ಯಲಹಂಕ ಸುದ್ದಿ

ನಾಗವಾರ :03-11-24 ರಂದು ನಾಗವಾರ ಘಟಕದ ಗೃಹರಕ್ಷಕರ ವಾರದ ಕವಾಯಿತಿನಲ್ಲಿ, ವೀ ಕಮ್ಯುನಿಟಿ ವತಿಯಿಂದ ಕೆರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹ ರಕ್ಷಕರಿಗೆ 2024ನೇ ಜೀವ ರಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು, ಗೃಹ ರಕ್ಷಕರು ಜಕ್ಕೂರು ಮತ್ತು ಅಗ್ರಹಾರ ಕೆರೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಯುವಕ ಮತ್ತು ಯುವತಿ ಕೆರೆಗೆ ಹಾರಿದಾಗ ತಮ್ಮ ಪ್ರಾಣವನ್ನು ಲೆಕ್ಕಿಸದೆ ಗೃಹರಕ್ಷಕರು ಕೆರೆಗೆ ಹಾರಿ ಯುವಕ ಯುವತಿಯ ಪ್ರಾಣವನ್ನು ರಕ್ಷಿಸಿರುತ್ತಾರೆ, ಹಾಗಾಗಿ ಯಲಹಂಕದ ವೀ ಕಮ್ಯುನಿಟಿಯವರು ಗೃಹರಕ್ಷಕ ಮತ್ತು ರಕ್ಷಕರಿಗೆ , ಪ್ರಶಂಸನ ಪತ್ರವನ್ನು ನೀಡಿ ಗೌರವಿಸಲಾಯಿತು, ಇದು ನಾಗವಾರ ಘಟಕಕ್ಕೆ ಹೆಮ್ಮೆಯ ಸಂಗತಿ, ಇದೇ ರೀತಿ ಗೃಹ ರಕ್ಷಕರು ನಿರಂತರ ಸೇವೆಯಲ್ಲಿ ಸದಾ ಸಿದ್ಧರಿರುತ್ತಾರೆ ಎಂದು ಘಟಕ ಅಧಿಕಾರಿ ತಿಳಿಸಿದರು, ಜಕ್ಕೂರು ಕೆರೆಯ ಗೃಹರಕ್ಷಕ ದೀಪಕ್ ಜಿ, ಅಶೋಕ್ ಕುಮಾರ್ , ಹಾಗೂ ಅಗ್ರಹಾರ ಕೆರೆಯಲ್ಲಿ ಕರ್ತವ್ಯ ನಿರ್ವಹಿಸುವ ಗೃಹರಕ್ಷಕಿ ಅಮರಾವತಿ ಹಾಗೂ ನರೇಶ್ ಕುಮಾರ್ ಇವರಿಗೆ ವೀ ಕಮ್ಯುನಿಟಿಯ ಫೌಂಡರ್ ರವರಾದ ಶೈಲಜಾ ವೆಂಕಟ್ ಮೇಡಂ ಹಾಗೂ ಸದಸ್ಯರಿಂದ ಪ್ರಶಸ್ತಿಯನ್ನು ಘಟಕ ಅಧಿಕಾರಿಗಳ ಸಮ್ಮುಖ ವಿತರಿಸಲಾಯಿತು, ಗೃಹರಕ್ಷಕರ ಸೇವೆ ಅತ್ಯಂತ ಹೆಮ್ಮೆಯ ಸೇವೆ, ಗೃರಕ್ಷಕರಿಗೆ ನಮ್ಮ ವೀ ಕಮ್ಯೂನಿಟಿ ಇಂದ ದೊಡ್ಡ ಸಲಾಂ ಎಂದು ಫೌಂಡರ್ ಶೈಲಜಾ ವೆಂಕಟ್ ಮಾತನಾಡಿದರು, ಈ ಮೂಲಕ ಬಿಬಿಎಂಪಿಯ ಎಲ್ಲಾ ಅಧಿಕಾರಿಗಳು, ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾ ಕಚೇರಿಯ ಗೌರವಾನ್ವಿತ ಸಮಾದೇಷ್ಠರು, ಹಿರಿಯ ಅಧಿಕಾರಿಗಳಿಂದ ಅಭಿನಂದನೆಗಳನ್ನು ತಿಳಿಸಲಾಯಿತು, ಇಂತಹ ಸಾಧನೇ ಹೀಗೆ ಮುಂದುವರೆಯಲಿ ಎಂದು ಘಟಕ ಅಧಿಕಾರಿಗಳಾದ ಶ್ರೀಮತಿ ಗೌರಮ್ಮ ಅವರು ಅಭಿನಂದನೆಗಳನ್ನು ತಿಳಿಸಿದರು, ಇಂತಹ ಅನೇಕ ಸಾಧಕರನ್ನ ಗುರುತಿಸುವ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ವೀ ಕಮ್ಯೂನಿಟಿ ಸದಾ ತನ್ನ ಮುಂದಾಳತ್ವದಲ್ಲಿ ಸೇವೆಗೆ ಸಿದ್ಧವಿರುತ್ತದೆ.ಎಂದು ವೀ ಕಮ್ಯೂನಿಟಿ ಫೌಂಡರ್ ಶೈಲಜಾ ವೆಂಕಟ್ ರವರು ತಿಳಿಸಿದರು. ಪ್ರಶಸ್ತಿ ಪಡೆದ ಎಲ್ಲರಿಗೂ ಅಭಿನಂದನೆಗಳು💐💐👍

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ

Public power

R Hanumanthu

Kogilu layout 

Yelahanka

9845085793

7349337989

9035282296

Leave a Reply

Your email address will not be published. Required fields are marked *