ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಕೋಡಗಲಹಟ್ಟಿ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀರಾಮಾಂಜ ನೇಯ, ಓಂ ಶಕ್ತಿ, ಮಾರ್ಗದಾಂಬ, ಅಣ್ಣಮ್ಮ, ಮುತ್ಯಾಲಮ್ಮ, ಸಪಲಮ್ಮ, ಚೌಡೇಶ್ವರಿದೇವಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.

ಜಾತ್ರೆಯ ಪ್ರಯುಕ್ತ ಸೋಮವಾರ ಮತ್ತು ಮಂಗಳವಾರ ದೀಪಾರತಿ, ವಿಶೇಷ ಪೂಜೆ, ಮೆರವಣಿಗೆ ಸೇರಿದಂತೆ ವಿವಿಧ ದೇವತಾ ಕಾರ್ಯಗಳು ನೆರವೇರಿದವು.

ಬುಧವಾರ ಬೆಳಿಗ್ಗೆ ವಿವಿಧ ಜಾನಪದ ಕಲಾ ತಂಡಗಳ ನೃತ್ಯ, ಗಾಯನ ಪ್ರಮುಖ ಪ್ರದರ್ಶನದ ನಡುವೆ ಗ್ರಾಮದ ಬೀದಿಗಳಲ್ಲಿ ಗ್ರಾಮದೇವತೆಗಳಾದ ಅಣ್ಣಮ್ಮ, ಮುತ್ಯಾಲಮ್ಮ, ಸಪಲಮ್ಮ, ಚೌಡೇಶ್ವರಿದೇವಿ ದೇವರುಗಳ ಬೃಹತ್ ಮೆರವಣಿಗೆ ನೆರವೇರಿಸಲಾಯಿತು. ಜಾತ್ರೆಯ ಅಂಗವಾಗಿ ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು, ಗ್ರಾಮಸ್ಥರು ಜಾತ್ರಾ ಮಹೋತ್ಸವದಲ್ಲಿ ಉತ್ಸುಕತೆಯಿಂದ ಪಾಲ್ಗೊಂಡು, ದೈವಕೃಪೆಗೆ ಪಾತ್ರರಾದರು.

R Hanumanthu 9845085793

Leave a Reply

Your email address will not be published. Required fields are marked *