ಯಲಹಂಕ : ಹಿಂದೂ ಸಂಸ್ಕೃತಿ, ಭಾರತೀಯ ಉಪನಿಷತ್ತುಗಳ  ಪುನರುಜ್ಜೀವನಕ್ಕೆ ಆದಿ ಶಂಕರಾ ಚಾರ್ಯರ ಕೊಡುಗೆ ಸ್ಮರಣೀಯ ವಾದುದು ಎಂದು ವಿದ್ವಾನ್ ಶಶಿಧರ ಶಾಸ್ಯ್ರಿ ಅಭಿಪ್ರಾಯಪಟ್ಟರು.

ಯಲಹಂಕ ತಾಲ್ಲೂಕು ಬ್ರಾಹ್ಮಣ ಸಂಘ ಮತ್ತು ಗಾಯತ್ರಿ ಮಂದಿರ ಇವರ ಸಹಯೋಗದೊಂದಿಗೆ ಯಲಹಂಕದ ಬಜಾರ್ ರಸ್ತೆಯ ಬ್ರಾಹ್ಮಣರ ಬೀದಿಯಲ್ಲಿ ಭಾನುವಾರ ಆಯೋಜಿಸಿದ್ದ ಶಂಕರಾ ಚಾರ್ಯ, ರಾಮಾನುಜಾ ಚಾರ್ಯ ಮತ್ತು ಪರಶುರಾಮರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಪಾಲ್ಗೊಂಡು ಮಾತನಾಡಿದ ಅವರು ‘ಶಂಕರಾ ಚಾರ್ಯರು ಅದ್ವೈತ ವೇದಾಂತ ತತ್ವವನ್ನು ಆದ್ಯತೆ ಮೇಲೆ ಸ್ಥಾಪಿಸು ವುದರ ಜತೆಗೆ ಧರ್ಮದ ಹೆಸರಿನಲ್ಲಿ ಹರಡುತ್ತಿರುವ ವಿವಿಧ ರೀತಿಯ ತಪ್ಪು ಕಲ್ಪನೆಗಳನ್ನು ಹೋಗಲಾ ಡಿಸುವ ಕೆಲಸ ಮಾಡಿದರು. ಅಲ್ಲದೆ  ಶತಮಾನಗಳಿಂದ ಪಂಡಿತರು ಧರ್ಮಗ್ರಂಥ ಗಳ ಹೆಸರಿನಲ್ಲಿ ಜನರಿಗೆ ನೀಡುತ್ತಿದ್ದ ತಪ್ಪು ಶಿಕ್ಷಣದ ಬದಲಾಗಿ ಸರಿಯಾದ ಶಿಕ್ಷಣ ನೀಡುವ ಕೆಲಸವನ್ನು ಆದಿ ಶಂಕರಾ ಚಾರ್ಯರು ಕೈಗೊಂಡರು. ವೇದ, ಉಪನಿಷತ್ತು, ಹಿಂದೂ ಧಾರ್ಮಿಕ ಪರಂಪರೆಯ ಪುನರುಜ್ಜೀವನದ ನಿಟ್ಟಿನಲ್ಲಿ ಶಂಕರಾಚಾರ್ಯರು ಅಭೂತಪೂರ್ವ ಕೊಡುಗೆ ನೀಡಿದ್ದು ಅವರ ಅವಿಸ್ಮರಣೀಯ ಕೊಡುಗೆಯ ನಿಮಿತ್ತ ಶಂಕರಾ ಚಾರ್ಯರನ್ನು ದೇಶದ ಜನತೆ ಕಾಲಕಾಲಕ್ಕೂ ಪೂಜಿಸಿಕೊಂಡು, ಸ್ಮರಿಸಿಕೊಂಡು ಬರುತ್ತಿದ್ದಾರೆ ಎಂದರು.

ಕಾರ್ಯಕ್ರಮ ಉದ್ದೇಶಿಸಿ ವಿದ್ವಾನ್ ಕುಶಾಲ್ ಸಿಂಹ ಮಾತನಾಡಿ ‘ಶಂಕರಾಚಾರ್ಯರು ಹುಟ್ಟಿದ ಸರಿ ಸುಮಾರು 200 ವರ್ಷಗಳ ನಂತರ ಅದೇ ಶುಭ ದಿನ, ಶುಭ ಘಳಿಗೆ ಯಂದೇ ರಾಮಾನುಜಾ ಚಾರ್ಯರು ಜನಿಸಿದರು, ಹಲವು ವಿಚಾರಗಳಲ್ಲಿ ಶಂಕರಾಚಾರ್ಯರು ಮತ್ತು ರಾಮಾನುಜಾಚಾರ್ಯರಲ್ಲಿ ಸಾಮ್ಯತೆಗಳಿದ್ದು, ಶಂಕರಾಚಾರ್ಯ ರು ಅದ್ವೈತ ಸಿದ್ಧಾಂತ ಪ್ರತಿಪಾದಿಸಿ ದರು, ರಾಮಾನುಜಾ ಚಾರ್ಯರು ವಿಶಿಷ್ಟಾದ್ವೈತ ಸಿದ್ಧಾಂತ ಪ್ರತಿಪಾದಿ ಸಿದರು. ಅದ್ವೈತ ಮತ್ತು ವಿಶಿಷ್ಟಾ ದ್ವೈತ ಸಿದ್ಧಾಂಗಳಲ್ಲಿ ಅಂತಹ ಹೇಳಿ ಕೊಳ್ಳುವಂತಹ ವ್ಯತ್ಯಾಸಗಳೇನಿಲ್ಲಿ, ಪ್ರತಿಪಾದಿಸಿದ ಕಾಲಘಟ್ಟದಲ್ಲಿ ವ್ಯತ್ಯಾಸವಿದೆಯಷ್ಟೇ ಎಂದರು.

ಕಾರ್ಯಕ್ರಮದಲ್ಲಿ ಯಲಹಂಕ ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ವೈ.ಜಿ.ವೈದ್ಯನಾಥ ಶಾಸ್ತ್ರಿ, ಉಪಾಧ್ಯಕ್ಷರಾದ ವೈ.ಜಿ. ರಾಘವೇಂದ್ರರಾವ್, ಆರ್. ನಾಗರಾಜ್, ಪ್ರಧಾನ ಕಾರ್ಯದರ್ಶಿ ಗಳಾದ ಎಸ್. ಭೀಮಸೇನಾ ಚಾರ್ಯ, ಖಜಾಂಚಿ ಜಿ ವಿ ಪ್ರಭಾಕರ್, ಇತರ ಪದಾಧಿ ಕಾರಿಗಳಾದ ಟಿ.ಎಲ್. ಅರುಣ್ ಕುಮಾರ್, ಎಲ್.ಸಂಜೀವ ರಾವ್ ಸೇರಿದಂತೆ ಇನ್ನಿತರರಿದ್ದರು.

ಶಂಕರ, ರಾಮಾನುಜ ಮತ್ತುರ ಪರಶುರಾಮರ  ಜಯಂತಿ ಪ್ರಯುಕ್ತ ಯಲಹಂಕದ ಮುಖ್ಯ ಬೀದಿಗಳಲ್ಲಿ ಅವರ ಭಾವಚಿತ್ರಗಳೊಂದಿಗೆ ಬೃಹತ್ ಶೋಭಾಯಾತ್ರೆ ನಡೆಸಲಾಯಿತು.

ಯಲಹಂಕ : ಹಿಂದೂ ಸಂಸ್ಕೃತಿ, ಭಾರತೀಯ ಉಪನಿಷತ್ತುಗಳ  ಪುನರುಜ್ಜೀವನಕ್ಕೆ ಆದಿ ಶಂಕರಾ ಚಾರ್ಯರ ಕೊಡುಗೆ ಸ್ಮರಣೀಯ ವಾದುದು ಎಂದು ವಿದ್ವಾನ್ ಶಶಿಧರ ಶಾಸ್ಯ್ರಿ ಅಭಿಪ್ರಾಯಪಟ್ಟರು.

ಯಲಹಂಕ ತಾಲ್ಲೂಕು ಬ್ರಾಹ್ಮಣ ಸಂಘ ಮತ್ತು ಗಾಯತ್ರಿ ಮಂದಿರ ಇವರ ಸಹಯೋಗದೊಂದಿಗೆ ಯಲಹಂಕದ ಬಜಾರ್ ರಸ್ತೆಯ ಬ್ರಾಹ್ಮಣರ ಬೀದಿಯಲ್ಲಿ ಭಾನುವಾರ ಆಯೋಜಿಸಿದ್ದ ಶಂಕರಾ ಚಾರ್ಯ, ರಾಮಾನುಜಾ ಚಾರ್ಯ ಮತ್ತು ಪರಶುರಾಮರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಪಾಲ್ಗೊಂಡು ಮಾತನಾಡಿದ ಅವರು ‘ಶಂಕರಾ ಚಾರ್ಯರು ಅದ್ವೈತ ವೇದಾಂತ ತತ್ವವನ್ನು ಆದ್ಯತೆ ಮೇಲೆ ಸ್ಥಾಪಿಸು ವುದರ ಜತೆಗೆ ಧರ್ಮದ ಹೆಸರಿನಲ್ಲಿ ಹರಡುತ್ತಿರುವ ವಿವಿಧ ರೀತಿಯ ತಪ್ಪು ಕಲ್ಪನೆಗಳನ್ನು ಹೋಗಲಾ ಡಿಸುವ ಕೆಲಸ ಮಾಡಿದರು. ಅಲ್ಲದೆ  ಶತಮಾನಗಳಿಂದ ಪಂಡಿತರು ಧರ್ಮಗ್ರಂಥ ಗಳ ಹೆಸರಿನಲ್ಲಿ ಜನರಿಗೆ ನೀಡುತ್ತಿದ್ದ ತಪ್ಪು ಶಿಕ್ಷಣದ ಬದಲಾಗಿ ಸರಿಯಾದ ಶಿಕ್ಷಣ ನೀಡುವ ಕೆಲಸವನ್ನು ಆದಿ ಶಂಕರಾ ಚಾರ್ಯರು ಕೈಗೊಂಡರು. ವೇದ, ಉಪನಿಷತ್ತು, ಹಿಂದೂ ಧಾರ್ಮಿಕ ಪರಂಪರೆಯ ಪುನರುಜ್ಜೀವನದ ನಿಟ್ಟಿನಲ್ಲಿ ಶಂಕರಾಚಾರ್ಯರು ಅಭೂತಪೂರ್ವ ಕೊಡುಗೆ ನೀಡಿದ್ದು ಅವರ ಅವಿಸ್ಮರಣೀಯ ಕೊಡುಗೆಯ ನಿಮಿತ್ತ ಶಂಕರಾ ಚಾರ್ಯರನ್ನು ದೇಶದ ಜನತೆ ಕಾಲಕಾಲಕ್ಕೂ ಪೂಜಿಸಿಕೊಂಡು, ಸ್ಮರಿಸಿಕೊಂಡು ಬರುತ್ತಿದ್ದಾರೆ ಎಂದರು.

ಕಾರ್ಯಕ್ರಮ ಉದ್ದೇಶಿಸಿ ವಿದ್ವಾನ್ ಕುಶಾಲ್ ಸಿಂಹ ಮಾತನಾಡಿ ‘ಶಂಕರಾಚಾರ್ಯರು ಹುಟ್ಟಿದ ಸರಿ ಸುಮಾರು 200 ವರ್ಷಗಳ ನಂತರ ಅದೇ ಶುಭ ದಿನ, ಶುಭ ಘಳಿಗೆ ಯಂದೇ ರಾಮಾನುಜಾ ಚಾರ್ಯರು ಜನಿಸಿದರು, ಹಲವು ವಿಚಾರಗಳಲ್ಲಿ ಶಂಕರಾಚಾರ್ಯರು ಮತ್ತು ರಾಮಾನುಜಾಚಾರ್ಯರಲ್ಲಿ ಸಾಮ್ಯತೆಗಳಿದ್ದು, ಶಂಕರಾಚಾರ್ಯ ರು ಅದ್ವೈತ ಸಿದ್ಧಾಂತ ಪ್ರತಿಪಾದಿಸಿ ದರು, ರಾಮಾನುಜಾ ಚಾರ್ಯರು ವಿಶಿಷ್ಟಾದ್ವೈತ ಸಿದ್ಧಾಂತ ಪ್ರತಿಪಾದಿ ಸಿದರು. ಅದ್ವೈತ ಮತ್ತು ವಿಶಿಷ್ಟಾ ದ್ವೈತ ಸಿದ್ಧಾಂಗಳಲ್ಲಿ ಅಂತಹ ಹೇಳಿ ಕೊಳ್ಳುವಂತಹ ವ್ಯತ್ಯಾಸಗಳೇನಿಲ್ಲಿ, ಪ್ರತಿಪಾದಿಸಿದ ಕಾಲಘಟ್ಟದಲ್ಲಿ ವ್ಯತ್ಯಾಸವಿದೆಯಷ್ಟೇ ಎಂದರು.

ಕಾರ್ಯಕ್ರಮದಲ್ಲಿ ಯಲಹಂಕ ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ವೈ.ಜಿ.ವೈದ್ಯನಾಥ ಶಾಸ್ತ್ರಿ, ಉಪಾಧ್ಯಕ್ಷರಾದ ವೈ.ಜಿ. ರಾಘವೇಂದ್ರರಾವ್, ಆರ್. ನಾಗರಾಜ್, ಪ್ರಧಾನ ಕಾರ್ಯದರ್ಶಿ ಗಳಾದ ಎಸ್. ಭೀಮಸೇನಾ ಚಾರ್ಯ, ಖಜಾಂಚಿ ಜಿ ವಿ ಪ್ರಭಾಕರ್, ಇತರ ಪದಾಧಿ ಕಾರಿಗಳಾದ ಟಿ.ಎಲ್. ಅರುಣ್ ಕುಮಾರ್, ಎಲ್.ಸಂಜೀವ ರಾವ್ ಸೇರಿದಂತೆ ಇನ್ನಿತರರಿದ್ದರು.

ಶಂಕರ, ರಾಮಾನುಜ ಮತ್ತುರ ಪರಶುರಾಮರ  ಜಯಂತಿ ಪ್ರಯುಕ್ತ ಯಲಹಂಕದ ಮುಖ್ಯ ಬೀದಿಗಳಲ್ಲಿ ಅವರ ಭಾವಚಿತ್ರಗಳೊಂದಿಗೆ ಬೃಹತ್ ಶೋಭಾಯಾತ್ರೆ ನಡೆಸಲಾಯಿತು.

ಸುದ್ದಿ ಹಾಗೂ  ಜಾಹೀರಾತುವಾಗಿ ಸಂಪರ್ಕಿಸಿ

R hanumanthu     9845085793

7349337989

Leave a Reply

Your email address will not be published. Required fields are marked *