


ಸದಸ್ಯತ್ವ ಅಭಿಯಾನದಲ್ಲಿ ದೇಶದಲ್ಲೇ ಮೊದಲ ಸ್ಥಾನ ಕಾಯ್ದುಕೊಂಡ ಯಲಹಂಕ ಕ್ಷೇತ್ರ :
ಯಲಹಂಕ : ಶಾಸಕ ಎಸ್.ಆರ್.ವಿಶ್ವನಾಥ್ ರವರ ನೇತೃತ್ವದಲ್ಲಿ ಯಲಹಂಕ ಕ್ಷೇತ್ರದ ದಿಬ್ಬೂರು ಸಮೀಪವಿರುವ ಪ್ರೆಸಿಡೆನ್ಸಿ ಯೂನಿವರ್ಸಿಟಿ ಬಳಿ ಬಿಜೆಪಿ ಮುಖಂಡರು, ಕಾರ್ಯಕರ್ತರು
ಮಹಾ ಸದಸ್ಯತ್ವ ಅಭಿಯಾನ ನಡೆಸಿದರು.
ಈ ವೇಳೆ ಶಾಸಕ ಎಸ್ ಆರ್ ವಿಶ್ವನಾಥ್ ಮಾತನಾಡಿ ‘ಸದಸ್ಯತ್ವ ಅಭಿಯಾನದಲ್ಲಿ ಯಲಹಂಕ ಕ್ಷೇತ್ರ ದೇಶದಲ್ಲೇ ಪ್ರಥಮ ಸ್ಥಾನದಲ್ಲಿ ರುವುದು ನಮ್ಮ ಕಾರ್ಯಕರ್ತರು, ಮುಖಂಡರಲ್ಲಿ ಉತ್ಸಾಹ ಇಮ್ಮಡಿಗೊಳಿಸಿದ್ದು, ಅಕ್ಟೋಬರ್ 30ರ ಸಂಜೆ 8 ಗಂಟಗೆ ಸದಸ್ಯತ್ವ ಅಭಿಯಾನದ ಅವಧಿ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ಪ್ರಥಮ ಸ್ಥಾನ ಕಾಯ್ದುಕೊಳ್ಳಲೇಬೇಕೆಂಬ ಹುರುಪು ಮತ್ತು ಉತ್ಸಾಹದೊಂದಿಗೆ ನಮ್ಮ ಮುಖಂಡರು, ಕಾರ್ಯಕರ್ತರು ಸದಸ್ಯತ್ವ ಅಭಿಯಾನವನ್ನು ಭರದಿಂದ ಕೈಗೊಂಡಿದ್ದಾರೆ. ಈ ಸಾಧನೆಗೆ ಯಲಹಂಕ ಕ್ಷೇತ್ರ ಭಾಜನವಾಗಲು ಕಾರಣಕರ್ತರಾದ ಎಲ್ಲಾ ಮುಖಂಡರು, ಕಾರ್ಯಕರ್ತರಿಗೆ ಈ ಸಂದರ್ಭದಲ್ಲಿ ಹೃತ್ಪೂರ್ವಕ ಧನ್ಯವಾದ ತಿಳಿಸಲಿಚ್ಛಸುತ್ತೇನೆ.
ಪಕ್ಷದಲ್ಲಿ ಯಾವುದೇ ಜವಾಬ್ದಾರಿ ವಹಿಸಿಕೊಳ್ಳಲು ಕನಿಷ್ಠ 100 ಸದಸ್ಯರನ್ನು ಕಡ್ಡಾಯವಾಗಿ ಮಾಡಿರಬೇಕು, ಸಕ್ರಿಯ ಸದಸ್ಯರಾಗಲು ಕನಿಷ್ಠ 50 ಜನರನ್ನು ನೋಂದಾಯಿಸಿರಬೇಕು ಎಂಬ ಪಕ್ಷದ ವರಿಷ್ಠರ ಸೂಚನೆಯ. ಮೇರೆಗೆ ಅಕ್ಟೋಬರ್ 30ರವರೆಗೂ ಸದಸ್ಯತ್ವ ಅಭಿಯಾನ ನಡೆಯಲಿದೆ ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ದಿಬ್ಬೂರು ಜಯಣ್ಣ, ಡಿ.ಜಿ.ಅಪ್ಪಯ್ಯಣ್ಣ, ಯಲಹಂಕ ಗ್ರಾ.ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಯಲಹಂಕ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ವಿ.ಪವನ್ ಕುಮಾರ್, ಸಿಂಗನಾಯಕನಹಳ್ಳಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಎಸ್.ಜಿ.ಪ್ರಶಾಂತ್ ರೆಡ್ಡಿ,ಹಾಲಿ ಉಪಾಧ್ಯಕ್ಷ ಹೇಮಂತ್ ಕುಮಾರ್, ಬಿಜೆಪಿ ಮುಖಂಡರಾದ ಆವಲಹಳ್ಳಿ ಕೇಶವಮೂರ್ತಿ, ಎ.ಸಿ.ಮುನಿಕೃಷ್ಣಪ್ಪ, ಶಿವಾನಂದ, ಇಟಗಲ್ ಪುರ ಮೋಹನ್, ವೈ.ಎನ್.ಹನುಮಂತೇಗೌಡ, ಕೆ.ಬಾಬು, ನಾಗೇಶ್, ಮಲ್ಲಿಕಾರ್ಜುನ, ಎಚ್.ಎಸ್.ಕಿರಣ್, ಮಹಿಳಾ ಮುಖಂಡರಾದ ಬಬಿತಾ ಪೈ, ಗೌರಮ್ಮ, ಶೋಭ, ಕಾಂಚನ, ಶಾರದ ಸೇರಿದಂತೆ ಇನ್ನಿತರರಿದ್ದರು.
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
,9845085793