Category: Blog

Your blog category

ಸೆಪ್ಟೆಂಬರ್ 28ರಂದು ಜಿಲ್ಲಾ ಪಂಚಾಯಿತಿ ಎದುರು ಅನಿರ್ದಿಷ್ಟ ಅವಧಿ ಪ್ರತಿಭಟನೆ ಕೆ ಆರ್ ಎಸ್ ಜಿಲ್ಲಾಧ್ಯಕ್ಷ ಚಿಕ್ಕನಾರಾಯಣ

ಬಂಗಾರಪೇಟೆ :ಪಶುಗಳ ರಕ್ಷಣೆ ಹಾಗೂ ರೈತರ ಬದುಕಿಗೆ ದಾರಿ ದೀಪವಾಗಬೇಕಾಗಿದ್ದ ಪಶು ವೈದ್ಯ ಇಲಾಖೆಯ ಉಪನಿರ್ದೇಶಕರು ಮತ್ತು ವೈದ್ಯಾಧಿಕಾರಿಗಳು ಪಶು ಪಾಲನ ಯೋಜನೆಯ ಕೋಟ್ಯಾಂತರ ರೂಪಾಯಿ ಹಣವನ್ನು ಲೂಟಿ ಮಾಡಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಕರ್ನಾಟಕ ರಿಪಬ್ಲಿಕನ್ ಸೇನೆಯ ಜಿಲ್ಲಾಧ್ಯಕ್ಷ…

ಬಂಗಾರಪೇಟೆ: ತಾಲ್ಲೂಕಿನ ಬಲ ಮಂದೆ ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತ ವತಿಯಿಂದ 2022-23 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿದ ಅಧ್ಯಕ್ಷ ಜಿ. ವೆಂಕಟೇಶ್ ಗೌಡ ಮಾತನಾಡಿ ಸಂಘದಲ್ಲಿ ಒಟ್ಟು 933 ಸದಸ್ಯರ ಸಂಖ್ಯೆ ಇದ್ದು, ಸಂಘವು ಬ್ಯಾಂಕಿನಲ್ಲಿ ಹೊಂದಿರುವ ಷೇರು ಮೊತ್ತ 3688847 ರೂ ಹೊಂದಿದ್ದು 2022-23ನೇ ಸಾಲಿಗೆ ಸಂಘವು ಗಳಿಸಿರುವ ಲಾಭ- 50157 ರೂ ಆಗಿದ್ದು ನಾವು ನಮ್ಮ ಸಂಘದಿಂದ 465 ಸದಸ್ಯರಿಗೆ 82031391 ರೂ ಸಾಲ ವಿತರಿಸಲಾಗಿದೆ. ಈ ಮೊತ್ತದಲ್ಲಿ ಕೆಸಿಸಿ ಅಡಿಯಲ್ಲಿ 368 ಸದಸ್ಯರಿಗೆ- 44277000 ರೂ, ಎಸ್ ಎಚ್ ಜಿ 84 ಸದಸ್ಯರಿಗೆ- 33867440 ರೂ, ರೇಷ್ಮೆ ಮನೆ 5 ಸದಸ್ಯರಿಗೆ- 1316581 ರೂ, ಮಿನಿ ಡೈರಿ 6 ಸದಸ್ಯರಿಗೆ- 1971207 ರೂ ಕೋಳಿ ಫಾರಂ 2 ಸದಸ್ಯರಿಗೆ- 599163 ರೂ ಕೊಡಲಾಗಿದೆ. ಹಾಗೂ ಮಹಿಳಾ ಸಂಘಗಳಿಂದ- 12019640 ರೂ ಸಾಲ ವಸೂಲಿ ಮತ್ತು ಸದಸ್ಯರಿಂದ ಕೆಸಿಸಿ ಸಾಲ ವಸೂಲಿ- 39024000 ರೂ, ಮಿನಿ ಡೈರಿ ಸಾಲ ವಸೂಲಿ-512793 ರೂ, ರೇಷ್ಮೆ ಮನೆ ಸಾಲವಸೂಲಿ-671956 ರೂ, ಕೋಳಿ ಫಾರಂ ಸಾಲ ವಸೂಲಿ- 95954 ರೂ ಜಮಾ ಆಗಿದೆ, ಹಾಗೂ ಜಿಲ್ಲಾ ಬ್ಯಾಂಕ್ ಮಹಿಳಾ ಸಂಘಗಳ ಖಾತೆಗೆ -12220050 ರೂ, ಜಿಲ್ಲಾ ಬ್ಯಾಂಕ್ ಕೆಸಿಸಿ ಸಾಲದ ಖಾತೆಗೆ -40286158 ರೂ, ಜಿಲ್ಲಾ ಬ್ಯಾಂಕ್ ಮಿನಿ ಡೈರಿ ಸಾಲದ ಖಾತೆಗೆ- 648569 ರೂ, ಜಿಲ್ಲಾ ಬ್ಯಾಂಕ್ ರೇಷ್ಮೆ ಮನೆ ಸಾಲದ ಖಾತೆಗೆ- 593078 ರೂ, ಜಿಲ್ಲಾ ಬ್ಯಾಂಕ್ ಕೋಳಿ ಫಾರಂ ಸಾಲದ ಖಾತೆಗೆ- 225195 ರೂ ಹಾಕಲಾಗಿದೆ. ಮತ್ತು ಸರ್ಕಾರದಿಂದ ಬಡ್ಡಿ ಮತ್ತು ಇತರೆ ಹಣ- 4565813 ರೂ, ಜಿಲ್ಲಾ ಬ್ಯಾಂಕಿಗೆ ಬಡ್ಡಿ ಮತ್ತು ಇತರೆ ಖರ್ಚುಗಳು- 4515656 ರೂ, ಮರಣ ಹೊಂದಿರುವವರ ಸಾಲ ಬರಬೇಕಾದದ್ದು -1354000 ಹಾಗೂ ಸದಸ್ಯರಿಂದ ಸಾಲ ವಸೂಲಿ -52324343 ರೂ, ಜಿಲ್ಲಾ ಬ್ಯಾಂಕಿಗೆ ಸಾಲದ ಅಸಲು -53973050 ರೂ, ಮತ್ತು ಜಿಲ್ಲಾ ಬ್ಯಾಂಕಿಗೆ -1648707 ರೂ ಹೆಚ್ಚು ಹಣ ಪಾವತಿ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ನಮ್ಮ ಸಂಘದ ವತಿಯಿಂದ ಸದಸ್ಯರಿಗೆ ಸಾಲವನ್ನು ವಿತರಣೆ ಮಾಡುತ್ತೇವೆ, ಹೊಸದಾಗಿ ಸಂಘದ ಸದಸ್ಯತ್ವ ನೋಂದಣಿ ಮಾಡಲು ರೂ.1000 ನಿಗದಿಪಡಿಸಲಾಗಿದೆ. ಇದರಲ್ಲಿ ಎಸ್ ಸಿ. ಎಸ್ ಟಿ. ಸಮುದಾಯದವರು ಸಂಘದ ಸದಸ್ಯತ್ವ ಪಡೆಯಲು ಯಾವದೇ ಶುಲ್ಕ ಇರುವುದಿಲ್ಲ ಸರ್ಕಾರ ಕೇಳಿರುವ ದಾಖಲೆ ಸಲ್ಲಿಸಿದರೆ ಸಾಕು, ಉಚಿತ ಸದಸ್ಯತ್ವ ನೀಡಲಾಗುತ್ತದೆ. ನಮ್ಮ ವ್ಯವಸಾಯ ಸೇವಾ ಸಂಘವನ್ನು ಜಿಲ್ಲೆಯಲ್ಲಿಯೇ ಉನ್ನತ ಸ್ಥಾನ ಅಲಂಕರಿಸಲು ಶ್ರಮಿಸಿವೆ ಆದ್ದರಿಂದ ನಮ್ಮ ಸಂಘದ ಸದಸ್ಯರು ಸಹಕಾರ ಸಂಘದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳ ಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಎಂ. ಶ್ರೀನಿವಾಸಪ್ಪ , ನಿರ್ದೇಶಕರಾದ ಎಂ. ನಾಗರಾಜ್. ಅಂಕಿ ರೆಡ್ಡಿ. ಎಂ. ಪೆದ್ದನ್ನ. ಆರ್. ಸಂಪಂಗಿ. ಗೋಪಾಲಪ್ಪ. ಶ್ರೀ ರಾಮಪ್ಪ. ಚೌಡಮ್ಮ. ಶ್ರೀರಾಮಪ್ಪ. ನಾರಾಯಣಮ್ಮ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ವೇಣುಗೋಪಾಲ್. ವಿನೋದ್ ಕುಮಾರ್. ಸಿಬ್ಬಂದಿ ವರ್ಗ…

ಕೆಜಿಎಫ್ ನಗರಸಭೆ ವ್ಯಾಪ್ತಿಯ ಚರಂಡಿಯಲ್ಲಿ ಗಿಡಗಂಟುಗಳು: ಕನ್ನಡ ಹೋರಾಟಗಾರರು ವಿ ಎಸ್ ಪ್ರಕಾಶ್ ಆಗ್ರಹ: ಕೆಜಿಎಫ್: ನಗರಸಭೆ ಮುಂಭಾಗದಲ್ಲಿರುವ ಪುಟ್ ಪಾತ್ ಹಾಗೂ ಚರಂಡಿಯನ್ನು ನಗರಸಭೆಯಿಂದ ಸ್ವರಾಜ್ ಮುಲ್ ವೃತ್ತದ ವರೆಗೆ ಕಳೆದ ಆರು ತಿಂಗಳ ಹಿಂದೆ ಅಷ್ಟೇ ಲಕ್ಷಾಂತರ ಅನುದಾನವನ್ನು ವೆಚ್ಚ ಮಾಡಿ ನಿರ್ಮಿಸಿದ್ದ, ಪುಟ್ ಪಾತ್ ನ್ನು
ಗಿಡಗಳು ಅಕ್ರಮಿಸಿಕೊಳ್ಳುತ್ತಿದ್ದರು. ಹೇಳುವರು ಕೇಳುವರು ಯಾರು ಇಲ್ಲದಂತೆ ಆಗಿದೆ ಎಂಬ ಟೀಕೆಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಿಸಲಾಗಿರುವ ಫುಟ್ಪಾತ್ ಹಾಗೂ ಚರಂಡಿಯನ್ನು ನಿರ್ಮಿಸಲಾಗಿದ್ದು. ಮಳೆ ಬಂದರೆ ಮಳೆ ನೀರು ಚರಂಡಿಯಲ್ಲಿ ಹರಿಯುವುದೇ ಇಲ್ಲ ಚರಂಡಿಯಲ್ಲಿ ಹೂಳು ತುಂಬಿಕೊಂಡಿರುವುದರಿಂದ ಪಾದ ಚಾರಿಗಳು ನಡೆದಾಡಲು ನಿರ್ಮಿಸಿರುವ ಫುಟ್ಬಾತ್ ನಲ್ಲಿ ಪಾರ್ಥೇನಿಯಂ ಗಿಡಗಳು ಬೆಳೆದು ನಿಂತಿದೆ ಆದ್ದರಿಂದ ಸಾರ್ವಜನಿಕರು ಫುಟ್ಪಾತ್ ನಲ್ಲಿ ಮೇಲೆ ನಡೆದಾಡಲು ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳು ಬರುತ್ತದೆ. ನಗರ ಸಭೆ ಪಕ್ಕದಲ್ಲಿ ಇಷ್ಟೊಂದು ಆವ್ಯವಸ್ಥೆ ಇದ್ದರು ಅಧಿಕಾರಿಗಳು ಜನಪ್ರತಿನಿಧಿಗಳು ಇದೇ ರಸ್ತೆಯಲ್ಲಿ ಬೆಳಗ್ಗೆದ್ದರೆ ನಡೆಸುವವರು ಆದರೆ ಯಾರು ಇದರ ಬಗ್ಗೆ ಕೇರ್ ಮಾಡುತ್ತಿಲ್ಲ ಇನ್ನು ಸ್ವಲ್ಪ ದಿನಗಳು ಕಳೆದರೆ ರಸ್ತೆ ಯಾವುದೋ ಪುಟ್ ಪಾತ್ ಯಾವುದು ಎಂದು ತಿಳಿಯದಂತಾಗಿದೆ ಆಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಗಡಿ ನಾಡು ಕನ್ನಡ ಪರ ಹೋರಾಟಗಾರರು ವಿ .ಎಸ್.ಪ್ರಕಾಶ್ ನಗರಸಭೆ ಪಕ್ಕದಲ್ಲಿ ಇಂತಹ ಪರಿಸ್ಥಿತಿ ಏರ್ಪಟ್ಟಿದ್ದರು ಜನಪ್ರತಿನಿಧಿಗಳು ಇತ್ತ ಗಮನ ಹರಿಸದಿರುವುದು ದುರಾದೃಷ್ಟಕರ ಸಂಗತಿ ತಕ್ಷಣ ಅಧಿಕಾರಿಗಳು ಇತ್ತ ಗಮನಹರಿಸಿ ಸಾರ್ವಜನಿಕ ಹಣ ಪೋಲಾಗದಂತೆ ಎಚ್ಚರ ವಹಿಸಬೇಕೆಂದು ಆಗ್ರಹ ಪಡಿಸಿದರು.

ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮ ಮಕ್ಕಳಲ್ಲಿ ಅರಿವು: ಕೆಜಿಎಫ್: ದಿನಾಂಕ 21 .9 .2023 ರಂದು ಕೆಜಿಎಫ್ ಪೊಲೀಸ್ ಜಿಲ್ಲೆ ವತಿಯಿಂದ ರಾಬರ್ಸನ್ ಪೇಟೆ, ಅಂಡರ್ಸನ್ ಪೇಟೆ, ಉರಿಗಾಂ, ಬೆಮಲ್ ನಗರ .ಬೇತಮಂಗಲ ಕ್ಯಾಸಂಬಳ್ಳಿ ಕಾಮಸಮುದ್ರ ಬೂದಿಕೋಟೆ ಮತ್ತು ಬಂಗಾರಪೇಟೆ ಪೊಲೀಸ್ ಠಾಣೆಗಳಲ್ಲಿ ತೆರೆದ ಮನೆ (ಓಪನ್ ಹೌಸ್) ಕಾರ್ಯಕ್ರಮವನ್ನು ಹಮ್ಮಿಕೊಂಡು ಶಾಲೆಗಳ ವಿದ್ಯಾರ್ಥಿಗಳನ್ನು ಪೊಲೀಸ್ ಠಾಣೆಗಳಿಗೆ ಬರಮಾಡಿಕೊಂಡು ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆಯ ಬಗ್ಗೆ ಮತ್ತು ಮಕ್ಕಳ ಹಕ್ಕುಗಳ ಹಾಗೂ ಮಕ್ಕಳ ಮೇಲಿನ ದೌರ್ಜನ್ಯಗಳ ತಡೆಗೆ ಅನುಸರಿಸಬೇಕಾದ ರಕ್ಷಣಾತ್ಮಕ ಕ್ರಮಗಳ ಬಗ್ಗೆ ಅರಿವು ಮೂಡಿಸಿರುತ್ತದೆ. ಈ ಸಂದರ್ಭದಲ್ಲಿ ಎಲ್ಲಾ ವಲಯದ ಶಾಲೆಯ ವಿದ್ಯಾರ್ಥಿಗಳು ಪೊಲೀಸ್ ಸಿಬ್ಬಂದಿಗಳು ಇದ್ದರು

ಮಹಾತ್ಮಾ ಗಾಂಧೀಜಿ ಹಾಗೂ
ಲಾಲ್ ಬಹದ್ಧೂರ ಶಾಸ್ತ್ರೀಜಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧಾರ

ಧಾರವಾಡ :- ಜಿಲ್ಲಾಡಳಿತದಿಂದ ಅಕ್ಟೋಬರ್ 2 ರಂದು ಮಹಾತ್ಮಾ ಗಾಂಧೀಜಿ ಹಾಗೂ ಲಾಲ್‍ಬಹಾದ್ದೂರ ಶಾಸ್ತ್ರಿಜಿಯವರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುವ ಬಗ್ಗೆ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರ ಅಧ್ಯಕ್ಷತೆಯಲ್ಲಿ ಇಂದು (ಸೆ.21) ಜರುಗಿದ ಸಭೆಯಲ್ಲಿ ನಿರ್ಧರಿಸಲಾಯಿತು. ಜಿಲ್ಲಾಡಳಿತ, ವಾರ್ತಾ ಹಾಗೂ ಸಾರ್ವಜನಿಕ…

ಪ್ರತಿಷ್ಠಿತ ಈದ್ಗಾ ಮೈದಾನ ಗಣೇಶ್ ಮೂರ್ತಿ ವಿಸರ್ಜನೆ ; 2024ರಲ್ಲೂ ಮೋದಿ ಪ್ರಧಾನಿ :ಬಸನಗೌಡ ಪಾಟೀಲ್ ಯತ್ನಾಳ.

ಹುಬ್ಬಳ್ಳಿ :- 2024 ರಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ. ಆಗ ಪಾಕಿಸ್ತಾನದ ಲಾಹೋರದಲ್ಲೂ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತೇವೆ. ಯಾರಾದರೂ ತಾಕತ್ತಿದ್ದರೆ ತಡೆಯಿರಿ ಎಂದು ಬಿಜೆಪಿ ಶಾಸಕ ಬಸವಗೌಡ ಪಾಟೀಲ ಯತ್ನಾಳ ಗುಡುಗಿದರು. ಹುಬ್ಬಳ್ಳಿ ಈದ್ಗಾ ಮೈದಾನ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಯ…

ಪಾರಿವಾಳಕ್ಕಾಗಿ ಲಾಂಗ್ ಹಿಡಿದ ಯುವಕರ ಗ್ಯಾಂಗ್

ಕೊರಟಗೆರೆ ಬ್ರೇಕಿಂಗ್…, ಪಾರಿವಾಳಕ್ಕಾಗಿ ಲಾಂಗ್ ಹಿಡಿದ ಯುವಕರ ಗ್ಯಾಂಗ್.. ಪಾರಿವಾಳ ವಿಚಾರವಾಗಿ ಎರಡು ಗುಂಪಿನ ಯುವಕರ ನಡುವೆ ಗಲಾಟೆ.. ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದ ಕಾಳಿದಾಸ ಬಡಾವಣೆಯಲ್ಲಿ ಘಟನೆ.. ಸಂಜು ಎಂಬುವನು 2 ಸಾವಿರಕ್ಕೆ ಅಜಯ್ ಎಂಬುವನಿಂದ ಪಾರಿವಾಳ ಖರಿದಿಸಿದ್ದ.. ಪಾರಿವಾಳ…

ಗೋಕಾಕ: ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆ ಗೋಕಾಕ ಪೊಲೀಸರು 9 ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರು ಗೋಕಾಕ ಶಹರ, ಅಂಕಲಗಿ, ಗೋಕಾಕ ಗ್ರಾಮೀಣ ಭಾಗಗಳಲ್ಲಿ ದರೋಡೆ, ಸುಲಿಗೆ, ಬೈಕ್ ಹಾಗೂ ಜಾನುವಾರು ಕಳ್ಳತನ ಮಾಡುತ್ತಿದ್ದರು. ಗುರುನಾಥ ವಿರೂಪಾಕ್ಷ ಬಡಿಗೇರ ಎಂಬುವವರು ಆ.14ರಂದು ತಮ್ಮ ಬೈಕ್ ಅಡ್ಡಗಟ್ಟಿ ದರೋಡೆಕೋರರು ಚಿನ್ನದ ಚೈನ್, ಉಂಗುರ ಕದ್ದು ಪರಾರಿಯಾಗಿದ್ದಾಗಿ ಗೋಕಾಕ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಭೀಮಾಶಂಕರ ಗುಳೇದ ಐಪಿಎಸ್, ಎಸ್.ಪಿ. ಬೆಳಗಾವಿ ಜಿಲ್ಲೆ ರವರು, ಪ್ರಕರಣಗಳ ಪತ್ತೆಗಾಗಿ ಗೋಪಾಲ.ಆರ್.ರಾಠೋಡಸಿ.ಪಿ.ಐ ಗೋಕಾಕ ವೃತ್ತ ಇವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ಸದರಿ ತನಿಖಾ ತಂಡವು ಎಂ.ವೇಣುಗೋಪಾಲ ಹೆಚ್ಚುವರಿ ಎಸ್.ಪಿ.ಬೆಳಗಾವಿ ಹಾಗೂ ದೂದಪೀರ್ ಎಚ್ ಮುಲ್ಲಾ…