ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಜಾಲ ಹೋಬಳಿಯ ಮೀನುಕುಂಟೆ ಗ್ರಾ.ಪಂ.ನೂತನ ಅಧ್ಯಕ್ಷರಾಗಿ ಅದೇ ಗ್ರಾಮದ ಎಚ್ ಎನ್ ವಸಂತಕುಮಾರ್ ಆಯ್ಕೆಯಾಗಿದ್ದಾರೆ.

ಮೀನುಕುಂಟೆ ಗ್ರಾ.ಪಂ.ನಲ್ಲಿ ಒಟ್ಟು 21 ಜನ ಸದಸ್ಯರಿದ್ದು, ಇತ್ತೀಚೆಗೆ ತೆರವಾದ ಅಧ್ಯಕ್ಷ ಸ್ಥಾನದ ಆಯ್ಕೆಗಾಗಿ ಗುರುವಾರ ನಡೆದ ಚುನಾವಣೆಯಲ್ಲಿ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಚ್ ಎನ್ ವಸಂತ ಕುಮಾರ್ 12 ಮತಗಳನ್ನು ಪಡೆಯುವ ಮೂಲಕ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ಇವರ ಪ್ರತಿಸ್ಪರ್ಧಿಯಾಗಿ ಕಣದಲ್ಲಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿ 9 ಮತಗಳನ್ನು ಪಡೆದು ಪರಾಭವಗೊಂಡರು.

ಮೂಲತಃ ವಕೀಲರಾಗಿರುವ ಎಚ್ ಎನ್ ವಸಂತಕುಮಾರ್ ಈ ಹಿಂದೆ ಎರಡೂವರೆ ವರ್ಷಗಳ ಕಾಲ ಮೀನುಕುಂಟೆ ಗ್ರಾ.ಪಂ. ಉಪಾಧ್ಯಕ್ಷರಾಗಿ, ಅದೇ ಅವಧಿಯಲ್ಲಿ ಎರಡು ಬಾರಿ ಪ್ರಭಾರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಹಿನ್ನೆಲೆ ಹೊಂದಿದ್ದಾರೆ.

ನೂತನ ಅಧ್ಯಕ್ಷ ಎಚ್ ಎನ್ ವಸಂತಕುಮಾರ್ ರವರನ್ನು ಸಚಿವ ಕೃಷ್ಣಬೈರೇಗೌಡ ಅಭಿನಂದಿಸಿ ಶುಭ ಹಾರೈಸಿದರು.

ಈ ವೇಳೆ ನೂತನ ಅಧ್ಯಕ್ಷ ಎಚ್ ಎನ್ ವಸಂತಕುಮಾರ್ ಮಾತನಾಡಿ ‘ಬ್ಯಾಟರಾಯನಪುರ ಶಾಸಕರು, ಕಂದಾಯ ಸಚಿವರಾದ ಕೃಷ್ಣಬೈರೇಗೌಡ ರವರ ಸಹಕಾರ, ಬೆಂಬಲದಿಂದಾಗಿ ಗ್ರಾ.ಪಂ.ಅಧ್ಯಕ್ಷ ರಾಗಿ ಆಯ್ಕೆಯಾಗಲು ಸಾಧ್ಯವಾ ಗಿದೆ. ನನ್ನ ಅಧಿಕಾರಾವಧಿಯಲ್ಲಿ ಅವರ ಸಲಹೆ, ಮಾರ್ಗದರ್ಶನದಲ್ಲಿ ಮೀನುಕುಂಟೆ ಗ್ರಾ.ಪಂ‌.ವ್ಯಾಪ್ತಿಯ ಗ್ರಾಮಗಳ ಸರ್ವಾಂಗೀಣ ಪ್ರಗತಿಗೆ ಪ್ರಾಮಾಣಿಕವಾಗಿ ಶ್ರಮಿಸುವು ದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ರವಿ, ಬೈ.ನ.ಮೂರ್ತಿ, ಟಿ.ಪಿ.ಸತೀಶ್, ಸೌಮ್ಯ ವಿ., ಶುಭ, ಪುಷ್ಪಾ ಚಂದ್ರು, ಲಕ್ಷ್ಮಿ, ಶಿಲ್ಪಾ, ಶೈಲಜಾ, ರಂಜಿತಾ, ಹೇಮಾವತಿ, ಬ್ಯಾಟರಾಯನಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕೆ ಮಹೇಶ್ ಕುಮಾರ್, ಉಪಾಧ್ಯಕ್ಷ ಎಚ್ ಜಿ ಜೈಕುಮಾರ್, ಚಿಕ್ಕಜಾಲ ಗ್ರಾ.ಪಂ. ಅಧ್ಯಕ್ಷ ಅನಂತಕುಮಾರ್, ವಕೀಲ ರಾದ ಡಿ ನಾರಾಯಣಸ್ವಾಮಿ, ಚಿಕ್ಕಜಾಲ ಗ್ರಾ.ಪಂ.ಮಾಜಿ ಅಧ್ಯಕ್ಷ ಪಿ ಚಂದ್ರಪ್ಪ, ತಾ.ಪಂ.ಮಾಜಿ ಸದಸ್ಯ ಉದಯಶಂಕರ್, ಹಿರಿಯ ಕಾಂಗ್ರೆಸ್ ಮುಖಂಡ ಕೋಳಿಪುರ ಶಿವಣ್ಣ, ಹುತ್ತನಹಳ್ಳಿ ಮಧುಚಂದ್ರ, ಎಚ್ ಜಿ ವಿಜಯಕುಮಾರ್, ಚಿಕ್ಕಜಾಲ ಗ್ರಾ.ಪಂ‌.ಮಾಜಿ ಉಪಾಧ್ಯಕ್ಷ ರಚನ್ ಕುಮಾರ್, ಬಾಗಲೂರು ಗ್ರಾ.ಪಂ‌.ಮಾಜಿ ಅಧ್ಯಕ್ಷ ಜಗನ್ನಾಥ್ ಸೇರಿದಂತೆ ಇನ್ನಿತರರಿದ್ದರು.

ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ

R hanumanthu.    9845085793.       7349337989

Leave a Reply

Your email address will not be published. Required fields are marked *