Month: September 2023

Dr G V ಶ್ರೀನಿವಾಸ್ ಮೂರ್ತಿ,(ಕೋಗಿಲು) ಸಹ ಪ್ರಾಧ್ಯಾಪಕರು ಮತ್ತು ಪಿಜಿ (Mcom) ಕೋ ಆರ್ಡಿನೇಟರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಿಕ್ಕಬಳ್ಳಾಪುರ ಇಲ್ಲಿ ದಿನಾಂಕ 16- 9 – 2023 ರಂದು ನಡೆದ ಪುಸ್ತಕ ಬಿಡುಗಡೆಗೊಳಿಸುವ ಕಾರ್ಯಕ್ರಮದಲ್ಲಿ ಡಾ. ಜಿ ವಿ ಶ್ರೀನಿವಾಸಮೂರ್ತಿ ಅವರು ಬರೆದಿರುವ ಮೂರು ಪುಸ್ತಕಗಳನ್ನು(1.ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್ 2.ಫೈನಾನ್ಸಿಯಲ್ ಮ್ಯಾನೇಜ್ಮೆಂಟ್’ 3.ಬಿಸಿನೆಸ್ ಮ್ಯಾನೇಜ್ಮೆಂಟ್ ಮತ್ತು ಸ್ಟಾರ್ಟಪ್ಸ್) ಕೋಲಾರ ಜಿಲ್ಲಾಧಿಕಾರಿಯದಂತಹ ಶ್ರೀ ಅಕ್ರಂ ಪಾಷರವರು ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯದಂತಹ ಶ್ರೀ ರವೀಂದ್ರರವರು ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದಂತಹ ಡಾ. ಮುನಿರಾಜುರವರು ಮತ್ತು ಡಾ. ಸುನಿತ ಮತ್ತು ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ದಾನದಲ್ಲಿ ಶ್ರೇಷ್ಠದಾನ ರಕ್ತದಾನ

ದಾನದಲ್ಲಿಶ್ರೇಷ್ಠದಾನರಕ್ತದಾನ ವರದಿ:ಮೇಘರಾಜ ವಾಲಿಕಾರ ಇಂಡಿ:ನಗರ ಸಂಘ-ಸಂಸ್ಥೆಗಳ, ಶ್ರೀ ಶಿವ ಬಸವ ಕ್ಲಿನಿಕ್ ಸ್ಟೇಷನ್ ರೋಡ್ ಇಂಡಿ.ರೋಟರಿ ನ್ಯಾಷನಲ್ ಲಯನ್ಸ್ ಕ್ಲಬ್ ಇಂಡಿ,ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಜಿಲ್ಲಾ ಡಾಪ್ಕೋ ಅಧಿಕಾರಿಗಳ ರಕ್ತನಿಧಿ ಘಟಕ ವಿಜಯಪುರ, ತಾಲೂಕ ಆರೋಗ್ಯ ಇಲಾಖೆ…

ಶ್ರೀ ಗಣೇಶ ಚತುರ್ಥಿಯ ಬಗ್ಗೆ ನಿಮಗಿವು ತಿಳಿದಿವೆಯೇ? – ಈ ಕುರಿತು ಓದಿರಿ, ಸನಾತನ ಸಂಸ್ಥೆಯ ವಿಶೇಷ ಲೇಖನ !

ಗಣೇಶ ಚತುರ್ಥಿಯನ್ನು ಕುಟುಂಬದಲ್ಲಿ ಯಾರು ಆಚರಿಸಬೇಕು, ಗಣೇಶ ಚತುರ್ಥಿಯನ್ನು ಆಚರಿಸುವುದರ ಮಹತ್ವವೇನು, ಗಣೇಶ ಚತುರ್ಥಿಯಂದು ನೂತನ ಮೂರ್ತಿಯನ್ನು ಏಕೆ ತರಬೇಕು, ಗಣೇಶ ಮೂರ್ತಿಯು ಭಂಗವಾದರೆ ಅದರ ಪರಿಹಾರಗಳೇನು ಈ ವಿಷಯಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ. ಕುಟುಂಬದಲ್ಲಿ ಯಾರು ಆಚರಿಸಬೇಕು ?ಗಣೇಶ…

ಚಿಕ್ಕಬಳ್ಳಾಪುರ: ಅಖಿಲ ಭಾರತ ಮಹಿಳಾ ಕಾಂಗ್ರೆಸ್ 40 ನೇ ಸಂಸ್ಥಾಪನಾ ದಿನವನ್ನು ಚಿಕ್ಕಬಳ್ಳಾಪುರದಲ್ಲಿ  ಆಚರಿಸಲಾಯಿತು.ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಯಾಸ್ಮಿನ್ ತಾಜ್,ರಾಜ್ಯ ಮಹಿಳಾ ಉಪಾಧ್ಯಕ್ಷೆ ಹಾಗೂ ಚಿಕ್ಕಬಳ್ಳಾಪುರ ಉಸ್ತುವಾರಿ ಮಹಿಳಾ ವಿಂಗ್ ಮಮತಾ ಮೂರ್ತಿ ಉಪಸ್ಥಿತಿಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಮಹಿಳಾ ಕಾಂಗ್ರೆಸ್ ಧ್ವಜಾರೋಹಣ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಪರಸ್ಪರನೆ ಸಿಹಿ ಹಂಚಿ ಸಂಭ್ರಮಿಸಿದರು.ಈ ವೇಳೆ
ಹಾಜರಿದ್ದ ಮಹಿಳಾ ಕಾಂಗ್ರೆಸ್ನವರು ಕಾಂಗ್ರೆಸ್ ಪಕ್ಷವನ್ನ ಪ್ರತಿ ಹಂತದಲ್ಲೂ ಬೆಂಬಲಿ ಸುವುದಾಗಿ ಪ್ರತಿಜ್ಞೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಮಹಿಳಾ ಉಪಾಧ್ಯಕ್ಷ  ಹಾಗೂ ಚಿಕ್ಕಬಳ್ಳಾಪುರ ಉಸ್ತುವಾರಿ ಮಹಿಳಾ ವಿಂಗ್ ಮಮತಾ ಮೂರ್ತಿ ಇಂದು ಮಹಿಳಾ ಕಾಂಗ್ರೆಸ್ನ 40ನೇ ವರ್ಷದ ಸಂಸ್ಥಾಪನ ದಿನದಂದು ಪಕ್ಷದ ಧ್ವಜಾರೋಹಣ ಮಾಡಿದ್ದು ಇಂದು ನಮಗೆ ಒಂದು ದೂಡ್ಡ ಹಬ್ಬ,ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುವ ಪಕ್ಷ ಎಂದರೆ ಅದು ಕೇವಲ ಕಾಂಗ್ರೆಸ್ ಪಕ್ಷಮಹಿಳೆಯರಿಗೆ ಕಾಂಗ್ರೆಸ್ ಪಕ್ಷ ಶಕ್ತಿಯಾಗಿ ನಿಂತಿದೆ ಮಹಿಳೆಯರಿಗೆ ಹಲವು ಅವಕಾಶಗಳನ್ನು ಕಲ್ಪಿಸಿಕೊಡುವ ಮೂಲಕ ಅವರನ್ನು ಸದೃಢಗೊಳಿಸುತ್ತಿದೆ.ರಾಜ್ಯ ಸರ್ಕಾರ ಮಹಿಳೆಯರಿಗೆ ನೀಡುತ್ತಿರುವ ಕಾರ್ಯಕ್ರಮಗಳುಯಶಸ್ವಿಯಾಗುತ್ತಿದೆ.ರಾಜ್ಯದ ನಂತರ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ತರಲು ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಯಾಸ್ಮಿನ್ ತಾಜ್ ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಇತಿಹಾಸವಿದೆ ಪಕ್ಷದಲ್ಲಿ ಮಹಿಳೆಯರಿಗೆ ಎಲ್ಲ ಅವಕಾಶ ಕಲ್ಪಿಸಲಾಗಿದೆ ಸ್ಥಾನ ಮಾನ ಸ್ವಾತಂತ್ರ್ಯ ನೀಡಲಾಗಿದೆ ಇಂದು ಮಹಿಳೆಯರು,ಆರ್ಥಿಕವಾಗಿ ಶೈಕ್ಷಣಿಕವಾಗಿ,ಸಾಮಾಜಿಕವಾಗಿ,ರಾಜಕೀಯವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದ್ದಾರೆ ಹೆಣ್ಣಿನ ಸ್ಥಾನ ಮಾನ ಶಕ್ತಿಯನ್ನು ಹೆಚ್ಚಿಸುತ್ತಿರುವುದು ಕಾಂಗ್ರೆಸ್ ಪಕ್ಷ,ಮಹಿಳೆಯರನ್ನು ಹೆಚ್ಚು ಶಕ್ತಿಶಾಲಿಯಾಗಲು ಪಕ್ಷ ಗಂಭೀರವಾಗಿದೆ ಎಂದ ಅವರು ಅನ್ಯಯಾಯಕ್ಕೆ ಒಳಗಾದ ಮಹಿಳೆಯರಿಗೆ ನ್ಯಾಯದೊರಕಿಸಲು ರಾಜ್ಯಧಕ್ಷೆ ಹಾಗೂ ರಾಷ್ಟ್ರೀಯ ಅಧ್ಯಕ್ಷೆ ಸದಾ ಮುಂದೆ ಇದ್ದಾರೆ ಎಂದ ಅವರು ರಾಜ್ಯ ಸರ್ಕಾರ ಮಹಿಳೆಯರಿಗೆ ನಾನ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಿದೆ ನುಡಿದಂತೆ ನಡೆಯುತ್ತಿದೆ ಎಂದ ಅವರು ಕೇವಲ ನಮ್ಮ ರಾಜ್ಯದ ಮಹಿಳೆಯರು ಶಕ್ತಿಶಾಲಿಯಾದರೆ ಸಾಲದು ಇಡೀ ದೇಶದ ಮಹಿಳೆಯರು ಶಕ್ತಿಶಾಲಿ ಆಗಬೇಕು ಅದಕ್ಕಾಗಿ ಕೇಂದ್ರದಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ನಾವೆಲ್ಲರೂ ಪಕ್ಷಕ್ಕಾಗಿ ದುಡಿಯುತ್ತೇವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷೆ ವೆಂಕಟ್ ರತ್ನಮ್ಮ,ಚಿಕ್ಕಬಳ್ಳಾಪುರ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ವೆಂಕಟ್ ಲಕ್ಷ್ಮೀ,ಸರೋಜಮ್ಮ,
ಬಾಗೇಪಲ್ಲಿಬ್ಲಾಕ್ ಅಧ್ಯಕ್ಷೆ ನಜೀರಾ ಬೇಗಂ ಹಾಗೂ ಪದಾಧಿಕಾರಿಗಳು ಮತ್ತು ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಇದ್ದರು.

ಗಣೇಶ ಚತುರ್ಥಿ ದಿನದ ಪ್ರಯುಕ್ತ ಪ್ರಾಣವದೆ ಹಾಗೂ ಮಾಂಸ ಮಾರಾಟ ನಿಷೇಧ.

“ಗಣೇಶ ಚತುರ್ಥಿ” ದಿನದ ಪ್ರಯುಕ್ತ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧ: ದಿನಾಂಕ: 18-09-2023 ಸೋಮವಾರದಂದು ” ಗಣೇಶ ಚತುರ್ಥಿ” ದಿನದ ಪ್ರಯುಕ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ…

ಸುಗಂಧರಾಜ ಹೂವಿನ ಅಲಂಕಾರ

ಯಲಹಂಕ ಕೋಗಿಲು ಬಡಾವಣೆ ಬಂಡೆ ರಸ್ತೆಯಲ್ಲಿ ಶ್ರೀ ಅಭಯ ಆಂಜನೇಯ ಸ್ವಾಮಿಗೆ ಸುಗಂಧರಾಜ ಹೂವಿನ ಅಲಂಕಾರವನ್ನು. ರಾಘವೇಂದ್ರ ಸ್ವಾಮಿಗಳು ಬಹಳ ಚೆನ್ನಾಗಿ ಅಲಂಕಾರವನ್ನು ಮಾಡಿದ್ದಾರೆ ಭಕ್ತಾದಿಗಳು ಬಂದು ಅಲಂಕಾರವನ್ನು ಕಣ್ತುಂಬ ನೋಡಿ ದೇವರ ಕೃಪೆಗೆ ಪಾತ್ರರಾದರು

ಭಾರತದ ಸಂವಿಧಾನ ಪೀಠಿಕೆ ಓದಿದ ಶೆಟ್ಟಿಹಳ್ಳಿ ಶಾಲಾ ಮಕ್ಕಳು

ಬೆಂಗಳೂರು : ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಶೆಟ್ಟಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಭಾರತದ ಸಂವಿಧಾನ ಪೀಠಿಕೆ ಓದುವ ಮೂಲಕ ಭಾರತ ಸಂವಿಧಾನದ ಆಶೋತ್ತರಗಳನ್ನು ಹಾಗೂ ಆಶಯಗಳನ್ನು ತಮ್ಮ ಜೀವನ ಮತ್ತು ಕರ್ತವ್ಯಗಳಲ್ಲಿ ಅಳವಡಿಸಿಕೊಳ್ಳುವ ಪ್ರತಿಜ್ಞೆಗೈದರು. ಕಾರ್ಯಕ್ರಮದಲ್ಲಿ ಪ್ರಜಾಪ್ರಭುತ್ವದ…

ದಲಿತ ಮುಖಂಡ ನಾರಾಯಣಸ್ವಾಮಿರವರ ಕೊಲೆಯನ್ನು ಖಂಡಿಸಿ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ

ಶಿಡ್ಲಘಟ್ಟ,ಇತ್ತೀಚಿಗೆ ತಾಲ್ಲೂಕಿನ ಬೈರಗಾನಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ನಾರಾಯಣಸ್ವಾಮಿ ಎಂಬುವವರನ್ನು ದುಷ್ಕರ್ಮಿಗಳು ಅಮಾನುಷವಾಗಿ ಕೊಲೆ ಮಾಡಿರುವ ಘಟನೆ ಇಡೀ ರಾಜ್ಯವೇ ಬೆಚ್ಚಿ ಬೀಳಿಸುವಂತೆ ಮಾಡಿದೆ, ಇದನ್ನು ಖಂಡಿಸಿ ದಲಿತ ಮುಖಂಡರಿಂದ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಬಹಿರಂಗ…