ಬ್ಯಾಟರಾಯನಪುರ : ಆರೋಗ್ಯ ಸೇವಾ ಕ್ಷೇತ್ರದಲ್ಲಿ ಕಳೆದ 17 ವರ್ಷಗಳಿಂದ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಾ, ಸುಮಾರು 1.6 ಮಿಲಿಯನ್ ಗೂ ಹೆಚ್ಚು ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುತ್ತಿರುವ. ಆರ್ ಎಕ್ಸ್ ಡಿ ಎಕ್ಸ್ ಹೆಲ್ತ್ ಕೇರ್ ಉತ್ತರ ಬೆಂಗಳೂರಿನ ಪ್ರಮುಖ ಬಡವಣೆಗಳಲ್ಲಿ ಒಂದಾಗಿರುವ ಜಕ್ಕೂರಿನಲ್ಲಿ ತನ್ನ 7ನೇ ಪ್ರಮುಖ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ ನ ಹೊಸ ಶಾಖೆಯನ್ನು ಶುಕ್ರವಾರ ಆರಂಭಿಸಿದೆ.

ಜಕ್ಕೂರಿನ ಆರ್ ಎಕ್ಸ್ ಡಿಎಕ್ಸ್ ಆಸ್ಪತ್ರೆಯ ನೂತನ ಶಾಖೆಯನ್ನು ಸಮಾಜ ಸೇವಕರು, ಸಚಿವ ಕೃಷ್ಣಬೈರೇಗೌಡ ರವರ ಧರ್ಮಪತ್ನಿ ಮೀನಾಕ್ಷಿ ಕೃಷ್ಣಬೈರೇಗೌಡ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ‘ಜಕ್ಕುೂರಿನಲ್ಲಿ ಆರ್ ಎಕ್ಸ್ ಡಿಎಕ್ಸ್ ಹೆಲ್ತ್ ಕೇರ್ ಮಲ್ಟಿ- ಸ್ಪೆಷಾಲಿಟಿ ಕ್ಲಿನಿಕ್ ಸೇವಾರಂಭ ಮಾಡಿರುವುದು ಸಂತೋಷ ಉಂಟು ಮಾಡಿದೆ. ಕೈಗೆಟುಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಮೂಲಕ ಆರ್ ಎಕ್ಸ್ ಡಿಎಕ್ಸ್ ಹೆಲ್ತ್‌ಕೇರ್ ಈ ಭಾಗದ ಜನರ ಮನೆಮಾತಾಗಲಿ ಎಂದು ಶುಭ ಹಾರೈಸಿದರು.

ಆರ್ ಎಕ್ಸ್ ಡಿಎಕ್ಸ್ ಹೆಲ್ತ್‌ಕೇರ್ ನ ಸಹ ಸಂಸ್ಥಾಪಕರಾದ ಡಾ.ಸುನಿತಾ ಮಹೇಶ್ವರಿ ಮಾತನಾಡಿ ‘ಬೆಂಗಳೂರಿನಾದ್ಯಂತ ಆರ್ ಎಕ್ಸ್ ಡಿಎಕ್ಸ್ ಹೆಲ್ತ್‌ಕೇರ್ ನೀಡುತ್ತಿರುವ ಆರೋಗ್ಯ ಸೇವೆಗಳು ಮತ್ತು ಆಸ್ಪತ್ರೆಯಲ್ಲಿ ಇರುವ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಕುರಿತು ವಿವರಿಸಿದರು.

ಡಾ. ಶ್ರೀ ಅರ್ಜುನ್ ಕಲ್ಯಾಣ್ ಪುರ್ ಮಾತನಾಡಿ ‘ಉತ್ತರ ಬೆಂಗಳೂರು ಬಹು ವೇಗವಾಗಿ ಬೆಳೆಯುತ್ತಿದ್ದು, ನಗರದ ಬೆಳವಣಿಗೆಯ ಜೊತೆಗೆ ಗುಣಮಟ್ಟದ ಆರೋಗ್ಯ ಸೇವೆಯ ಅಗತ್ಯವೂ ಹೆಚ್ಚಿದೆ. ಇದನ್ನು ಮನಗಂಡು ಜಕ್ಕೂರಿನಲ್ಲಿ ಆರ್ ಎಕ್ಸ್ ಡಿಎಕ್ಸ್ ಹೆಲ್ತ್‌ಕೇರ್ ತನ್ನ ಹೊಸ ಶಾಖೆಯನ್ನು ತೆರೆದಿದೆ ಎಂದರು.

ಆರೋಗ್ಯ ಸೇವಾ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಗುರುತು :

ಜಕ್ಕೂರಿನ ನೂತನ ಶಾಖೆಯ ಮೂಲಕ ಆರ್ ಎಕ್ಸ್ ಡಿಎಕ್ಸ್ ಹೆಲ್ತ್‌ಕೇರ್ ದೇಶದಾದ್ಯತ ತನ್ನ ವಿಸ್ತರಣಾ ಜಾಲದ 45ನೆಯ ಹೆಜ್ಜೆ ಗುರುತನ್ನು ಮೂಡಿಸಿದೆ. ಇದರಲ್ಲಿ 7 ಪ್ರಮುಖ ಕ್ಲಿನಿಕ್ ಗಳು, ಬೆಂಗಳೂರಿನಾಧ್ಯತ 20 ವೈದ್ಯಕೀಯ ಕೇಂದ್ರಗಳು, ನಾಲ್ಕು ರಾಜ್ಯಗಳ 17 ಗ್ರಾಮೀಣ ಕೇಂದ್ರಗಳು ಮತ್ತು ರಾಷ್ಟ್ರ ವ್ಯಾಪಿ ಟೆಲಿ ಮಿಡಿಸಿನ್ ಸೇವೆಗಳು ಸೇರುವೆ.

Leave a Reply

Your email address will not be published. Required fields are marked *