ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ತಾಲೂಕಿನ ದಿಬ್ಬೂರು ಗ್ರಾಮದ ನ್ಯೂ ಸೆಂಟ್ರಲ್ ಇಂಗ್ಲಿಷ್ ಸ್ಕೂಲ್ ಆವರಣದಲ್ಲಿ “ಪುಟಾಣಿ ಮಕ್ಕಳ ಅಕ್ಷರಾಭ್ಯಾಸ” ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಶಾಲಾ ಆಡಳಿತ ಮಂಡಳಿ ವ್ಯವಸ್ಥೆ ಗೊಳಿಸಿದ್ದ ಸ್ಥಳದಲ್ಲಿ ಸಾವದಾನ ಚಿತ್ತದಿಂದ ಕುಳಿತ ಸುಮಾರು 50ಕ್ಕೂ ಅಧಿಕ ಪುಟಾಣಿಗಳು ತಮ್ಮ ಪೋಷಕರೊಂದಿಗೆ ಅಕ್ಕಿಯ ಮೇಲೆ ಅಕ್ಷರ ಬರೆದು ಅಕ್ಷರ ಅಭ್ಯಾಸ ಮಾಡಿಸುವ ವಿನೂತನ ಕಾರ್ಯಕ್ರಮದ ಪ್ರಾರಂಭೋತ್ಸವಕ್ಕೆ ಗ್ರಾಮದ ನ್ಯೂ ಸೆಂಟ್ರಲ್ ಇಂಗ್ಲಿಷ್ ಸ್ಕೂಲ್ ಮಕ್ಕಳು ಸಾಕ್ಷಿಯಾದರು.
ಚಿಕ್ಕಬಳ್ಳಾಪುರದ ಹೆಸರಾಂತ ವೇದಪಂಡಿತ ಶ್ರೀ ಸುಂದರಶಾಸ್ತ್ರಿಗಳ ಸಾನಿಧ್ಯದಲ್ಲಿ
ನೋಟ್ಬುಕ್, ಪೆನ್ ಅಥವಾ ಹಲಗೆ ಬಳಪ ಹಿಡಿದು ಅಕ್ಷರಾಭ್ಯಾಸ ಮಾಡುವ ಪದ್ಧತಿಯ ಬದಲು ಅರಿಶಿನ ಕೊನೆ ಹಿಡಿದು ತಟ್ಟೆಯಲ್ಲಿ ತುಂಬಿದ ಅಕ್ಕಿಯ ಮೇಲೆ ಅಕ್ಷರ ಅಭ್ಯಾಸ ಮಾಡಿಸುವ ಈ ವಿನೂತನ ಕಾರ್ಯಕ್ರಮದಲ್ಲಿ 50ಕ್ಕೂ ಅಧಿಕ ಪುಟಾಣಿಗಳು ಭಾಗವಹಿಸಿದ್ದರು.
ಮಕ್ಕಳು ತಮ್ಮ ಪೋಷಕರ ತೊಡೆಯ ಮೇಲೆ ಕೂತು, ಅಕ್ಕಿ ತುಂಬಿದ ತಟ್ಟೆಯನ್ನು ತಮ್ಮ ತೊಡೆಯ ಮೇಲೆ ಇಟ್ಟುಕೊಂಡು ಅರಿಶಿನದ ಕೊನೆ ಹಿಡಿದುಕೊಂಡು ಅ,ಆ… ಬರೆಯತೊಡಗಿದರು.
ವಿದ್ಯಾದೇವತೆ ಸರಸ್ವತಿಯನ್ನು ಸ್ಮೃತಿಸುತ್ತ ಓಂಕಾರ ಹೇಳುತ್ತ ತಮ್ಮ ಮಕ್ಕಳು ಉತ್ಸುಕತೆಯಿಂದ ಅ.ಆ. ಬರೆಯತೊಡಗಿದ್ದಂತೆ ಪೋಷಕರ ಆನಂದಕ್ಕೆ ಪಾರವೇ ಇರಲಿಲ್ಲ.ಅಕ್ಷರ ಅಭ್ಯಾಸ ಮಾಡಿಸುವ ಮೊದಲು ಮಕ್ಕಳನ್ನು ಶ್ರದ್ಧೆಯಿಂದ ಕುಳ್ಳರಿಸಲು ಶಾಲೆಯ ಶಿಕ್ಷಕ ವೃಂದದವರು ಶಾಲಾ ಆವರಣಕ್ಕೆ ಸ್ವಾಗತಿಸಿದರು.
ಎಂ ಎಂ ಫೌಂಡೇಶನ್ ನ ಕಾರ್ಯ್ಯಾಧ್ಯಕ್ಷ ಉಮೇಶ್ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಮಾತನಾಡಿದ ಅವರು ನಮ್ಮ ಪೂರ್ವಿಕರು ಅಕ್ಷರ ಕಲಿಯುವಾಗ ಗುರುಕುಲದಲ್ಲಿ ಮರಳಿನ ಮೇಲೆ ಹಾಗೂ ಅಕ್ಕಿಯ ಮೇಲೆ ಅಕ್ಷರ ಬರೆಯತೊಡಗಿ ಅಕ್ಷರ ಅಭ್ಯಾಸ ಮಾಡುತ್ತಿದ್ದರು.ಅಂತೆಯೇ ಈ ಶಾಲೆಯ ಮಕ್ಕಳಿಗೆ ಅಂತಹದೊಂದು ಪ್ರಯೋಗವನ್ನು ಇಲ್ಲಿ ಮಾಡಲಾಗುತ್ತಿದೆ.ಇಂದಿನ ದಿನಮಾನಗಳಲ್ಲಿ ಇಂತಹ ಪ್ರಯೋಗ ನಮ್ಮಿಂದ ದೂರ ಆಗಿದೆ ಗ್ರಾಮೀಣ ಪ್ರದೇಶದ, ಅದರಲ್ಲೂ ನಮ್ಮ ದಿಬ್ಬೂರು ಗ್ರಾಮದ ನ್ಯೂ ಸೆಂಟ್ರಲ್ ಇಂಗ್ಲಿಷ್ ಸ್ಕೂಲ್ ಆವರಣದಲ್ಲಿ ಶಾಲಾ ಮಕ್ಕಳಿಗೆ ಇಂತಹ ಪ್ರಯೋಗ ಮಕ್ಕಳ ಮುಖೇನ ದೈವಿ ಸಂಕಲ್ಪ ಎಂಬಂತೆ ಅಕ್ಷರದ ಆರಂಭವಾಗುತ್ತಿರುವುದು ಮಗುವಿನ ಕಲಿಕೆಗೆ ಮುನ್ನುಡಿ ಅಗಲಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷೆ ಕೆ.ಮಂಜುಳ ಮುರಳಿಧರ್, ಕಾರ್ಯದರ್ಶಿ ಕೃಷ್ಣಮೂರ್ತಿ, ನಿರ್ದೇಶಕ ಹಾಗೂ ಪತ್ರಕರ್ತ ಎಂ.ಕೃಷ್ಣಪ್ಪ ,ಆಡಳಿತಾಧಿಕಾರಿ ಎಂ. ಮಿಥುನ್ ಕುಮಾರ್, ಉಪನ್ಯಾಸಕ ಎಂ.ಆಲಪ್ಪ, ಗ್ರಾಮದ ಯುವ ಮುಖಂಡ ಗಿರೀಶ್, ಶಿಕ್ಷಕರಾದ ಉಷಾ, ನೇತ್ರಾವತಿ, ದೇವಿಕ ರತ್ನಮ್ಮ ಸೇರಿದಂತೆ ಬೋಧಕರ ಸಿಬ್ಬಂದಿ ಹಾಜರಿದ್ದರು.
