ದಿನಾಂಕ 27-9 – 2024 ಶುಕ್ರವಾರದಂದು 11.00 ಗಂಟೆಗೆ ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ ಕಾಲೇಜಿನ ಬಸವ ಸಭಾಂಗಣ ದಲ್ಲಿ ಆಯೋಜಿಸಿದ್ದ ನೂತನ ವಿದ್ಯಾರ್ಥಿಗಳ ಪ್ರೆಶರ್ಸ್ ಡೇ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಟಿ.ಗೋಪಾಲಕೃಷ್ಣ IAS ಅಧಿಕಾರಿಗಳು ವಿದ್ಯಾರ್ಥಿ ಜೀವನದಲ್ಲಿ ಗುರಿಮುಟ್ಟುವುದರಲ್ಲಿ ಸಫಲತೆ ಕಾಣಬೇಕೆಂದು ತಿಳಿಸಿದರು. ಅತಿಥಿಗಳಾಗಿ ಆಗಮಿಸಿದ್ದ ವಕೀಲರು ಡಾ. ಪುರುಷೊ e ತ್ತಮ ಅವರು ಕಾನೂನಿಗಿಂತ ದೊಡ್ಡದು ಯಾರೂ ಇಲ್ಲವೆಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಶ್ರೀ ಎಸ್ಎಸ್ ದೊಡ್ಡಣ್ಣನವರು ವಿದ್ಯಾರ್ಥಿಗಳಿಗೆ ಕಾಲೇಜಿನ ವಿದ್ಯಾಭ್ಯಾಸದ ಮಹತ್ವ ತಿಳಿಸಿದರು. ಪ್ರಾಂಶುಪಾಲರಾದ ಡಾ. ಶೀಲಾ ದೇವಿ ಮಳಿಮಠ ಅವರು ಪ್ರಾಸ್ತಾವಿಕ ನುಡಿಗಳನ್ನು ಮಾತನಾಡಿ ವಿದ್ಯಾರ್ಥಿಗಳು ಮಾನವೀಯ ಮೌಲ್ಯ ಹಾಗೂ ಕೌಶಲ್ಯಗಳನ್ನು ಬೆಳಸಿಕೊಂಡು ವಿದ್ಯಾರ್ಥಿ ಜೀವನದಲ್ಲಿ ಯಶಸ್ಸುಪಡೆಯರಿ ಎಂದು ಕರೆ ನೀಡಿದರು. ಶ್ರೀಗಿರೀಶ ಪಿ ಹೆಚ್ ಸ್ವಾಗತ… ಕು.ಶಾಂಭವಿ ಭಟ್ ಅವರ ನಿರೂಪಣೆ ಕು.ವಿಜಯಲಕ್ಷ್ಮಿ ತಂಡದವರಿಂದ ಪ್ರಾರ್ಥನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕು. ಪದ್ಮಿನಿ ಸಾಂಸ್ಕೃತಿಕ ಸಂಚಾಲಕರಾಗಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *