ಬ್ಯಾಟರಾಯನಪುರ : ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಬ್ಯಾಟರಾಯನಪುರ ಕ್ಷೇತ್ರದ ಜಕ್ಕೂರಿನ ಪಿಕೆಎಸ್ ಶಾಲೆಯಲ್ಲಿ ರ್ಯಾಲಿ ನಡೆಸಿ ಪರಿಸರ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸ ಲಾಯಿತು.

ರ್ಯಾಲಿ ಉದ್ದೇಶಿಸಿ ಇಕೋ ವಾಚ್ ಸಂಸ್ಥೆಯ ಅಧ್ಯಕ್ಷ ಅಕ್ಷಯ್ ಹೆಬ್ಳೀಕರ್ ಮಾತನಾಡಿ ‘ಪರಿಸರ ಅತ್ಯಮೂಲ್ಯವಾದ ಸಂಪತ್ತು, ಮನುಷ್ಯನ ಪ್ರತಿ ಅಗತ್ಯವನ್ನು ಪೂರೈಸುವ ಸಂಪನ್ಮೂಲ ಪರಿಸರದಲ್ಲಿದೆ. ಆದರೆ ಪರಿಸರ ದಲ್ಲಿನ ವಿವಿಧ ಸಂಪನ್ಮೂಲಗಳನ್ನು ಮನುಷ್ಯ ಅಪವ್ಯಯ ಮಾಡದಂತೆ, ತನ್ನ ಅಗತ್ಯಕ್ಕೆ ತಕ್ಕಷ್ಟನ್ನು ಮಾತ್ರ ಬಳಸಿಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ಉಳಿಸಬೇಕಿದೆ ಎಂದರು.

ವಿಶ್ವ ಪರಿಸರ ದಿನಾಚರಣೆ ಅಂಗ ವಾಗಿ ಶಾಲೆಯ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಏರ್ಪಡಿಸ ಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅತಿಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಬೆಂಗಳೂರು ಕೃಷಿ ವಿ.ವಿ.ಯ ಪ್ಲಾಂಟ್ ಪೆಥಾಲಜಿ ವಿಭಾಗದ ಮುಖ್ಯಸ್ಥ ಡಾ.ವೈ.ಎನ್. ಸೋಮಶೇಖರ್, ಪಿಕೆಎಸ್ ಶಾಲೆಯ ಅಧ್ಯಕ್ಷ ಡಾ.ಪಿ.ಕೆ.ಶೆಟ್ಟಿ, ಶಾಲೆಯ ಪ್ರಾಂಶುಪಾಲರಾದ ರಾಧಾ ವಿಜಯಕುಮಾರ್ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿದ್ದರು.

ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ

ಆರ್ ಹನುಮಂತು

9845085793.     7349337989

Leave a Reply

Your email address will not be published. Required fields are marked *