
ಕೋಡ್ ಎಐ: ಬೆಂಗಳೂರಿನಲ್ಲಿ ನಡೆದ ಎಐ ಮತ್ತು ಡೇಟಾ ಸೈನ್ಸ್ ಕುರಿತ 2 ದಿನದ ಅಂತಾರಾಷ್ಟ್ರೀಯ ಸಮ್ಮೇಳನ ಮುಕ್ತಾಯ
ಬೆಂಗಳೂರು, 7 ಜುಲೈ 2024: ಸಿಜಿಐ ಅರ್ಪಿಸಿದ, ಸ್ವೀಡನ್ನ ಲಿನ್ನಿಯಸ್ ವಿಶ್ವವಿದ್ಯಾಲಯ ಮತ್ತು ಎಸ್ಯುಪಿಎಸ್ಐ (ಯೂನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸಸ್ ಆಂಡ್ ಆರ್ಟ್ಸ್ ಆಫ್ ಸದರ್ನ್ ಸ್ವಿಟ್ಜರ್ ಲ್ಯಾಂಡ್) ಸಹಯೋಗದಲ್ಲಿ ಬೆಂಗಳೂರಿನ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಎಎಎಚ್ಇ- ಮಾಹೆ)ನ ಒಂದು ಘಟಕವಾಗಿರುವ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ತನ್ನ ಬೆಂಗಳೂರಿನ ಕ್ಯಾಂಪಸ್ ನಲ್ಲಿ ಜುಲೈ 3 ಮತ್ತು 4ರಂದು ಕೋಡ್-ಎಐ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಜುಲೈ 3 ರಂದು ಎಂಐಟಿಯ ಶ್ರೀಮತಿ ಭಾವನಾ (ಸಂಶೋಧನಾ ವಿದ್ವಾಂಸೆ) ಸ್ವಾಗತಿಸಿದರು ಮತ್ತು ಬೆಂಗಳೂರು ಎಂಐಟಿಯ ಎಚ್ಓಡಿ-ಐಟಿ ಡಾ. ದಯಾನಂದ ಪಿ (ಜನರಲ್ ಚೇರ್) ಸ್ವಾಗತ ಭಾಷಣ ಮಾಡಿದರು. ಭಾಗವಹಿಸಿದ್ದ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಬೆಂಗಳೂರು ಎಂಐಟಿ ಐಟಿಯ ಅಸೋಸಿಯೇಟ್ ಪ್ರೊಫೆಸರ್ ಡಾ. ಗುರುರಾಜ್ ಹೆಚ್ ಎಲ್ (ಪ್ರೋಗ್ರಾಂ ಚೇರ್) ಅವರು ಸಮ್ಮೇಳನದ ಕುರಿತು ಕೆಲವು ಒಳನೋಟವುಳ್ಳ ಆರಂಭಿಕ ಭಾಷಣ ಮಾಡಿದರು. ನಂತರ ಮುಖ್ಯ ಅತಿಥಿಯಾಗಿದ್ದ ಅಶೋಕ್ ಚತುರ್ವೇದುಲಾ, ಹಿರಿಯ ಉಪಾಧ್ಯಕ್ಷರು, ಹಣಕಾಸು ಸೇವೆಗಳು, ಏಷ್ಯಾ ಪೆಸಿಫಿಕ್ ಗ್ಲೋಬಲ್ ಡೆಲಿವರಿ ಸೆಂಟರ್ಸ್ ಆಫ್ ಎಕ್ಸಲೆನ್ಸ್, ಸಿಜಿಐ ಅವರನ್ನು ಬೆಂಗಳೂರಿನ ಎಂಐಟಿ ಐಟಿ ಸಹ ಪ್ರಾಧ್ಯಾಪಕರಾದ ಡಾ. ಗೋಪಾಲಕೃಷ್ಣನ್ ಟಿ (ಕಾರ್ಯಕ್ರಮದ ಅಧ್ಯಕ್ಷರು) ಪರಿಚಯ ಮಾಡಿದರು. ಐಟಿ ಸಹಾಯಕ ಪ್ರಾಧ್ಯಾಪಕರಾದ ಡಾ ಯಶಸ್ವಿನಿ ಸಮಾರಂಭದ ನಿರ್ವಹಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಶೋಕ್ ಚತುರ್ವೇದುಲಾ ಅವರು, “ಕೃತಕ ಬುದ್ಧಿಮತ್ತೆಯು ನಾವು ವಾಸಿಸುವ ಮತ್ತು ಕೆಲಸ ಮಾಡುವ ವಿಧಾನವನ್ನು ತ್ವರಿತವಾಗಿ ಪರಿವರ್ತಿಸುವುದರಿಂದ, ಮುಂಬರುವ ವರ್ಷಗಳಲ್ಲಿ ಪ್ರತಿಭೆಗಳ ಹುಡುಕಾಟಕ್ಕೆ ಉದ್ಯಮ ಮತ್ತು ಶೈಕ್ಷಣಿಕ ನಡುವಿನ ಸಹಯೋಗವು ಮುಖ್ಯವಾಗಿ ಬೇಕಾಗಿದೆ. ಉದ್ಯಮದ ನಾಯಕರಾಗಿ ಎಐಯಲ್ಲಿ ನುರಿತ ಮಾತ್ರವಲ್ಲದೆ ಹೊಸತನವನ್ನು ಅಳವಡಿಸಿಕೊಳ್ಳಲು ಸಿದ್ಧರಾಗಿರುವ ಮುಂದಿನ ಪೀಳಿಗೆಯನ್ನು ಪೋಷಿಸಲು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸಹಕರಿಸುವುದು ನಮ್ಮ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಸಿಜಿಐ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಎಂಐಟಿಯೊಂದಿಗೆ ಸಹಯೋಗ ಮಾಡಲು ಸಂತೋಷವಾಗಿದೆ ಮತ್ತು ಈ ಸಮಾವೇಶವು ಮುಂದಿನ ಬದಲಾವಣೆಯ ಅಲೆಯನ್ನು ಉದಾಹರಣೆಯ ಮೂಲಕ ಮುನ್ನಡೆಸುವ ನಮ್ಮ ಬದ್ಧತೆಯನ್ನು ಮತ್ತಷ್ಟು ಸ್ಪಷ್ಟಪಡಿಸುತ್ತದೆ” ಎಂದು ಹೇಳಿದರು.
ಮುಖ್ಯ ಅತಿಥಿಗಳ ಮಾತುಗಳ ನಂತರ ಡಾ. ಪ್ರೇಮಾ ಕೆ ವಿ (ಸಹ ನಿರ್ದೇಶಕರು ಮತ್ತು ಜನರಲ್ ಚೇರ್) , ಸಭಿಕರನ್ನು ಉದ್ದೇಶಿಸಿ ಮಾತನಾಡಿದರು ಮತ್ತು ಗೌರವಾನ್ವಿತ ಅತಿಥಿಗಳಾದ ಡಾ. ಫ್ರಾನ್ಸೆಸ್ಕೊ ಫ್ಲಾಮಿನಿ (ಪ್ರೊಫೆಸರ್, ಎಸ್ಯುಎಸ್ಪಿಐ, ಸ್ವಿಟ್ಜರ್ಲೆಂಡ್) ಮತ್ತು ಡಾ. ಸಂದೀಪ್ ಚಕ್ರವರ್ತಿ (ಅಸೋಸಿಯೇಟ್ ಪ್ರೊಫೆಸರ್, ಐಐಟಿ ಖರಗ್ಪುರ) ಅವರನ್ನು ಪರಿಚಯಿಸಿದರು.
ಕಾರ್ಯಕ್ರಮದ ಕುರಿತು ಮಾತನಾಡಿದ ಡಾ. ಫ್ರಾನ್ಸೆಸ್ಕೊ ಫ್ಲಾಮಿನಿಸೈಡ್, “ಈ ಕಾರ್ಯಕ್ರಮದ ಪ್ರಾಥಮಿಕ ಗುರಿಯು ಜಾಗತಿಕ ಪ್ರತಿಭೆಯನ್ನು ಪ್ರದರ್ಶಿಸುವುದು ಮತ್ತು ನವೀನ ಮನಸ್ಸುಗಳ ಮೇಲೆ ಬೆಳಕು ಚೆಲ್ಲುವುದು. ಇಂದು ನಾವು ಎದುರಿಸುತ್ತಿರುವ ಅಸಂಖ್ಯಾತ ಸಾಮಾಜಿಕ ಸವಾಲುಗಳನ್ನು ನಿಭಾಯಿಸಲು ಎಐ ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಳ್ಳುವುದು ಮುಖ್ಯವಾಗಿದೆ ಮತ್ತು ಈ ಸಮ್ಮೇಳನವು ವ್ಯಕ್ತಿಗಳು ತಮ್ಮ ಉತ್ಪನ್ನಗಳಲ್ಲಿ ಎಐ ಅನ್ನು ಚಿಂತನಶೀಲವಾಗಿ ಸಂಯೋಜಿಸಲು ಪ್ರೇರೇಪಿಸುವ ಗುರಿಯನ್ನು ಹೊಂದಿದೆ. ಈ ಪ್ಲಾಟ್ಫಾರ್ಮ್ ವಿವಿಧ ವಿಭಾಗಗಳ ತಜ್ಞರೊಂದಿಗೆ ಸಂಪರ್ಕ ಹೊಂದಲು ಮತ್ತು ಅದ್ಭುತ ಪರಿಹಾರಗಳಲ್ಲಿ ಸಹಯೋಗ ಮಾಡಿಕೊಳ್ಳಲು ಅಸಾಧಾರಣ ಅವಕಾಶವನ್ನು ನೀಡುತ್ತದೆ” ಎಂದು ಹೇಳಿದರು.
ಎಂಐಟಿ-ಬಿಯ ನಿರ್ದೇಶಕ ಮತ್ತು ಜನರಲ್ ಚೇರ್ ಡಾ. ಜಗನ್ನಾಥ್ ಕರೋಡಿ ಅವರು ಮಾತನಾಡಿ, “ನಾವು ಬಹಳ ಆಸಕ್ತಿದಾಯಕ ಸಮ್ಮೇಳನವನ್ನು ನಡೆಸಿದ್ದೇವೆ. ಬಿ.ಟೆಕ್. ಇನ್ ಡೇಟಾ ಸೈನ್ಸ್ ಮತ್ತು ಎಐ ಭಾರತದಲ್ಲಿ ಹೊಸ ಮತ್ತು ಹೆಚ್ಚು ಅಗತ್ಯವಿರುವ ಸಂಯೋಜನೆಯಾಗಿದೆ. ಅದಕ್ಕೆ ಅಗತ್ಯವಿರುವ ತಜ್ಞರನ್ನು ಕರೆತರುವ ಮೂಲಕ ಎರಡೂ ಕ್ಷೇತ್ರಗಳ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಹೊಸ ಒಳನೋಟಗಳನ್ನು ನೀಡುತ್ತದೆ. ಒಗ್ಗಟ್ಟಾಗಿ ನಮ್ಮ ವಿದ್ಯಾರ್ಥಿಗಳಿಗಾಗಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಕ್ಕಾಗಿ ನಾನು ಅಧ್ಯಾಪಕರು ಮತ್ತು ಸಿಜಿಐ ಅನ್ನು ಅಭಿನಂದಿಸುತ್ತೇನೆ” ಎಂದು ಹೇಳಿದರು.
ಡಾ. ಮಧು ವೀರರಾಘವನ್ (ಪ್ರೊ ವೈಸ್ ಚಾನ್ಸೆಲರ್, ಮಾಹೆ ಬೆಂಗಳೂರು) ಮಾತನಾಡಿ, “ನಾನು ಅಧ್ಯಾಪಕರು ಮತ್ತು ಸಿಜಿಐ ಯನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಮತ್ತು ಅಭ್ಯಾಸಿಗಳಲ್ಲಿ ಸಹಯೋಗದ ಕೆಲಸದ ಕುರಿತು ಗಮನ ಸೆಳೆಯಲು ಬಯಸುತ್ತೇನೆ ಎಂದು ಹೇಳಿದರು.