Category: Blog

Your blog category

ಶುದ್ಧ ಕುಡಿಯುವ ನೀರಿನ ಘಟಕಗಳ ಮಾಲೀಕರು ಎಚ್ಚರಿಕೆ ವಹಿಸಲಿ: ಕೆಜಿಎಫ್: ಮಲೀನಗೊಂಡ ನೀರು ಸೇವಿಸಿದರೆ ಅತಿಸಾರ, ಡೆಂಗ್ಯೂ, ಟೇಪ್ಹಾಯ್ಡ್ ಚಿಕನ್ ಗುನ್ಯಾ, ದಂತಹ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಾಗಿರುವುದರಿಂದ. ಕುಡಿಯುವ ನೀರಿನ ಘಟಕಗಳ ಮಾಲೀಕರು ಎಚ್ಚರಿಕೆ ವಹಿಸಬೇಕು ಎಂದು ತಹಶೀಲ್ದಾರ್ ಬಿ.ನಾಗವೇಣಿ ತಿಳಿಸಿದರು. ಕೆಜಿಎಫ್ ತಾಲೂಕ್ ಆಡಳಿತ ಭವನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅನಧಿಕೃತವಾಗಿ ಕುಡಿಯುವ ನೀರಿನ ಮಾರಾಟ. ಕೆರೆ ಪಕ್ಕದಲ್ಲಿ ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳನ್ನು ಕೊರೆಸುವುದು, ಚರಂಡಿಗಳ ಪಕ್ಕದಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪಿಸಿ ನೀರು ಪೂರೈಕೆ ಮಾಡುವವರ ಮೇಲೆ ಕ್ರಮ ಜರಗಿಸಲಾಗುವುದು ಎಂದರು. ಸಾರ್ವಜನಿಕರಿಗೆ ಕುಡಿಯುವ ನೀರು ಮಾರಾಟ ಮಾಡುವವರು ಆ ನೀರು ಕುಡಿಯಲು ಯೋಗ್ಯ ಇದೆಯೇ ಎಂಬುದನ್ನು ಪರೀಕ್ಷೆ ಮಾಡಿಸಿಕೊಳ್ಳಿ, ಯೋಗ್ಯವಲ್ಲದ ನೀರನ್ನು ಕ್ಲೋರಿ ನೀ ಕರೆಸಿ ಮತ್ತು ಕುಡಿಯಲು ಯೋಗ್ಯವಾಗಿದೆ ಎಂದು ಖಚಿತಪಡಿಸಿಕೊಂಡ ಬಳಿಕವಷ್ಟೇ ಸರೋಜನಿಕರಿಗೆ ಮಾರಾಟ ಮಾಡಬೇಕು . ಒಂದು ವೇಳೆ ಕುಡಿಯುವ ನೀರಿನಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಬೀರಿದ್ದಲ್ಲಿ ಅಂತಹ ನೀರಿನ ಘಟಕಗಳ ಮಾಲೀಕರ ಮೇಲೆ ಕ್ರಿಮಿನಲ್ ಮೊ ಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದರು. ನಗರದಲ್ಲಿ ಕುಡಿಯುವ ನೀರು ಮಾರಾಟ ಮಾಡುವವರು ತಿಂಗಳಗೊಮ್ಮೆ ನೀರಿನ ಪರೀಕ್ಷೆ ಮಾಡಿಸಿಕೊಳ್ಳಿ ಶೇಕಡ 2.3ರಷ್ಟು ಮಾದರಿಗಳಲ್ಲಿ ಎಸ್ ಎಸ್ ಪಿ ಪಿ ಕಂಡು ಬಂದರೆ ಕುಡಿಯಲು ನೀರು ಯೋಗ್ಯವಾಗಿರುವುದಿಲ್ಲ. ಇಂತಹ ನೀರನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಲು ಯೋಗ್ಯವಾಗಿರುವುದಿಲ್ಲ ಆದ್ದರಿಂದ ಅಂತಹ ನೀರನ್ನು ಮಾರಾಟ ಮಾಡಬೇಡಿ ಎಂದು ಹೇಳಿದರು. ನಗರದ ಹಲವು ಬಡಾವಣೆಗಳಲ್ಲಿ ಖಾಸಗಿ ವ್ಯಕ್ತಿಗಳು ನಗರಸಭೆ ಅಥವಾ ಜಲ ಮಂಡಳಿಯಿಂದ ಯಾವುದೇ ಪರವಾನಗಿ ಪಡೆಯದೆ ಆರ್ ಓ ಪ್ಲಾಂಟ್ಗಳನ್ನು ಸ್ಥಾಪಿಸಿಕೊಂಡು ಕುಡಿಯುವ ನೀರನ್ನು ಮಾರಾಟ ಮಾಡುತ್ತಿದ್ದು, ಅಂತಹ ಆರ್ ಓ ಘಟಕಗಳ ವಿರುದ್ಧ ಸಂಬಂಧ ಪಟ್ಟ ಇಲಾಖೆಯವರು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಸಾರ್ವಜನಿಕರಿಂದ ದೂರುಗಳು ಬಂದಿವೆ ಎಂದರು.

ಸುಂದರ ಸಮಾಜದ ನಿರ್ಮಾಣದಲ್ಲಿ ಶಿಕ್ಷಕಕರ ಪಾತ್ರ ಮಹತ್ವದ್ದು : ಪ್ರೊ.ಬಿ.ಎಸ್.ಬಿರಾದಾರ ಸುಂದರ, ಸ್ವಸ್ಥ, ಸದೃಢ, ಸಮೃದ್ಧ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಎಸ್.ಬಿರಾದಾರರವರು ನುಡಿದರು. ಅವರು ಬೀದರ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಆದರ್ಶ ಗುರು ಸದಾ ವಿದ್ಯಾರ್ಥಿಗಳ ಪ್ರೀತಿಗೆ, ಭಕ್ತಿಗೆ ಪಾತ್ರನಾಗಿರುತ್ತಾನೆ. ಕೇವಲ ಸಂಬಳಕ್ಕಾಗಿ ದುಡಿಯುವವ ಗುರುವಲ್ಲ. ಸತತ ಅಭ್ಯಾಸ, ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸಲು ಶ್ರಮಪಡುವವನೇ ನಿಜವಾದ ಗುರು. ಶಿಕ್ಷಕರ ಮೇಲೆ ಮಹತ್ವದ ಜವಾಬ್ದಾರಿಯಿದೆ. ಉತ್ತಮ ಶಿಕ್ಷಕನಿಂದ ಮಾತ್ರ ಸುಂದರ, ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಸ್ವತಃ ತಂದೆ ತಾಯಿಗಳಿಗಿಂತಲೂ ತಮ್ಮ ಅಧ್ಯಾಪಕ, ಗುರುವಿನಲ್ಲಿ ವಿದ್ಯಾರ್ಥಿ ದೃಢವಾದ ನಂಬಿಕೆ ವಿಶ್ವಾಸವಿಟ್ಟಿರುತ್ತಾನೆ. ಹಾಗಾಗಿ ಗುರುವನ್ನು ನಂಬಿ ಜ್ಞಾನಾರ್ಜನೆಗಾಗಿ ಬರುವ ವಿದ್ಯಾರ್ಥಿಗಳನ್ನು ಮಕ್ಕಳಂತೆ ಜ್ಞಾನಧಾರೆಯೆರೆಯುವುದು ಯೋಗ್ಯ ಶಿಕ್ಷಕನ ಕರ್ತವ್ಯ. ಅಂತಹ ಸಮರ್ಥ ಆ ಮೂಲಕ ಗುರುವೆನಿಸಿಕೊಳ್ಳುವವನು ವಿದ್ಯಾರ್ಥಿಗಳ ಹೃದಯದಲ್ಲಿ ಚಿರಸ್ಥಾಯಿಯಾಗಿರುತ್ತಾನೆ. ಅಂತಹ ಗುರುಗಳ, ಅಧ್ಯಾಪಕರ ಅವಶ್ಯಕತೆಯಿದೆ. ಗುರು ಗುರುವಾಗಿರಬೇಕೇ ವಿನಃ ಲಘುವಾಗಿರಬಾರದು ಎಂದರು. ವೇದಿಕೆಯಲ್ಲಿದ್ದ ಅತಿಥಿಗಳಾಗಿದ್ದ ಬೀದರ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಪರಮೇಶ್ವರ ನಾಯಕರವರು ಮಾತನಾಡುತ್ತ ಶಿಕ್ಷಕರನ್ನು ವಿದ್ಯಾರ್ಥಿಗಳು ಅನುಕರಿಸುತ್ತಾರೆ. ಆದ್ದರಿಂದ ಶಿಕ್ಷಕರು ತಮ್ಮ ನಡೆ, ನುಡಿ, ವೇಶಭೂಷಣದಲ್ಲಿಯೂ ಶಿಸ್ತನ್ನು ಕಾಪಾಡಿಕೊಳ್ಳವುದು ಅವಶ್ಯಕವಾಗಿದೆ ಎಂದರು. ದ್ರೋಣಾಚಾರ್ಯರು ಕೌರವರು ಹಾಗೂ ಪಾಂಡವರೀರ್ವರಿಗೂ ವಿದ್ಯೆ ಧಾರೆಯೆರೆದರು. ಆದರೆ ಈರ್ವರೂ ಅದನ್ನು ಅವರು ಸ್ವೀಕರಿಸಿದ್ದೇ ವಿಭಿನ್ನವೆಂದರು. ವಿದ್ಯೆ ಮಾನವನನ್ನು ಮಹಾಮಾನವನನ್ನಾಗಿ ನಿರ್ಮಿಸಬೇಕೆಂದರು. ವೇದಿಕೆಯಲ್ಲಿ ಸ್ನಾತಕೋತ್ತರ ಕೇಂದ್ರ ಹಾಲಹಳ್ಳಿಯ ವಿಶೇಷಾಧಿಕಾರಿಗಳು ಮಾತನಾಡುತ್ತ ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನ ಪಡೆಯಬೇಕೆಂದರು. ಕಾರ್ಯಕ್ರಮದಲ್ಲಿ ಡಾ.ರಾಮಚಂದ್ರ ಗಣಾಪೂರ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಕು.ಅರ್ಚನಾ, ಮಲ್ಲಯ್ಯಸ್ವಾಮಿ , ಅಧ್ಯಾಪಕರಾದ ಡಾ.ಮಿಲಿನ್, ಡಾ.ಮುಸ್ತಾಖೀನ್‌ರವರು ಮಾತನಾಡಿದರು. ಡಾ.ಅಂಬರೀಶ ವೀರನಾಯಕ ವಂದಿಸಿದರು, ಡಾ.ಶಿವಕುಮಾರ ಸಂಗನ್‌ರವರು ನಿರೂಪಿಸಿದರು.

ಬೀದರ್ ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವಾ ಗ್ರಾಮದಲ್ಲಿ ತುತ್ತಾಗಿ ಅವಶ್ಯಕತೆ ಇರುವ ಕಾಮಗಾರಿಗಳ ಮಾಹಿತಿ ನೀಡಬೇಕು

ಬೀದರ್ ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮದಲ್ಲಿ ತುರ್ತಾಗಿ ಅವಶ್ಯಕತೆ ಇರುವ ಕಾಮಗಾರಿಗಳ ಮಾಹಿತಿ ನೀಡಬೇಕು ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕೆ ಮಳೆಗಾಲ ಇರುವ ಕಾರಣ ಸರ್ಕಾರಿ ಶಾಲೆ, ಆಸ್ಪತ್ರೆಗಳ ಕಟ್ಟಡ ಸೋರಿಕೆ ಸಮಸ್ಯೆಗಳನ್ನು ಶೀಘ್ರದಲ್ಲಿ ರೀಪೇರಿ ಪೂರ್ಣಗೊಳಿಸಬೇಕು ನೀರಲಕ್ಷö್ಯ ವಹಿಸಿದರೆ…

ಸುಳ್ಳು ಜಾತಿ ಪ್ರಮಾಣ ಪತ್ರ ಕಾನೂನು ಬಾಹಿರವಾಗಿ ದುರ್ಬಳಕೆ

ಬೀದರ ನಗರದ ಬೋಯಿಗಲ್ಲಿ ನಿವಾಸಿಯಾಗಿರುವ ಶಶಿಕಾಂತ ತಂದೆ ನಾಗೇಂದ್ರರಾವ ಹಿವರೆ ಜಾತಿ ಹಿಂದುಳಿದ ಪ್ರ ವರ್ಗ-1ಕ್ಕೆ ಸೇರಿರುವುದು, ಇವರ ಜನ್ಮ ದಿನಾಂಕ: 08/08/1965 ರಂತೆ ಇರುತ್ತದೆ. ಸರ್ಕಾರಿ ಹಿಂದಿ ಪಾಠ ಶಾಲೆಯ ನೋಂದಣಿ ಪುಸ್ತಕದ ಕ್ರಮ ಸಂಖ್ಯೆ: 708/1971-72 ರ ಜಾತಿ…

ಕೆ.ಆರ್.ಪುರ:

ಜನತಾ ರೈತ ಸಂಘದ ನೂತನ ಕಚೇರಿ ಉದ್ಘಾಟನೆ. ಬೆಂಗಳೂರಿನಲ್ಲಿ ಪ್ರಥಮ ಜನತಾ ರೈತ ಸಂಘದ ನೂತನ ಕಚೇರಿಯನ್ನುರಾಮಮೂರ್ತಿನಗರದಲ್ಲಿ ರಾಜ್ಯಾಧ್ಯಕ್ಷ ಆರ್ ಈರೇಗೌಡ ಅವರು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ರಾಜ್ಯಾಧ್ಯಕ್ಷ ಆರ್ ಈರೇಗೌಡ ಅವರು ದೇಶದಲ್ಲಿ ಕೃಷಿ ಹಾಗೂ ಕೃಷಿಕರನ್ನು ಕಡೆಗಣಿಸಲಾಗಿದೆ.…

ಕೆ.ಆರ್.ಪುರ:

ಜನತಾ ರೈತ ಸಂಘದ ನೂತನ ಕಚೇರಿ ಉದ್ಘಾಟನೆ. ಬೆಂಗಳೂರಿನಲ್ಲಿ ಪ್ರಥಮ ಜನತಾ ರೈತ ಸಂಘದ ನೂತನ ಕಚೇರಿಯನ್ನುರಾಮಮೂರ್ತಿನಗರದಲ್ಲಿ ರಾಜ್ಯಾಧ್ಯಕ್ಷ ಆರ್ ಈರೇಗೌಡ ಅವರು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ರಾಜ್ಯಾಧ್ಯಕ್ಷ ಆರ್ ಈರೇಗೌಡ ಅವರು ದೇಶದಲ್ಲಿ ಕೃಷಿ ಹಾಗೂ ಕೃಷಿಕರನ್ನು ಕಡೆಗಣಿಸಲಾಗಿದೆ.…

ಮಹದೇವಪುರ:ಶ್ರೀ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಮಹದೇವಪುರದ ಕ್ಷೇತ್ರದ ಬಿಜೆಪಿ ಪ್ರಾಧಾ‌ನ ಕಾರ್ಯದರ್ಶಿಗಳಾದ ಎಲ್ .ರಾಜೇಶ್ ಅವರ ಒಂದುವರೆ ವರ್ಷದ ಅವಳಿ ಪುತ್ರರಾದ ಭವೈಶ್ ಚರಿತ್ ರಾಜ್ ಮತ್ತು ಭವಿಶ್ ಸಾಯಿ ತೇಜಸ್ವಿ ರಾಜ್ ರವರಿಗೆ ಬಾಲಕೃಷ್ಣ ನ ವೇಶ ತೊಡಿಸಿ ಸಂಭ್ರಮಿಸಿದರು.

ಗುರುವಂದನಾ ಕಾರ್ಯಕ್ರಮ : ಶಿಕ್ಷಕರಿಗೆ ಸನ್ಮಾನ :

ಬೆಂಗಳೂರು : ಶಿಕ್ಷಕರ ದಿನಾಚರಣೆ ಪ್ರಯುಕ್ತ ಟೆಲಿಕಾಂ ಎಂಪ್ಲಾಯ್ಸ್ ಅಂಡ್ ಅದರ್ಸ್ ಹೌಸಿಂಗ್ ವೆಲ್ಫೇರ್ ಟ್ರಸ್ಟ್ ವತಿಯಿಂದ ನೆಲಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಗುರುವಂದನೆ ಹಾಗೂ ಶಾಲಾ ಮಕ್ಕಳಿಗಾಗಿ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ದೇಶಿಸಿ ಟ್ರಸ್ಟ್‌ನ…

ಶ್ರೀ ಕೃಷ್ಣ ಜನ್ಮಾಷ್ಟಮಿ.

ಯಲಹಂಕ ಕೋಗಿಲು ಗ್ರಾಮದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀ ಕೃಷ್ಣ ಕಳಷ್ಯ ಇವರಿಂದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ. ಭರತನಾಟ್ಯ. ಮಕ್ಕಳ ಮನರಂಜನ. ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯಿತು ಈ ಕಾರ್ಯಕ್ರಮದಲ್ಲಿ ಊರಿನ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮದ. ಭಾಗವಹಿಸಿದರು…