ಪ್ರಭಾರ ಅಧ್ಯಕ್ಷರಾಗಿ ಪದ್ಮಾವತಿ ಎ.ವೆಂಕಟರಾಜು ಆಯ್ಕೆ :

ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಜಾಲ ಹೋಬಳಿಯ ಬಾಗಲೂರು ಗ್ರಾ.ಪಂ.ಅಧ್ಯಕ್ಷರಾಗಿದ್ಧ ರೀತಿ ಮುನೇಗೌಡ ರವರ ವಿರುದ್ಧ ಗ್ರಾಮ ಪಂಚಾಯಿತಿ ಸದಸ್ಯರು‌ ಅವಿಶ್ವಾಸ ನಿರ್ಣಯ ಕೈಗೊಂಡಿರುವ ಹಿನ್ನೆಲೆ ಯಲ್ಲಿ ತೆರವಾದ ಸ್ಥಾನಕ್ಕೆ ಪದ್ಮಾವತಿ ಎ.ವೆಂಕಟರಾಜು ಅಧ್ಯಕ್ಷ(ಪ್ರಭಾರ) ರಾಗಿ ಸೋಮವಾರ ಆಯ್ಕೆಯಾಗಿದ್ದಾರೆ.

ಬಾಗಲೂರು ಗ್ರಾ.ಪಂ.ಯಲ್ಲಿ ಒಟ್ಟು 26 ಸದಸ್ಯರಿದ್ದು, ಈ ಪೈಕಿ 20 ಸದಸ್ಯರು ಅಧ್ಯಕ್ಷರಾಗಿದ್ದ ರೀತಿ ಮುನೇಗೌಡ ರವರ ಅವಿಶ್ವಾಸ ನಿರ್ಣಯದ ಪರ ಗೊತ್ತುವಳಿ ಮಂಡಿಸಿದ್ದು, ಈ ಅವಿಶ್ವಾಸ ನಿರ್ಣಯವನ್ನು ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿಗಳು ಅಂಗೀಕರಿಸಿರುವ ಹಿನ್ನೆಲೆಯಲ್ಲಿ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಹಾಲಿ ಉಪಾಧ್ಯಕ್ಷರಾಗಿರುವ ಪದ್ಮಾವತಿ ಎ.ವೆಂಕಟರಾಜು ರವರನ್ನು ಅಧ್ಯಕ್ಷ(ಪ್ರಭಾರ)ರನ್ನಾಗಿ ಆಯ್ಕೆ ಮಾಡಲಾಗಿದೆ.

Leave a Reply

Your email address will not be published. Required fields are marked *