
ದಿನಾಂಕ :06-07-2024 ರಂದು ನಡೆದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು (ರಿ.) ದೊಡ್ಡಬಳ್ಳಾಪುರ, ಬೆಂಗಳೂರು -561203 ಹಾಗೂ ಕರ್ನಾಟಕ ಖಾಸಗಿ ಶಾಲಾ ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟ (ರಿ.) ಬೆಂಗಳೂರು ಇವರ ಸಹಯೋಗದೊಂದಿಗೆ ಬೆಂಗಳೂರು ಉತ್ತರ ಶೈಕ್ಷಣಿಕ ಜಿಲ್ಲಾಮಟ್ಟದ ಮೂರನೇ “ವೈಜ್ಞಾನಿಕ ಸಮ್ಮೇಳನ 2024″ ಮತ್ತು ನಾಡು ಪ್ರಭು ಕೆಂಪೇಗೌಡರ 515 ನೇ ಜಯಂತೋತ್ಸವ ಕಾರ್ಯಕ್ರಮವನ್ನು ಆಚರಿಸಲಾಗಿತ್ತು ಜೊತೆಗೆ ಸಮಾಜದಲ್ಲಿ ಶೈಕ್ಷಣಿಕ ಕ್ಷೇತ್ರ ಹಾಗೂ ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ಸಾಧನೆಗೈದ ಅತ್ಯುತ್ತಮ ಸಾಧಕರನ್ನ ಗುರುತಿಸಿ ” ನಾಡಪ್ರಭು ಕೆಂಪೇಗೌಡ ಪ್ರಶಸ್ತಿ”ಯನ್ನು ನೀಡಿ ಗೌರವಿಸಲಾಯಿತು, ಸುಮಾರು 55ಕ್ಕೂ ಹೆಚ್ಚು ಜನರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು ಇದರಲ್ಲಿ ವಿಶೇಷವಾಗಿ ನಮ್ಮ ಯಲಹಂಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲರಾದ ಡಾ. ಗೀತಾ ಎನ್ ರವರಿಗೆ ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಅತ್ಯಮೂಲ್ಯ ಸೇವೆಯನ್ನು ಗುರುತಿಸಿ 2024ನೇ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರುಸ್ಕೃತರಾಗಿ ಆಯ್ಕೆಯಾಗಿ ಡಾ. ಗೀತಾ ಎನ್ ಮೇಡಂ ರವರಿಗೆ ದಿನಾಂಕ :06-07-2024 ರಂದು ಯಲಹಂಕದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮದಲ್ಲಿ ಮಾನ್ಯ ವಿ ಗೋಪಾಲಗೌಡ ರವರು ವಿಶ್ರಾಂತ ನ್ಯಾಯಾಧೀಶರು ಸರ್ವೋಚ್ಚ ನ್ಯಾಯಾಲಯ, ಭಾರತ ಸರ್ಕಾರ ಇವರಿಂದ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಡಾ. ಗೀತಾ. ಎನ್ ರವರು ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಯಲಹಂಕ ಇಲ್ಲಿ ಪ್ರಿನ್ಸಿಪಾಲರಾಗಿ ಮತ್ತು ಪ್ರಾಧ್ಯಾಪಕರಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದು ಇವರು
ದಿನಾಾಂಕ: 25-06-1967 ರಂದು ಚಿತ್ರದುರ್ಗ ಜಿಲ್ಲೆಯ ದಲೊಡ್ಡಘಟ್ಟ ಗ್ರಾಮದಲ್ಲಿ ಜನಿಸಿದರು.
ವಿದ್ಯಾರ್ಹತೆ : M.A, PhD
ಮುಗಿಸಿ ನಂತರದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದಂತಹ ಚಾಪನ್ನ ಮೂಡಿಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಯ ಕಡೆ ಸದಾ ಗಮನವಹಿಸಿ ಶಿಕ್ಷಣ ವೃತ್ತಿಯಲ್ಲಿ ಸದಾ ಸೇವಿಗೆ ಸಿದ್ದ ಎಂಬಂತೆ ಶಿಕ್ಷಣ ಕ್ಷೇತ್ರಕ್ಕೆ ವಿದ್ಯಾರ್ಥಿಗಳಿಗಾಗಿ ಶ್ರಮಿಸಿ ತಮ್ಮದೇ ಆದಂತ ಕೊಡುಗೆಯನ್ನು ಈ ಕ್ಷೇತ್ರಕ್ಕೆ ನೀಡಿದ್ದು, ಇವರು ಕೃತಿಕಾರರು, ಲೇಖಕಿ ಕೂಡ ಹೌದು ಇವರ ಪ್ರಕಟಿತ ಕೃತಿಗಳು:
- ಆಧುನಿಕ ಮಹಿಳಾ ಅಭಿವ್ಯಕ್ತಿ ( ಮಹಾಪ್ರಬಂಧ ) 2. ಜೀವನದಿ (ವಿಮರ್ಶೆ ) ಹೀಗೆ ಅನೇಕ ಕೃತಿಗಳನ್ನು ಇವರು ರಚಿಸಿ ಪ್ರಕಟಿಸಿದ್ದಾರೆ. ಇವರಿಗೆ 2020 ರಲ್ಲಿ “ವಿಶೇಷ ಲೇಖಕಿ ” ಎಂದು ಕರ್ನಾಟಕ ಲೇಖಕಿಯರ ಸಂಘ ವತಿಯಿಂದ ವಿತರಿಸಲಾಯಿತು. ಇನ್ನು ಇವರ ಶೈಕ್ಷಣಿಕ ಚಟುವಟಿಕೆಗಳೆಂದರೆ
1.ಬೆಂಗಳೂರು ವಿಶ್ವವಿದ್ಯಾನಿಲಯದ BOS ಮತ್ತು BOE ಸದಸ್ಯರಾಗಿ ಕಾರ್ಯನಿರ್ವಹಣೆ 2. ಹಂಪಿ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಪಿ ಎಚ್ ಡಿ ಗೈಡ್ ಆಗಿ ಕಾರ್ಯ ಹೀಗೆ ಹಲವಾರು ಹೆಚ್ಚಿನ ಜವಾಬ್ದಾರಿಗಳನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ವಹಿಸಿಕೊಂಡು . ವಿದ್ಯಾರ್ಥಿ ಸ್ನೇಹಿ ಪ್ರಿನ್ಸಿಪಾಲರಾಗಿ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರಿಗೆ ಈ ವರ್ಷದ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಲಭಿಸಿರುವುದು ಸಂತಸದ ವಿಷಯವಾಗಿದೆ.