
ಬಾಗಲೂರು ಗ್ರಾ.ಪಂ.ಅಧ್ಯಕ್ಷರಾಗಿ ಎ.ಕೆಂಪೇಗೌಡ ಆಯ್ಕೆ :
ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಜಾಲ ಹೋಬಳಿಯ ಬಾಗಲೂರು ಗ್ರಾ.ಪಂ.ನೂತನ ಅಧ್ಯಕ್ಷರಾಗಿ ಅದೇ ಗ್ರಾಮದ ಎ.ಕೆಂಪೇಗೌಡ ಆಯ್ಕೆಯಾಗಿದ್ದಾರೆ.
ಬಾಗಲೂರು ಗ್ರಾ.ಪಂ.ಯಲ್ಲಿ ಒಟ್ಟು 26 ಸದಸ್ಯರಿದ್ದು, ಗುರುವಾರ ನಡೆದ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಎ.ಕೆಂಪೇಗೌಡ 18 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆ ಯಾದರು, ಪ್ರತಿಸ್ಪರ್ಧಿಯಾಗಿ ಕಣದಲ್ಲಿದ್ದ ಬಿ.ಜಿ.ನಟರಾಜ್ 4 ಮತಗಳನ್ನು ಪಡೆದು ಪರಾಭವ ಗೊಂಡರು. ನಾಲ್ವರು ಸದಸ್ಯರು ಮತದಾನ ಪ್ರಕ್ರಿಯೆಯಿಂದ ದೂರ ಉಳಿದರು.
ರಜಾಕ್ ಸಾಬ್ ಪಾಳ್ಯದ ರಫಿಯಾ ಸುಲ್ತಾನ್ ದಸ್ತಗೀರ್ 19 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಇವರ ಪ್ರತಿಸ್ಪರ್ಧಿಯಾಗಿ ಕಣದಲ್ಲಿದ್ದ ಪರ್ವಿನ್ ತಾಜ್ ಬಾಬಾಜಾನ್ ಕೇವಲ 2 ಮತಗಳನ್ನು ಪಡೆದು ಪರಾಭವಗೊಂಡರು.1ಮತ ತಿರಸ್ಕೃತವಾಗಿದ್ದು, ಯಥಾ ರೀತಿ ನಾಲ್ವರು ಸದಸ್ಯರು ಮತದಾನ ದಿಂದ ದೂರ ಉಳಿದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಗ್ರಾ.ಪಂ.ಇತರೆ ಸದಸ್ಯರು ಮತ್ತು ಮುಖಂಡರು ಗೌರವ ಸನ್ಮಾನ ನೀಡಿ ಅಭಿನಂದಿಸಿದರು. ಇದೇ ಸಂದರ್ಭ ದಲ್ಲಿ ಗ್ರಾ.ಪಂ.ಸದಸ್ಯರಾದ ಹೇಮಲತಾ ಅನಿಲ್ ಕುಮಾರ್, ಬಿ.ಎಸ್.ಪ್ರಭುಸ್ವಾಮಿ, ಧನಂಜಯ ಬಿ., ಆಂಜಿನಮ್ಮ ಸಲ್ಲಪ್ಪ, ವೀಣಾ ಎಂ.ಶಿವಣ್ಣ, ಬಿ.ಸಿ.ನಾಗರಾಜು, ಬಿ.ಎಸ್.ಸುಧೀಂದ್ರ, ಸೈಯದ್ ಶಬ್ಬೀರ್, ಖುತೇಜಾ ನೂರುಲ್ಲಾ, ಇಸ್ಮಾಯಿಲ್ ಜಬೀವುಲ್ಲಾ ಖಾನ್, ಸಂತೋಷ್ ಕುಮಾರ್ ಬಿ., ಪರ್ಜಾನಾ ಅಹಮದ್, ಮುನಿವಜ್ರಮ್ಮ ಮುನಿನಾರಾಯಣಪ್ಪ, ಲಕ್ಷ್ಮಮ್ಮ ಗಂಗಾಧರ್, ನಾಗವೇಣಿ ಪಿಳ್ಳೇಗೌಡ ಸೇರಿದಂತೆ ಇನ್ನಿತರರಿದ್ದರು.