

ಬ್ಯಾಟರಾಯನಪುರ ಕ್ಷೇತ್ರದ ದೊಡ್ಡಬೊಮ್ಮಸಂದ್ರ ವಾರ್ಡ್ ವ್ಯಾಪ್ತಿಯ ಮುನಿಶಾಮಪ್ಪ ಬಡಾವಣೆ ಮತ್ತು ಕೊಡಿಗೇಹಳ್ಳಿ ವಾರ್ಡ್ ವ್ಯಾಪ್ತಿಯ ಕೊಡಿಗೆ ಎನ್ಕ್ಲೇವ್ ಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತು ನಾಗವಾರದ ಮಂಜುನಾಥ ಬಡಾವಣೆಯಲ್ಲಿ ಒಳಚರಂಡಿ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಕೃಷ್ಣಬೈರೇಗೌಡ ಭಾನುವಾರ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಮಾಜಿ ನಗರಸಭಾ ಸದಸ್ಯ, ಕಾಂಗ್ರೆಸ್ ಮುಖಂಡ ಆರ್.ಎಂ.ಶ್ರೀನಿವಾಸ್, ಕುವೆಂಪು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸಯ್ಯ, ದೊಡ್ಡಬೊಮ್ಮಸಂದ್ರ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಕೃಷ್ಣ, ಕುವೆಂಪು ನಗರ ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಮಲ್ಯಾಧ್ರಿ, ಮುರಳಿ, ರವಿ ನಾಯ್ಡು,ಯುವ ಮುಖಂಡ ಜತಿನ್ ಗೌಡ, ಸ್ಥಳೀಯ ಮುಖಂಡರಾದ ಮಂಜು, ಪ್ರಶಾಂತ್, ಗುಂಡೂರಾವ್, ನಿತ್ಯ, ಆಕಾಶ್, ಶಾಂತಮ್ಮ, ಪ್ರವೀಣ್, ಉನ್ನಿಕೃಷ್ಣ, ಜ್ಯೋತಿ, ಸತ್ಯ, ಭಾಸ್ಕರ್ ಶರ್ಮ, ಜನಾರ್ಧನ್, ಬಿ.ಸಿ.ಸುರೇಶ್, ಸಿಗಂದರ್, ಸುರೇಶ್ ಗೌಡ, ಪಟೇಲ್ ರಮೇಶ್, ರಾಮಯ್ಯ ಸೇರಿದಂತೆ ಇನ್ನಿತರರಿದ್ದರು