Tag: Chikkaballapur

ಚಿಕ್ಕಬಳ್ಳಾಪುರ: ಮದ್ಯವ್ಯಸನ ಮುಕ್ತ ಕೇಂದ್ರಕ್ಕೆ ಸೇರಿದ ಯುವಕನೋರ್ವ

ಚಿಕ್ಕಬಳ್ಳಾಪುರ: ಮದ್ಯವ್ಯಸನ ಮುಕ್ತ ಕೇಂದ್ರಕ್ಕೆ ಸೇರಿದ ಯುವಕನೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದಿದೆ.ಚಿಂತಾಮಣಿ ತಾಲೂಕಿನ ಬುಡಗವಾರಹಳ್ಳಿ ಬಳಿಯ ಮದ್ಯವ್ಯಸನ ಮುಕ್ತ ಹಾಗೂ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಶ್ರೀನಿವಾಸಪುರದ ಮಂಜುನಾಥ್ (21) ಮೃತ…

ವಿಷ್ಣುಪ್ರಿಯ ಕಾಲೇಜಿನಲ್ಲಿ ಗಾಳಿಪಟ ಉತ್ಸವ 

ಮಕ್ಕಳನ್ನು ದುರಬ್ಯಾಸದಿಂದ ಹೊರಗೆ ತರಲು ವಿಬಿನ್ನ ಕಾರ್ಯಕ್ರಮ  ಚಿಕ್ಕಬಳ್ಳಾಪುರ:‌ಚಿಕ್ಕಬಳ್ಳಾಪುರ ನಗರದ ಹೊರವಲಯದಲ್ಲಿರುವ ವಿಷ್ಣುಪ್ರಿಯ ಕಾಲೇಜಿನಲ್ಲಿ ವಿಷ್ಣುಪ್ರಿಯ ಕಾಲೇಜು ಹಾಗುಹೆಚ್ ಡಿ ಎಫ್ ಸಿ ಬ್ಯಾಂಕ್ ಸಂಯುಕ್ತಾಶ್ರದಲ್ಲಿ ಮಕ್ಕಳಿಗೆಗಾಳಿಪಟ ಉತ್ಸವ ಹಾಗು ಗಿಡ ನೆಡಿ ಮರ ಬೆಳಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಕ್ಕಳು ವಿವಿದ ಗಾಳಿಪಟಗಳನ್ನ…

[20/07, 6:57 pm] R Hanumanthu: ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಗೆ 17.85 ಕೋಟಿ ಬಿಡುಗಡೆ: ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ*

[20/07, 6:57 pm] R Hanumanthu: ಗೃಹಲಕ್ಷ್ಮೀ ಯೋಜನೆಯ ಸೌಲಭ್ಯ ಪಡೆಯುವಂತೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸಾವರ್ಜನಿಕರಲ್ಲಿ ಮನವಿ*ಚಿಕ್ಕಬಳ್ಳಾಪುರ*: ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿರುತ್ತದೆ. ಕುಟುಂಬದ ನಿರ್ವಹಣೆಯಲ್ಲಿ ಕುಟುಂಬ ಯಜಮಾನಿಯ ಪಾತ್ರ ಪ್ರಮುಖವಾಗಿದ್ದು, ಯಜಮಾನಿಯು ಆರ್ಥಿಕವಾಗಿ…

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ತಾಲೂಕಿನ ದಿಬ್ಬೂರು ಗ್ರಾಮದ ನ್ಯೂ ಸೆಂಟ್ರಲ್ ಇಂಗ್ಲಿಷ್ ಸ್ಕೂಲ್ ಆವರಣದಲ್ಲಿ “ಪುಟಾಣಿ ಮಕ್ಕಳ ಅಕ್ಷರಾಭ್ಯಾಸ” ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಶಾಲಾ ಆಡಳಿತ ಮಂಡಳಿ ವ್ಯವಸ್ಥೆ ಗೊಳಿಸಿದ್ದ ಸ್ಥಳದಲ್ಲಿ ಸಾವದಾನ ಚಿತ್ತದಿಂದ ಕುಳಿತ ಸುಮಾರು 50ಕ್ಕೂ ಅಧಿಕ ಪುಟಾಣಿಗಳು ತಮ್ಮ ಪೋಷಕರೊಂದಿಗೆ ಅಕ್ಕಿಯ ಮೇಲೆ ಅಕ್ಷರ ಬರೆದು ಅಕ್ಷರ ಅಭ್ಯಾಸ ಮಾಡಿಸುವ ವಿನೂತನ ಕಾರ್ಯಕ್ರಮದ ಪ್ರಾರಂಭೋತ್ಸವಕ್ಕೆ ಗ್ರಾಮದ ನ್ಯೂ ಸೆಂಟ್ರಲ್ ಇಂಗ್ಲಿಷ್ ಸ್ಕೂಲ್ ಮಕ್ಕಳು ಸಾಕ್ಷಿಯಾದರು.
ಚಿಕ್ಕಬಳ್ಳಾಪುರದ ಹೆಸರಾಂತ ವೇದಪಂಡಿತ ಶ್ರೀ ಸುಂದರಶಾಸ್ತ್ರಿಗಳ ಸಾನಿಧ್ಯದಲ್ಲಿ
ನೋಟ್‌ಬುಕ್‌, ಪೆನ್‌ ಅಥವಾ ಹಲಗೆ ಬಳಪ ಹಿಡಿದು ಅಕ್ಷರಾಭ್ಯಾಸ ಮಾಡುವ ಪದ್ಧತಿಯ ಬದಲು ಅರಿಶಿನ ಕೊನೆ ಹಿಡಿದು ತಟ್ಟೆಯಲ್ಲಿ ತುಂಬಿದ ಅಕ್ಕಿಯ ಮೇಲೆ ಅಕ್ಷರ ಅಭ್ಯಾಸ ಮಾಡಿಸುವ ಈ ವಿನೂತನ ಕಾರ್ಯಕ್ರಮದಲ್ಲಿ 50ಕ್ಕೂ ಅಧಿಕ ಪುಟಾಣಿಗಳು ಭಾಗವಹಿಸಿದ್ದರು.
ಮಕ್ಕಳು ತಮ್ಮ ಪೋಷಕರ ತೊಡೆಯ ಮೇಲೆ ಕೂತು, ಅಕ್ಕಿ ತುಂಬಿದ ತಟ್ಟೆಯನ್ನು ತಮ್ಮ ತೊಡೆಯ ಮೇಲೆ ಇಟ್ಟುಕೊಂಡು ಅರಿಶಿನದ ಕೊನೆ ಹಿಡಿದುಕೊಂಡು ಅ,ಆ… ಬರೆಯತೊಡಗಿದರು.
ವಿದ್ಯಾದೇವತೆ ಸರಸ್ವತಿಯನ್ನು ಸ್ಮೃತಿಸುತ್ತ ಓಂಕಾರ ಹೇಳುತ್ತ ತಮ್ಮ ಮಕ್ಕಳು ಉತ್ಸುಕತೆಯಿಂದ ಅ.ಆ. ಬರೆಯತೊಡಗಿದ್ದಂತೆ ಪೋಷಕರ ಆನಂದಕ್ಕೆ ಪಾರವೇ ಇರಲಿಲ್ಲ.ಅಕ್ಷರ ಅಭ್ಯಾಸ ಮಾಡಿಸುವ ಮೊದಲು ಮಕ್ಕಳನ್ನು ಶ್ರದ್ಧೆಯಿಂದ ಕುಳ್ಳರಿಸಲು ಶಾಲೆಯ ಶಿಕ್ಷಕ ವೃಂದದವರು ಶಾಲಾ ಆವರಣಕ್ಕೆ ಸ್ವಾಗತಿಸಿದರು.
ಎಂ ಎಂ ಫೌಂಡೇಶನ್ ನ ಕಾರ್ಯ್ಯಾಧ್ಯಕ್ಷ ಉಮೇಶ್ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಮಾತನಾಡಿದ ಅವರು ನಮ್ಮ ಪೂರ್ವಿಕರು ಅಕ್ಷರ ಕಲಿಯುವಾಗ ಗುರುಕುಲದಲ್ಲಿ ಮರಳಿನ ಮೇಲೆ ಹಾಗೂ ಅಕ್ಕಿಯ ಮೇಲೆ ಅಕ್ಷರ ಬರೆಯತೊಡಗಿ ಅಕ್ಷರ ಅಭ್ಯಾಸ ಮಾಡುತ್ತಿದ್ದರು.ಅಂತೆಯೇ ಈ ಶಾಲೆಯ ಮಕ್ಕಳಿಗೆ ಅಂತಹದೊಂದು ಪ್ರಯೋಗವನ್ನು ಇಲ್ಲಿ ಮಾಡಲಾಗುತ್ತಿದೆ.ಇಂದಿನ ದಿನಮಾನಗಳಲ್ಲಿ ಇಂತಹ ಪ್ರಯೋಗ ನಮ್ಮಿಂದ ದೂರ ಆಗಿದೆ ಗ್ರಾಮೀಣ ಪ್ರದೇಶದ, ಅದರಲ್ಲೂ ನಮ್ಮ ದಿಬ್ಬೂರು ಗ್ರಾಮದ ನ್ಯೂ ಸೆಂಟ್ರಲ್ ಇಂಗ್ಲಿಷ್ ಸ್ಕೂಲ್ ಆವರಣದಲ್ಲಿ ಶಾಲಾ ಮಕ್ಕಳಿಗೆ ಇಂತಹ ಪ್ರಯೋಗ ಮಕ್ಕಳ ಮುಖೇನ ದೈವಿ ಸಂಕಲ್ಪ ಎಂಬಂತೆ ಅಕ್ಷರದ ಆರಂಭವಾಗುತ್ತಿರುವುದು ಮಗುವಿನ ಕಲಿಕೆಗೆ ಮುನ್ನುಡಿ ಅಗಲಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷೆ ಕೆ.ಮಂಜುಳ ಮುರಳಿಧರ್, ಕಾರ್ಯದರ್ಶಿ ಕೃಷ್ಣಮೂರ್ತಿ, ನಿರ್ದೇಶಕ ಹಾಗೂ ಪತ್ರಕರ್ತ ಎಂ.ಕೃಷ್ಣಪ್ಪ ,ಆಡಳಿತಾಧಿಕಾರಿ ಎಂ. ಮಿಥುನ್ ಕುಮಾರ್, ಉಪನ್ಯಾಸಕ ಎಂ.ಆಲಪ್ಪ, ಗ್ರಾಮದ ಯುವ ಮುಖಂಡ ಗಿರೀಶ್, ಶಿಕ್ಷಕರಾದ ಉಷಾ, ನೇತ್ರಾವತಿ, ದೇವಿಕ ರತ್ನಮ್ಮ ಸೇರಿದಂತೆ ಬೋಧಕರ ಸಿಬ್ಬಂದಿ ಹಾಜರಿದ್ದರು.

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ತಾಲೂಕಿನ ದಿಬ್ಬೂರು ಗ್ರಾಮದ ನ್ಯೂ ಸೆಂಟ್ರಲ್ ಇಂಗ್ಲಿಷ್ ಸ್ಕೂಲ್ ಆವರಣದಲ್ಲಿ “ಪುಟಾಣಿ ಮಕ್ಕಳ ಅಕ್ಷರಾಭ್ಯಾಸ” ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.ಶಾಲಾ ಆಡಳಿತ ಮಂಡಳಿ ವ್ಯವಸ್ಥೆ ಗೊಳಿಸಿದ್ದ ಸ್ಥಳದಲ್ಲಿ ಸಾವದಾನ ಚಿತ್ತದಿಂದ ಕುಳಿತ ಸುಮಾರು 50ಕ್ಕೂ ಅಧಿಕ ಪುಟಾಣಿಗಳು ತಮ್ಮ…

ಶಿಕ್ಷಣದಿಂದ ಮಾತ್ರ ಉತ್ತಮ ಸ್ಥಾನಕ್ಕೆ ಹೋಗಬಹುದು: ಸಂದೀಪ್ ರೆಡ್ಡಿ

ಚಿಕ್ಕಬಳ್ಳಾಪುರ: ಶಿಕ್ಷಣದಿಂದ ಮಾತ್ರ ಉತ್ತಮ ಸ್ಥಾನಕ್ಕೆ ಹೋಗಬಹುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇದನ್ನು ಅರಿತು ಓದಿನ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದು ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ ತಿಳಿಸಿದರು.ತಾಲ್ಲೂಕಿನ ಇನಮಿಂಚೇನಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಭಗತ್…

ಜ್ಞಾನದಿಂದ ಕಾನೂನಿನ ತಿಳಿವಳಿಕೆ ಹೆಚ್ಚಲಿದೆ: ನ್ಯಾ.ಎ.ಅರುಣಾ ಕುಮಾರಿ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೆಂಪೇಗೌಡ ಕಾನೂನು ಮಹಾವಿದ್ಯಾಲಯ, ಜಿಲ್ಲಾ ವಕೀಲರ ಸಂಘ, ಮುದ್ದೇನಹಳ್ಳಿ ಗ್ರಾ.ಪಂ ಸಂಯುಕ್ತ ಆಶ್ರಯದಲ್ಲಿ ಬುಧವಾರ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು…