Month: January 2024

ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 75ನೇ ಗಣರಾಜ್ಯೋತ್ಸವ ಅದ್ದೂರಿ

ಕೋಲಾರ : ತಾಲೂಕಿನ ನರಸಾಪುರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ವಿಭಾಗದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75ನೇ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ತಾಲೂಕಿನ ನರಸಾಪುರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 75ನೇ ಗಣರಾಜ್ಯೋತ್ಸವ ಪ್ರಯುಕ್ತ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಪ್ಪ ರವರು…

ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮ ವಾದ ಮನವಿ

ಕೋಲಾರ : ಕಲ್ಬುರ್ಗಿ ಜಿಲ್ಲೆಯ ಕೋಟನೂರು ಗ್ರಾಮದಲ್ಲಿ ನಿನ್ನೆ ರಾತ್ರಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ ಬಿ, ಆರ್, ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಕೀಳು ಮಟ್ಟದ ಅವಮಾನ ಎಸಗಿದ ದುಷ್ಕವಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು…

ಜನವರಿ 26 ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬಲಿದಾನ ದಿನದ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿ ಲೇಖನ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಎಂಬ ಗ್ರಾಮದಲ್ಲಿ ಹುಟ್ಟಿದ ರಾಯಣ್ಣ, ಕೇವಲ 32 ವರ್ಷಗಳ ಕಾಲ ಬದುಕಿದ್ದರೂ, ಅವನ ಹೋರಾಟದ ಕಥೆ ಭಾರತೀಯರೆಲ್ಲರಿಗೂ ಸ್ಫೂರ್ತಿಯನ್ನು ನೀಡುತ್ತದೆ. ರಾಯಣ್ಣನ ಹುಟ್ಟೂರು ಸಂಗೊಳ್ಳಿ. ಕಿತ್ತೂರಿನಿಂದ 14 ಕಿ.ಮೀ ದೂರದಲ್ಲಿ ಮಲಪ್ರಬಾ ಹೊಳೆಯ ದಂಡೆಯ…

ರಾಷ್ಟ್ರೀಯ ಮತದಾರರ ದಿನಾಚರಣೆ – 25 – 1- 2024 ಬಸವೇಶ್ವರ ವಾಣಿಜ್ಯ ಕಲಾವಿಜ್ಞಾನ ಮಹಾವಿದ್ಯಾಲಯದಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ

ದಿನಾಂಕ 25 – 1- 2024ರ ಗುರುವಾರದಂದು 11,30 ಗಂಟೆಗೆ ರಾಷ್ಟ್ರೀಯ ಮತದಾರರ ದಿನಾಚರಣೆಯ ಪ್ರಯುಕ್ತ ಬಸ್ ದೇಶ್ವರ ವಾಣಿಜ್ಯ ಕಲಾವಿಜ್ಞಾನ ಮಹಾವಿದ್ಯಾಲಯರಾಜಾಜಿನಗರ ಕಾಲೇಜಿನಲ್ಲಿಪ್ರತಿಜ್ಞಾ ವಿಧಿಯನ್ನು 18 + ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಬೋಧಿಸಿ ಪ್ರತಿಜ್ಞೆ ಸ್ವೀಕರಿಸಲಾಯ್ತು ಪ್ರಾಂಶುಪಾಲರಾದ ಡಾ. ಶೀಲಾ ದೇವಿ…

ಮಿಲನೋತ್ಸವದ ಪ್ರಯುಕ್ತ ಕ್ರೀಡಾ ಸಾಂಸ್ಕೃತಿಕ ಸ್ಪರ್ಧೆ :

ಯಲಹಂಕದ ಬಿಎಂಎಸ್ಐಟಿ ಕಾಲೇಜಿನಲ್ಲಿ ಆಯೋಜನೆ : ಯಲಹಂಕ : ಮಿಲನೋತ್ಸವ-2024 ಕಾರ್ಯಕ್ರಮದ ಪ್ರಯುಕ್ತ ಯಲಹಂಕದ ಬಿಎಂಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಆಯೋಜಿಸಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯನ್ನು ಬಿ.ಎಂ.ಎಸ್.ಐ.ಟಿ ಕಾಲೇಜಿನ ಅಧ್ಯಕ್ಷ ಅವಿರಾಮ್ ಶರ್ಮ ಉದ್ಘಾಟಿಸಿದರು. ನಂತರ…

ಎಲ್ಲೆಲ್ಲೂ ಮೊಳಗಿದ ರಾಮನಾಮ ಜಪ

ದಿಬ್ಬೂರಹಳ್ಳಿ ಬಯಲು ಸಿಂಹ ಸುದ್ದಿ ವರದಿ -ಸದಾನಂದ ಸುಮಾರು 500 ವರ್ಷಗಳ ಚರಿತ್ರೆಯ ರಾಮ ಮಂದಿರದ ಕನಸು ನನಸಾಗಿರುವ ಹಿನ್ನೆಲೆ ಇಡೀ ದೇಶವೇ ರಾಮ ನಾಮವನ್ನು ಜಪ ಮಾಡುತ್ತಾ ಪ್ರತಿ ಮನೆಯಲ್ಲೂ ಹಬ್ಬವನ್ನು ಆಚರಿಸಲಾಗಿದೆ. ಇದರ ಅನ್ವಯ ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ…

ಚಿಕ್ಕಬಳ್ಳಾಪುರ : ಭಾರತ್ ಜೋಡೋ ನ್ಯಾಯ ಯಾತ್ರೆಯ ವೇಳೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರನ್ನು ಅಸ್ಸಾಂನ ಬಿಜೆಪಿಯ ಕಾರ್ಯಕರ್ತರು ಅಡ್ಡಗಟ್ಟಿ, ಹಲ್ಲೆ ನಡೆಸಲು ಮುಂದಾಗಿರುವುದರನ್ನು ಖಂಡಿಸಿ ಮಂಗಳವಾರ ಕಾಂಗ್ರೆಸ್ ಕಾರ್ಯಕರ್ತರು ನಗರದ ಅಂಬೇಡ್ಕರ್‌ವೃತ್ತದಲ್ಲಿ ಪ್ರತಿಭಟಿಸಿ ರಸ್ತೆ ತಡೆ ನಡೆಸಿದರು.
ಈ ವೇಳೆ ಮಾತನಾಡಿದ ಮಾಜಿ ಸಂಸದ ವೀರಪ್ಪಮೊಯ್ಲಿ, ಹಿಂದೆ ಕೈಗೊಂಡಿದ್ದ ಭಾರತ್ ಜೋಡೋ ಯಾತ್ರೆಯು ಯಶಸ್ವಿಯಾದ ಬೆನ್ನಲ್ಲೇ ಪ್ರಸ್ತುತ ಬಡಕಾರ್ಮಿಕ, ರೈತರಿಗೆ ನ್ಯಾಯ ಒದಗಿಸುವ ರಾಹುಲ್‌ಗಾಂಧಿ ಅವರು ಮಣಿಪುರದಿಂದ ಮುಂಬೈವರೆಗೆ ಕೈಗೊಂಡಿರುವ ಭಾರತ್ ಜೋಡೋ ನ್ಯಾಯ ಯಾತ್ರೆ ತಡೆಯಲು ಬಿಜೆಪಿ ಕೆಲಗೂಂಡಾಗಳನ್ನು ಬಿಟ್ಟು ಯಾತ್ರೆಯನ್ನು ತಡೆಯಲು ಮುಂದಾಗಿದ್ದು, ದೇಶದಲ್ಲಿ ಬಿಜೆಪಿ ದೌರ್ಜನ್ಯವು ಮಿತಿ ಮೀರಿದೆ ಎಂದು ಕಿಡಿಕಾರಿದರು.
ಹಿಂದೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದ ಯಾತ್ರೆಯಲ್ಲಿ ದೇಶದಲ್ಲಿ ಅಭದ್ರತೆಗೆ ಅನುವು ಮಾಡಿಕೊಡಲಿಲ್ಲ. ಆದರೆ ಪ್ರಸ್ತುತ ಕೈಗೊಂಡಿರುವ ಶಾಂತಿಯುತ ಯಾತ್ರೆಗೆ ಹೆದರಿ ಬಿಜೆಪಿ ಸರ್ಕಾರವಿರುವ ಅಸ್ಸಾಂನಲ್ಲಿ ತಡೆ ಹಾಕಿರುವುದು ಖಂಡನೀಯ. ಮುಂಬರುವ ಲೋಕಸಭೆಯಲ್ಲಿ ಬಿಜೆಪಿಯು ಸೋಲನ್ನು ಅನುಭವಿಸುವ ಭೀತಿ, ಹತಾಶೆಯಿಂದ ದೌರ್ಜನ್ಯ ನಡೆಸಲು ಮುಂದಾಗಿದೆ ಎಂದು ಟೀಕಿಸಿದರು.
೨೦೨೪ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಮಾಜಿ ಆಗಲಿದ್ದಾರೆ. ಜನ ಮೋದಿ ವಿರುದ್ಧ ರೋಸಿ ಹೋಗಿದ್ದಾರೆ. ಬೆಲೆ ಏರಿಕೆ, ಹಿಂದೂ ಧರ್ಮದ ತುಷ್ಟೀಕರಣ, ನಿರುದ್ಯೋಗ, ಜಿಡಿಪಿ ಕುಸಿತ, ದೌರ್ಜನ್ಯ ಇತ್ಯಾದಿ ಅನ್ಯಾಯಗಳಿಂದ ಜನಸಮಾನ್ಯರು ಮುಂದಿನ ಚುನಾವಣೆಯಲ್ಲಿ ಮೋದಿಗೆ ತಕ್ಕಪಾಠ ಕಲಿಸಲಿದ್ದಾರೆಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಉಪವಾಸ ಮಾಡಿದ್ದೇ ಡೌಟ್ ಅಯೋದ್ಯೆಯಲ್ಲಿರಾಮಲಲ್ಲಾನ ಪ್ರತಿಷ್ಠಾಪನಾ ಕಾರ್ಯಕ್ರಮ ದ ಅಂಗವಾಗಿ ಮೋದಿ ಹನ್ನೊಂದು ದಿನಗಳ ಕಠಿಣ ಉಪವಾಸ ಮಾಡಿದ್ದರು. ಬರೀ ಎಳೆನೀರು ಮಾತ್ರ ಕುಡಿದು ಭಕ್ತಿಯಿಂದ ಪೋಜೆ ನೆರವೇರಿಸಿದರು ಎಂಬುದು ಬರೀ ಸುಳ್ಳು ವೈದ್ಯರ ಅಭಿಪ್ರಾಯದ ಪ್ರಕಾರ…

ಶ್ರೀರಾಮ : ಕುಶಲ ಸಂಘಟನೆಯ ಆದರ್ಶ !

ಈ ಭೂಮಿಯಲ್ಲಿ ಪ್ರಭು ಶ್ರೀರಾಮನಂತೆ ಯತಾರ್ಥ ಆದರ್ಶ ಎಂದರೆ ಸ್ವತಃ ಅವರೊಬ್ಬರೇ ! ಶ್ರೀರಾಮನು ಆದರ್ಶ ಪುತ್ರ, ಆದರ್ಶ ಸಹೋದರ, ಆದರ್ಶ ಸ್ನೇಹಿತ, ಆದರ್ಶ ರಾಜ ಮುಂತಾದ ಅನೇಕ ಆದರ್ಶಗಳನ್ನು ನಮ್ಮ ಮುಂದಿಟ್ಟಿದ್ದಾರೆ; ಆದರೆ ಅದರೊಂದಿಗೆ ಶ್ರೀ ರಾಮನ ಕುಶಲ ಸಂಘಟನಾ…