
: ದಿನಾಂಕ 22-6-2024ರ ಶನಿವಾರದಂದು ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ ಬೆಂಗಳೂರು ಇಲ್ಲಿ ಶ್ರೀ ಬಸವೇಶ್ವರ ಅಧ್ಯಯನ ಪೀಠ ಹಾಗೂ ಸಂಶೋಧನಾ ಕೇಂದ್ರ ಹಸಿರು ಘಟಕ ಆಯೋಜಿಸಿದ್ದ ವಿಶ್ವ ಪರಿಸರ ಜಾಗೃತಿಗಾಗಿ ಜಾನಪದ ಜಾತ್ರೆ – 2024 ರ ಸಮಾರಂಭದಲ್ಲಿ ಮನೆಗೊಂದು ಮಗು ಒಂದು ಸಸಿ ಘೋಷಣೆಯೊಂದಿಗೆ ಜಾತ್ರೆಯನ್ನು ಹೊಂಬಾಳೆ ಅರಳಿಸುವುದರ ಮೂಲಕ ಚಾಲನೆ ನೀಡಿದ ಪರಿಸರ ಜಾಗೃತಿಗಾಗಿ ಹೂಡಿಕೆ ಮಾಡಬೇಕೆಂದು ಯುವಕರಿಗೆ ಕರೆ ನೀಡಿದರು.
ಜಾನಪದ ಜಾತ್ರೆಯಲ್ಲಿ ವಿದ್ಯಾರ್ಥಿಗಳೇ ನಿರ್ಮಾಣ ಮಾಡಿದ ದೇವಸ್ತಾನ – ನಾಗರ ಪಂಚಮಿ – ಹುತ್ತ – ಸಂತೆ – ದೇಸಿ ಆಹಾರ ಮಳಿಗೆಳು – ಬಸವಣ್ಣ ನಂದಿ ತೇರು – ಮೆರವಣಿಗೆ – ಅಶ್ವಾರೂಢ ಬಸವಣ್ಣನವರ ಪುತ್ತಳಿಗೆ ಪುಷ್ಪಾರ್ಚನೆ – ಗೋಶಾಲೆ – ಸಾಂಸ್ಕೃತಿಕ ಕಾರ್ಯಕ್ರಮಗಳು – ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರ ಸಹಯೋಗದಲ್ಲಿ ಡೊಳ್ಳು ಕುಣಿತ – ವೀರಗಾಸೆ – ತಮಟೆ ವೃಂದದವರಿಂದ ಅದ್ಧೂರಿ ಸಮಾರಂಭವನ್ನು ಆಯೋಜಿಸಲಾಗಿತ್ತು.
ಈ ಸಮಾರಂಭಕ್ಕೆ ಶ್ರೀಜಗ ಜ್ಯೋತಿ ಬಸವೇಶ್ವರ ಸಹಕಾರ ಸಂಘನಿ ಅಧ್ಯಕ್ಷರಾದ ಶ್ರೀಎಸ್ಎಸ್ ದೊಡ್ಡಣ್ಣವರ ಅಧ್ಯಕ್ಷತೆ ವಹಿಸಿದ್ದರು. ಅನೇಕ ಶಾಲಾ ಕಾಲೇಜು – ಸಂಘ ಸಂಸ್ಥೆಗಳಿಂದ ಸಹಕಾರ ಪಡೆಯಲಾಗಿತ್ತು. ಶ್ರೀಶರಣಬಸವೇಶ್ವರ ಪ್ರಶಸ್ತಿಯನ್ನು ಪ್ರಮುಖ ಗಣ್ಯರಿಗೆ ನೀಡಿ ಗೌರವಿಸಲಾಯ್ತು
ಆಡಳಿತ ಮಂಡಳಿಯ ನಿರ್ದೇಶಕರು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು – ಶಿಕ್ಷಕರು ಶಿಕ್ಷಕೇತರರು ಪ್ರಾಂಶುಪಾಲರುಗಳು – ಕಲಾತಂಡಗಳು – ವಿದ್ಯಾರ್ಥಿ ಸಂಚಾಲಕರು – ಸಮಾರಂಭವನ್ನು ಯಶಸ್ವಿಗೊಳಿಸಿದರು.