ಕೋಲಾರ :- ಸಂಘಗಳನ್ನು ರಚಿಸಿ ಸಕಾರಾತ್ಮಕವಾಗಿ ನಿರಂತರ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗುವ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಕರೆ ನೀಡಿದರು.
ನಗರದ ಕನಕ ಮಂದಿರದಲ್ಲಿ ಶನಿವಾರ ರಾಜ್ಯ ಕನಕ ನೌಕರರ ಸಂಘ ಜಿಲ್ಲಾ ಶಾಖೆಗೆ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ತಟಸ್ಥರಾಗದೆ ಸಂಘದ ಅಡಿಯಲ್ಲಿ ನಾನಾ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸದಸ್ಯರ ಏಳಿಗೆಗೆ, ಕುಂದು ಕೊರತೆಗಳಿಗೆ ಹಾಗೂ ಸಮಸ್ಯೆಗಳಿಗೆ ದನಿಯಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಕನಕ ನೌಕರರ ಸಂಘದ ಅಭಿವೃದ್ಧಿಗಾಗಿ ನನ್ನ ಸಹಕಾರ ಬೆಂಬಲ ಸದಾ ಇರುತ್ತದೆ. ಸಂಘಕ್ಕಾಗಿ ಪ್ರತಿಯೊಬ್ಬ ಸದಸ್ಯರು ತಮ್ಮ ಅಮೂಲ್ಯವಾದ ಸಮಯವನ್ನು ನೀಡಿ ಸಂಘ ದೊಡ್ಡ ಮಟ್ಟದಲ್ಲಿ ಬೆಳೆಯುವ ರೀತಿ ಮಾಡಬೇಕು ಎಂದ ಅವರು, ನೂತನ ಪದಾಧಿಕಾರಿಗಳಿಗೆ ಶುಭ ಕೋರಿದರು.
ರಾಜ್ಯಮಟ್ಟದಲ್ಲಿ ಪತ್ರಕರ್ತರನಾಗಿ ಸೇವೆ ಸಲ್ಲಿಸುವ ವೇಳೆ ನನ್ನ ಕರ್ತವ್ಯವನ್ನು ಮೆಚ್ಚಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಮಾಧ್ಯಮ ಸಲಹೆಗಾರನಾಗಿ ನೇಮಕ ಮಾಡಿ, ಸಂಪುಟ ದರ್ಜೆಯ ಸ್ಥಾನಮಾನ ನೀಡಿದ್ದಾರೆ. ನಮ್ಮ ಕೆಲಸ ಇಷ್ಟಪಟ್ಟು ಮಾಡಿದರೆ ಉತ್ತಮ ಸ್ಥಾನಮಾನ ಸಿಗುತ್ತದೆ ಎಂದು ಹೇಳಿದರು.
ಈ ವೇಳೆ ಜಿಲ್ಲಾ ಕನಕ ನೌಕರ ಸಂಘದ ಗೌರವ ಸದಸ್ಯತ್ವವನ್ನು ಪಡೆದುಕೊಂಡುರು.
ಕುರುಬ ಸಮಾಜದ ಅಭಿವೃದ್ಧಿಗಾಗಿ ಸರ್ಕಾರವು ಅಭಿವೃದ್ಧಿ ನಿಗಮ ರಚಿಸಿ, ಹಣ ಮೀಸಲಿಡಬೇಕು. ಬೇರೆ ಎಲ್ಲಾ ಸಮುದಾಯದ ಅಭಿವೃದ್ಧಿ ನಿಗಮಗಳು ರಚಿಸಲಾಗಿದೆ. ಹಣ ಸಹ ಮೀಸಲಿಡಲಾಗಿದೆ. ನಮ್ಮ ಸಮಾಜದ ಉದ್ದಾರಕ್ಕಾಗಿ ಸರ್ಕಾರ ಒಳ್ಳೆ ತೀರ್ಮಾನ ತೆಗೆದುಕೊಳ್ಳಬೇಕು. ಅಭಿವೃದ್ಧಿ ನಿಗಮ ರಚಿಸುವಂತೆ ಮುಖ್ಯಮಂತ್ರಿಗಳಿಗೆ ಆಪ್ತರಾಗಿರುವ ನೀವು ಸಿದ್ದರಾಮಯ್ಯ ಅವರಿಗೆ ಮನವಿಯನ್ನು ತಿಳಿಸಿ, ಅಭಿವೃದ್ಧಿ ನಿಗಮ ಮಾಡುವಂತೆ ಒತ್ತಾಯಿಸಬೇಕು ಎಂದು ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ತಂಬಳ್ಳಿ ಮುನಿಯಪ್ಪ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್ ಅವರಿಗೆ ಮನವಿ ಮಾಡಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಕನಕ ನೌಕರರ ಸಂಘದ ಅಧ್ಯಕ್ಷ ಬಿ.ಎಂ.ನಾರಾಯಣಸ್ವಾಮಿ, ಎರಡು ದಶಕಗಳಿಂದ ಕನಕ ನೌಕರರ ಸಂಘವು ವಿವಿಧ ರೀತಿಯ ಚಟುವಟಿಕೆಗಳು ನಡೆಸಿಕೊಂಡು ಬರುತ್ತಿದ್ದು, ಸಂಘ ರಚಿಸಲು ಶಿಕ್ಷಕ ದಿ.ತಮ್ಮಣ್ಣ ಶ್ರಮವಹಿಸಿದ್ದಾರೆ. ಹಿರಿಯರ ಮಾರ್ಗದರ್ಶನದಲ್ಲಿ ಸಂಘವನ್ನು ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆಸಿಕೊಂಡು ಹೋಗಲು ಎಲ್ಲಾ ಪದಾಧಿಕಾರಿಗಳು ಒಗ್ಗೂಡಿ ಕೆಲಸ ಮಾಡಬೇಕಾಗಿದೆ. ನಿಮ್ಮೆಲ್ಲರ ಸಹಕಾರ ಇದ್ದರೆ, ಸಂಘವನ್ನು ಒಳ್ಳೆಯ ರೀತಿಯ ಬೆಳವಣಿಗೆ ಮೂಲಕ ಎಲ್ಲರಿಗೂ ಸಹಕಾರವಾಗುವಂತೆ ಸಂಘವನ್ನು ಕಟ್ಟಿ ಬೆಳೆಸೋಣ ಎಂದರು.
ಕರ್ನಾಟಕ ರಾಜ್ಯ ಕನಕ ನೌಕರರ ಸಂಘದ ಪದಾಧಿಕಾರಿಗಳು ಜಿಲ್ಲಾಧ್ಯಕ್ಷರಾಗಿ ಬಿ.ಎಂ. ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಿ.ಆರ್. ಶ್ರೀರಾಮೇಗೌಡ, ಖಜಾಂಚಿ ಬಿ. ಹರೀಶ್, ಕಾರ್ಯಾಧ್ಯಕ್ಷ ಎಂ.ಎ.ನಾರಾಯಣಸ್ವಾಮಿ, ಗೌರವಾಧ್ಯಕ್ಷರಾಗಿ ಲೋಕೇಶ್ ಎನ್.ವಿ. ಉಪಾಧ್ಯಕ್ಷರು ಶಂಕರೇಗೌಡ. ಈ. ನಂದೀಶ್.ಎ. ಪಂಪಾವತಿ, ಎಂ.ರಾಮಚಂದ್ರಪ್ಪ, ಸಿ.ಎಂ.ಪ್ರಕಾಶ್, ಬಿ.ಪಿ. ಸತೀಶ್, ಆಶ್ವಥ್ ಗೌಡ, ಸುಮಾರಾಣಿ, ಸುಗುಣ.ಆರ್. ವಿ.ಶಾರದಮ್ಮ, ಕೆ.ಜಿ.ಕವನ. ಸಹಕಾರ್ಯದರ್ಶಿಯಾಗಿ ಎಂ.ಚಂದ್ರೇಗೌಡ, ಗೋವಿಂದಗೌಡ.ಕೆ.ಎನ್. ಎನ್.ತುಳಿಸಿಪ್ರಸಾದ್, ಸಂಘಟನಾ ಕಾರ್ಯದರ್ಶಿಯಾಗಿ ಎನ್.ಶಂಕರ್. ಎಂ.ಮುರಳಿಧರ, ಕೆ.ಎನ್.ವಸಪ್ಪ, ಎನ್.ರಮೇಶ್ ಬಾಬು, ಎನ್.ರಾಕೇಶ್, ವಿ.ಮಂಜುನಾಥ್, ಪತ್ರಿಕಾ ಕಾರ್ಯದರ್ಶಿ ಎ.ಎಮ್. ಸುರೇಶ್ಕುಮಾರ್, ಲೆಕ್ಕಪರಿಶೋಧಕರು.ಎಂ.ರಮೇಶ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ರವಿ ಎಂ. ಕೆ.ಸಿ.ನಾರಾಯಣಸ್ವಾಮಿ, ಇ.ಶಿವಕುಮಾರ್, ರಾಮಪ್ಪ, ಶಿವಪ್ರಕಾಶ್, ಕೆ.ಗೋಪಿನಾಥ್, ಉಮಾರಾಣಿ, ಡಿ.ಆರ್.ವೆಂಕಟರಾಮೇಗೌಡ, ಡಿ.ಟಿ.ಶಂಕರೇಗೌಡ, ಆರ್.ಪರಮೇಶಪ್ಪ, ಮುನಿರಾಜು ಇತರರು ನೂತನ ಪದಾಧಿಕಾರಿಗಳಾಗಿ ಪದಗ್ರಹಣ ಮಾಡಿದರು.
ಈ ಸಂದರ್ಭದಲ್ಲಿ ಮುಖ್ಯ ಅಥಿತಿಗಳಾಗಿ ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಅಪ್ಪಯ್ಯಗೌಡ, ನಿಕಟಪೂರ್ವ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಮಂಜುನಾಥ್, ಶಿಕ್ಷಣಾಧಿಕಾರಿ ಸಿ.ಎನ್.ಗೋವಿಂದಪ್ಪ, ಕೆಎಸ್ಆರ್ಟಿಸಿ ಮುನಿಯಪ್ಪ, ನಾಗಭೂಷಣ್, ಎಲ್.ರಾಮಕೃಷ್ಣಪ್ಪ, ಕೆ.ವಿ.ಪ್ರಭಾಕರ್ ರವರ ಕುಟುಂಬದವರು ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯ ಕನಕ ನೌಕರರ ಸಂಘ ಜಿಲ್ಲಾ ಶಾಖೆಗೆ ನೂತನ ಪದಾಧಿಕಾರಿಗಳ ಪದಗ್ರಹಣ
ಕೋಲಾರ :- ಸಂಘಗಳನ್ನು ರಚಿಸಿ ಸಕಾರಾತ್ಮಕವಾಗಿ ನಿರಂತರ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗುವ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಕರೆ ನೀಡಿದರು.
ನಗರದ ಕನಕ ಮಂದಿರದಲ್ಲಿ ಶನಿವಾರ ರಾಜ್ಯ ಕನಕ ನೌಕರರ ಸಂಘ ಜಿಲ್ಲಾ ಶಾಖೆಗೆ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ತಟಸ್ಥರಾಗದೆ ಸಂಘದ ಅಡಿಯಲ್ಲಿ ನಾನಾ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸದಸ್ಯರ ಏಳಿಗೆಗೆ, ಕುಂದು ಕೊರತೆಗಳಿಗೆ ಹಾಗೂ ಸಮಸ್ಯೆಗಳಿಗೆ ದನಿಯಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಕನಕ ನೌಕರರ ಸಂಘದ ಅಭಿವೃದ್ಧಿಗಾಗಿ ನನ್ನ ಸಹಕಾರ ಬೆಂಬಲ ಸದಾ ಇರುತ್ತದೆ. ಸಂಘಕ್ಕಾಗಿ ಪ್ರತಿಯೊಬ್ಬ ಸದಸ್ಯರು ತಮ್ಮ ಅಮೂಲ್ಯವಾದ ಸಮಯವನ್ನು ನೀಡಿ ಸಂಘ ದೊಡ್ಡ ಮಟ್ಟದಲ್ಲಿ ಬೆಳೆಯುವ ರೀತಿ ಮಾಡಬೇಕು ಎಂದ ಅವರು, ನೂತನ ಪದಾಧಿಕಾರಿಗಳಿಗೆ ಶುಭ ಕೋರಿದರು.
ರಾಜ್ಯಮಟ್ಟದಲ್ಲಿ ಪತ್ರಕರ್ತರನಾಗಿ ಸೇವೆ ಸಲ್ಲಿಸುವ ವೇಳೆ ನನ್ನ ಕರ್ತವ್ಯವನ್ನು ಮೆಚ್ಚಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಮಾಧ್ಯಮ ಸಲಹೆಗಾರನಾಗಿ ನೇಮಕ ಮಾಡಿ, ಸಂಪುಟ ದರ್ಜೆಯ ಸ್ಥಾನಮಾನ ನೀಡಿದ್ದಾರೆ. ನಮ್ಮ ಕೆಲಸ ಇಷ್ಟಪಟ್ಟು ಮಾಡಿದರೆ ಉತ್ತಮ ಸ್ಥಾನಮಾನ ಸಿಗುತ್ತದೆ ಎಂದು ಹೇಳಿದರು.
ಈ ವೇಳೆ ಜಿಲ್ಲಾ ಕನಕ ನೌಕರ ಸಂಘದ ಗೌರವ ಸದಸ್ಯತ್ವವನ್ನು ಪಡೆದುಕೊಂಡುರು.
ಕುರುಬ ಸಮಾಜದ ಅಭಿವೃದ್ಧಿಗಾಗಿ ಸರ್ಕಾರವು ಅಭಿವೃದ್ಧಿ ನಿಗಮ ರಚಿಸಿ, ಹಣ ಮೀಸಲಿಡಬೇಕು. ಬೇರೆ ಎಲ್ಲಾ ಸಮುದಾಯದ ಅಭಿವೃದ್ಧಿ ನಿಗಮಗಳು ರಚಿಸಲಾಗಿದೆ. ಹಣ ಸಹ ಮೀಸಲಿಡಲಾಗಿದೆ. ನಮ್ಮ ಸಮಾಜದ ಉದ್ದಾರಕ್ಕಾಗಿ ಸರ್ಕಾರ ಒಳ್ಳೆ ತೀರ್ಮಾನ ತೆಗೆದುಕೊಳ್ಳಬೇಕು. ಅಭಿವೃದ್ಧಿ ನಿಗಮ ರಚಿಸುವಂತೆ ಮುಖ್ಯಮಂತ್ರಿಗಳಿಗೆ ಆಪ್ತರಾಗಿರುವ ನೀವು ಸಿದ್ದರಾಮಯ್ಯ ಅವರಿಗೆ ಮನವಿಯನ್ನು ತಿಳಿಸಿ, ಅಭಿವೃದ್ಧಿ ನಿಗಮ ಮಾಡುವಂತೆ ಒತ್ತಾಯಿಸಬೇಕು ಎಂದು ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ತಂಬಳ್ಳಿ ಮುನಿಯಪ್ಪ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್ ಅವರಿಗೆ ಮನವಿ ಮಾಡಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಕನಕ ನೌಕರರ ಸಂಘದ ಅಧ್ಯಕ್ಷ ಬಿ.ಎಂ.ನಾರಾಯಣಸ್ವಾಮಿ, ಎರಡು ದಶಕಗಳಿಂದ ಕನಕ ನೌಕರರ ಸಂಘವು ವಿವಿಧ ರೀತಿಯ ಚಟುವಟಿಕೆಗಳು ನಡೆಸಿಕೊಂಡು ಬರುತ್ತಿದ್ದು, ಸಂಘ ರಚಿಸಲು ಶಿಕ್ಷಕ ದಿ.ತಮ್ಮಣ್ಣ ಶ್ರಮವಹಿಸಿದ್ದಾರೆ. ಹಿರಿಯರ ಮಾರ್ಗದರ್ಶನದಲ್ಲಿ ಸಂಘವನ್ನು ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆಸಿಕೊಂಡು ಹೋಗಲು ಎಲ್ಲಾ ಪದಾಧಿಕಾರಿಗಳು ಒಗ್ಗೂಡಿ ಕೆಲಸ ಮಾಡಬೇಕಾಗಿದೆ. ನಿಮ್ಮೆಲ್ಲರ ಸಹಕಾರ ಇದ್ದರೆ, ಸಂಘವನ್ನು ಒಳ್ಳೆಯ ರೀತಿಯ ಬೆಳವಣಿಗೆ ಮೂಲಕ ಎಲ್ಲರಿಗೂ ಸಹಕಾರವಾಗುವಂತೆ ಸಂಘವನ್ನು ಕಟ್ಟಿ ಬೆಳೆಸೋಣ ಎಂದರು.
ಕರ್ನಾಟಕ ರಾಜ್ಯ ಕನಕ ನೌಕರರ ಸಂಘದ ಪದಾಧಿಕಾರಿಗಳು ಜಿಲ್ಲಾಧ್ಯಕ್ಷರಾಗಿ ಬಿ.ಎಂ. ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಿ.ಆರ್. ಶ್ರೀರಾಮೇಗೌಡ, ಖಜಾಂಚಿ ಬಿ. ಹರೀಶ್, ಕಾರ್ಯಾಧ್ಯಕ್ಷ ಎಂ.ಎ.ನಾರಾಯಣಸ್ವಾಮಿ, ಗೌರವಾಧ್ಯಕ್ಷರಾಗಿ ಲೋಕೇಶ್ ಎನ್.ವಿ. ಉಪಾಧ್ಯಕ್ಷರು ಶಂಕರೇಗೌಡ. ಈ. ನಂದೀಶ್.ಎ. ಪಂಪಾವತಿ, ಎಂ.ರಾಮಚಂದ್ರಪ್ಪ, ಸಿ.ಎಂ.ಪ್ರಕಾಶ್, ಬಿ.ಪಿ. ಸತೀಶ್, ಆಶ್ವಥ್ ಗೌಡ, ಸುಮಾರಾಣಿ, ಸುಗುಣ.ಆರ್. ವಿ.ಶಾರದಮ್ಮ, ಕೆ.ಜಿ.ಕವನ. ಸಹಕಾರ್ಯದರ್ಶಿಯಾಗಿ ಎಂ.ಚಂದ್ರೇಗೌಡ, ಗೋವಿಂದಗೌಡ.ಕೆ.ಎನ್. ಎನ್.ತುಳಿಸಿಪ್ರಸಾದ್, ಸಂಘಟನಾ ಕಾರ್ಯದರ್ಶಿಯಾಗಿ ಎನ್.ಶಂಕರ್. ಎಂ.ಮುರಳಿಧರ, ಕೆ.ಎನ್.ವಸಪ್ಪ, ಎನ್.ರಮೇಶ್ ಬಾಬು, ಎನ್.ರಾಕೇಶ್, ವಿ.ಮಂಜುನಾಥ್, ಪತ್ರಿಕಾ ಕಾರ್ಯದರ್ಶಿ ಎ.ಎಮ್. ಸುರೇಶ್ಕುಮಾರ್, ಲೆಕ್ಕಪರಿಶೋಧಕರು.ಎಂ.ರಮೇಶ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ರವಿ ಎಂ. ಕೆ.ಸಿ.ನಾರಾಯಣಸ್ವಾಮಿ, ಇ.ಶಿವಕುಮಾರ್, ರಾಮಪ್ಪ, ಶಿವಪ್ರಕಾಶ್, ಕೆ.ಗೋಪಿನಾಥ್, ಉಮಾರಾಣಿ, ಡಿ.ಆರ್.ವೆಂಕಟರಾಮೇಗೌಡ, ಡಿ.ಟಿ.ಶಂಕರೇಗೌಡ, ಆರ್.ಪರಮೇಶಪ್ಪ, ಮುನಿರಾಜು ಇತರರು ನೂತನ ಪದಾಧಿಕಾರಿಗಳಾಗಿ ಪದಗ್ರಹಣ ಮಾಡಿದರು.
ಈ ಸಂದರ್ಭದಲ್ಲಿ ಮುಖ್ಯ ಅಥಿತಿಗಳಾಗಿ ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಅಪ್ಪಯ್ಯಗೌಡ, ನಿಕಟಪೂರ್ವ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಮಂಜುನಾಥ್, ಶಿಕ್ಷಣಾಧಿಕಾರಿ ಸಿ.ಎನ್.ಗೋವಿಂದಪ್ಪ, ಕೆಎಸ್ಆರ್ಟಿಸಿ ಮುನಿಯಪ್ಪ, ನಾಗಭೂಷಣ್, ಎಲ್.ರಾಮಕೃಷ್ಣಪ್ಪ, ಕೆ.ವಿ.ಪ್ರಭಾಕರ್ ರವರ ಕುಟುಂಬದವರು ಮತ್ತಿತರರು ಉಪಸ್ಥಿತರಿದ್ದರು.