
ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮ ಕುರಿತು ಜಾಗೃತಿ ಕಾರ್ಯಕ್ರಮ :
ಬೆಂಗಳೂರು : ವಿಶ್ವ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಅಂಗವಾಗಿ ಅನಂತ ಫೌಂಡೇಷನ್ ವತಿಯಿಂದ ನಗರದ ಲಗ್ಗೆರೆಯ ರಕ್ಷಾ ಮಂದಿರ ಪುನಶ್ಚೇತನ ಕೇಂದ್ರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ಹಾನಿ, ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಅನಂತ ಫೌಂಡೇಷನ್ ನ ಅಧ್ಯಕ್ಷ ಪ್ರಭು ಎಚ್ ಪಟ್ಟದಾರ್, ಉಪಾಧ್ಯಕ್ಷೆ ರೇಣುಕಾ ಪ್ರಭು, ಕಾರ್ಯದರ್ಶಿ ಸುಮಂತ್ ಪಟ್ಟದಾರ್, ಜಂಟಿ ಕಾರ್ಯದರ್ಶಿ ಅಶ್ವಥ್ ಆರ್.,ಮುಖ್ಯ ಅಥಿತಿಗಳಾಧ
ಜಗದೀಶ್ ಜಿ.ಕುಂಬಾರ್, ಮನೋವೈದ್ಯ ಡಾ.ವಿನಯ್ ಕುಮಾರ್ ವಿ.ನಾಯಕ್ ಕರ್ನಾಟಕ ರಾಜ್ಯ ಪೊಲೀಸ್ ಕಂಪ್ಲೈಂಟ್ಸ್ ಅಥಾರಿಟಿಯ ಮೋಹನ್ ಕುಮಾರ್ ದಾನಪ್ಪ, ಕೇಂದ್ರ ಸರ್ಕಾರದ ಸ್ಟ್ಯಾಂಡಿಂಗ್ ಕೌನ್ಸಿಲ್ ಸದಸ್ಯೆ ಆತ್ಮ ಹಿರೇಮಠ್ ಸೇರಿದಂತೆ ಇನ್ನಿತರರಿದ್ದರು.