ಬ್ಯಾಟರಾಯನಪುರ : ನಗರದ ಬ್ಯಾಟರಾಯನಪು ರದಲ್ಲಿ ನಿರ್ಮಿಸ ಲಾಗಿದ್ದ ಸೂರ್ಯ ಹೈಟ್ಸ್ ನೂತನ ಕಟ್ಟಡವನ್ನು ಸಿರಿಗೆರೆಯ ತರಳ ಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಚಾರ್ಯ ಸ್ವಾಮೀಜಿಗಳು ಭಾನುವಾರ ಉದ್ಘಾಟಿಸಿದರು.

ನಂತರ ಅವರು ಮಾತನಾಡಿ ಸೂರ್ಯ ಡೆವಲಪರ್ಸ್ ನ ವ್ಯವಸ್ಥಾಪಕ ನಿರ್ದೇಶಕ ವಿಶ್ವನಾಥ್ ಬಾಥಿ ಕೇವಲ ಸ್ವಲಾಭವನ್ನು ಮಾತ್ರ ಯೋಚಿಸದೆ ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿ ಕೊಂಡಿದ್ದಾರೆ. ಮುಂದಿನ ಅವರ ಎಲ್ಲಾ ಯೋಜನೆಗಳು ಯಶಸ್ವಿ ಯಾಗಲಿ ತನ್ಮೂಲಕ ಅವರಿಂದ ಇನ್ನಷ್ಟು ಸಾಮಾಜಿಕ ಕಾರ್ಯಗಳು ನೆರವೇರುವಂತಾಗಲಿ ಎಂದು ಹಾರೈಸಿದರು. 

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ ‘ಲಾಭದ ಜೊತೆಗೆ ವಿಶ್ವಾಸರ್ಹತೆ ಗಳಿಸಿದರೆ ಬದುಕಿನ ಮೌಲ್ಯ ಹೆಚ್ಚಾಗುತ್ತದೆ. ಅದನ್ನು ಸೂರ್ಯ ಹೈಟ್ಸ್ ನ ವಿಶ್ವನಾಥ್ ಸಾಧಿಸಿ ತೋರಿಸಿದ್ದಾರೆ. ಸಮುದಾಯದ ಆರೋಗ್ಯ ಸುಧಾರಿಸುವ ದಿಸೆಯಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಿಸಿ ನೀಡುತ್ತಿರುವುದು ಪ್ರಶಂಸಾರ್ಹ ಕಾರ್ಯ ಎಂದರು.

ಮೌಲ್ಯ ಮತ್ತು ಬದ್ಧತೆಯೊಂದಿಗೆ ಉದ್ಯಮ ಆರಂಭಿಸಿ ದ್ದೇನೆ. ನಮ್ಮ ವಿಲ್ಲಾಗಳನ್ನು ಬುಕ್ ಮಾಡಿ ಕೊಳ್ಳುವ ಆರ್ಮಿ, ಏರ್ ಫೋರ್ಸ್ ನ ಸೈನಿಕರಿಗೆ ನೋಂದಣಿ ಯಲ್ಲಿ ವಿಶೇಷ ರಿಯಾಯಿತಿ ಕೊಡುವ ನಿರ್ಧಾರ ಮಾಡಿದ್ದೇವೆ ಸೂರ್ಯ ಡೆವಲಪರ್ಸ್ ಸದಾ ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸಲು ಬದ್ಧವಾಗಿರುತ್ತದೆ ಎಂದು ಸೂರ್ಯ ಡೆವಲಪರ್ಸ್ ನ  ವ್ಯವಸ್ಥಾಪಕ ನಿರ್ದೇಶಕ ವಿಶ್ವನಾಥ ಬಾಥಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್‌ ನ ನಿವೃತ್ತ ನ್ಯಾಯ ಮೂರ್ತಿ ಶಿವರಾಜ್ ವಿ.ಪಾಟೀಲ್, ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್, ಬೈರತಿ ಸುರೇಶ್, ಭಾಗವಹಿಸಿದ್ದರು.

Leave a Reply

Your email address will not be published. Required fields are marked *