







ಯಲಹಂಕ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಕ್ಷೇತ್ರದ ರಾಜಾನುಕುಂಟೆ ಸಮೀಪದ ಅದ್ದಿಗಾನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶವನ್ನು ನಿವೃತ್ತ ಶಿಕ್ಷಕರು, ಹಿರಿಯ ಮುಖಂಡರಾದ ಕೆಂಪೇಗೌಡ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಯಲಹಂಕ ತಾಲ್ಲೂಕಿನ ಹಲವು ಗ್ರಾಮಗಳು ಮತ್ತು ಯಲಹಂಕ ನಗರ ವ್ಯಾಪ್ತಿಯ ವಿವಿಧ ವಾರ್ಡ್ ಗಳಿಂದ ಆಗಮಿಸಿದ್ದ ಮಹಿಳಾ ಸ್ವಸಹಾಯ ಸಂಘಗಳ ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದು, ಮಹಿಳಾ ಸ್ವಸಹಾಯ ಸಂಘಗಳ ಸೇವಾ ಪ್ರತಿನಿಧಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟಿನ ತಾಲ್ಲೂಕು ಯೋಜನಾಧಿಕಾರಿ ಸವಿತಾ ಶೆಟ್ಟಿ ಟ್ರಸ್ಟಿನ ಯಲಹಂಕ ತಾಲ್ಲೂಕಿನ ಸಾಧನೆಗಳ ಕುರಿತು ವರದಿ ಮಂಡಿಸಿದರು.
ಯಲಹಂಕ ತಾಲ್ಲೂಕಿನ ವಿವಿಧ ಕಾರ್ಯಕ್ರಮಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯಿಂದ ಮಂಜೂರು ಮಾಡಿರುವ ಅನುದಾನ, ಹಾಲು ಉತ್ಪಾದಕರ ಸಹಕಾರ ಸಂಘಗಳ ಕಟ್ಟಡಗಳ ನಿರ್ಮಾಣ, ದೇವಸ್ಥಾನಗಳ ನಿರ್ಮಾಣ ಕಾರ್ಯ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ನೀಡಿರುವ ನೆರವು, ತಾಲ್ಲೂಕಿನ ಫಲನುಭವಿಗೆ ಪ್ರತಿ ತಿಂಗಳಿಗೆ 88000/ ಮಾಶಾಸನ ವಿತರಣೆ, ವೀಲ್ ಚೇರ್ ವಿತರಣೆ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯ ವೇತನ ಮುಂತಾದ ಹಲವಾರು ಅನುದಾನ ಕಾರ್ಯಕ್ರಮ ಗಳ ಬಗ್ಗೆ ಮಾಹಿತಿ ನೀಡಿದರು.
ತಾಲ್ಲೂಕು ಮಟ್ಟದ ಒಕ್ಕೂಟಗಳ ಈ ಸಮಾವೇಶದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ನ ಬೆಂ.ನಗರ ಜಿಲ್ಲಾ ನಿರ್ದೇಶಕ ಉಮರಬ್ಬ, ಬ್ಯಾಂಕ್ ಆಫ್ ಬರೋಡ ಯಲಹಂಕ ಶಾಖೆಯ ವ್ಯವಸ್ಥಾಪಕ ಹಿಮಾನ್ ಶು ಮಿತ್ತಲ್, ಸಹ ವ್ಯವಸ್ಥಾಪಕ ಸುಭಾಷ್, ವಕೀಲರಾದ ಸಂಧ್ಯಾ, ಕೆರೆ ಸಮಿತಿ ಅಧ್ಯಕ್ಷ ಅರಕೆರೆ ಚನ್ನೇಗೌಡ, ಯಲಹಂಕ ಜನಜಾಗೃತಿ ವೇದಿಕೆಯ ಸದಸ್ಯರಾದ ಎಂ.ಮಂಜುನಾಥ್, ಕೋಕಿಲ, ವಿಜಯಮ್ಮ, ಗಿರೀಶ್, ಶಶಿಕುಮಾರ್, ರವಿಕುಮಾರ್ ಸೇರಿದಂತೆ ಇನ್ನಿತರರಿದ್ದರು.
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
R Hanumanthu
kogilu layout
Yelahanka
9845085793
7349337989
8050671579
9035282296