾರ್ಜುನ್(ಎಚ್ ಎಂ ಟಿ),, ರುದ್ರಪ್ಪ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *