ಸಂಘಟನೆಯ ಶಕ್ತಿ ಇದ್ದರೆ ಮಾತ್ರ ಸ್ವಯಂ ಉದ್ಯಮ ಸಾಧ್ಯ. ಪ್ರಾಂಶುಪಾಲೆ ಡಾ. ಶೀಲಾ ದೇವಿ ಎಸ್ ಮಳಿಮಠ ರವರ ಅಭಿಮತ
ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯದಲ್ಲಿ 2024 – 25 ನೇ ಸಾಲಿನ ನೂತನ ವಿದ್ಯಾರ್ಥಿಗಳ ಪ್ರಾರಂಭದ ದಿನದ ಇಂಡಕ್ಷನ್ ಕಾರ್ಯಕ್ರಮದಲ್ಲಿ “ಸಂಘಟನಾತ್ಮಕ ಕೌಶಲ್ಯ ವಿಷಯವನ್ನು ಕುರಿತು ಡಾ. ಎಂ ಪುಟ್ಟರಾಜು ಅವರು ವಿದ್ಯಾರ್ಥಿಗಳಿಗೆ ನಾಯಕತ್ವ ಸಮಾಜದ ಬಗ್ಗೆ ಪ್ರೀತಿ ಪ್ರೇಮವನ್ನು ಕುರಿತು ಪೇರಕ ನುಡಿಗಳನ್ನಾಡಿದರು.
ಡಾ. ಶೀಲಾ ದೇವಿ ಎಸ್ ಮಳೀಮಠ ಪ್ರಾಂಶುಪಾಲರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಸಂಘಟನೆಯ ಶಕ್ತಿ ವಿದ್ಯಾರ್ಥಿಗಳಲ್ಲಿ ಮನಃ ಪೂರ್ವಕವಾಗಿ ಬಂದಾಗ ಮಾತ್ರ ಸ್ವಯಂ ಉದ್ಯಮಿಗಳಾಗಲು ಸಾಧ್ಯವಾಗುತ್ತದೆ. ಸಂಘಟನಾತ್ಮಕ ಕೌಶಲ್ಯ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಅದನ್ನು ನಾಯಕತ್ವದೆಡೆಗೆ ಹೊರಳಿಸಲು ಕೌಶಲ್ಯದ ಅವಶ್ಯಕತೆ ಇದೆ ಎಂದರು. ವಿಶ್ವಮಾನವ ಸಾಂಸ್ಕೃತಿಕ ಪ್ರತಿಷ್ಠಾನ ಸಾಧಕರಿಗೆ ಪ್ರಶಸ್ತಿ ನೀಡುವುದರ ಮೂಲಕ ವಿದ್ಯಾರ್ಥಿಗಳನ್ನು ಶಿಕ್ಷಕರನ್ನು – ಶಿಕ್ಷಕೇತರರನ್ನು ಗೌರವಿಸಿದ್ದು ಶ್ಲಾಘನೀಯ ಎಂದು ತಿಳಿಸಿದರು
ಶ್ರೀಜಗಜ್ಯೋತಿ ಬಸವೇಶ್ವರ ಸಹಕಾರ ಸಂಘದ ನಿರ್ದೇಶಕರಾದ ಶ್ರೀ ಶಶಿಕಾಂತ್ ಕುಲಕರ್ಣಿ ಯವರು ಪಾಲ್ಗೊಂಡು ಬೋಧಕ ಬೋಧಕೇತರ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ತ ವಿತರಿಸಿದರು ಶಿಕ್ಷಕರತ್ನ – ಕಲಾರತ್ನ -ಸಾಹಿತ್ಯಸಂಸ್ಕೃತಿ, ಪ್ರಶಸ್ತಿ ನೀಡಿ ಗೌರವಿಸಲಾಯ್ತು. ವಿಶ್ವಮಾನವ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದು ವಿಶೇಷವಾಗಿತ್ತು

Leave a Reply

Your email address will not be published. Required fields are marked *