ಶಿಡ್ಲಘಟ್ಟ: ರಾಜ್ಯಾದ್ಯಂತ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಎಲ್ಲಾ ಕಡೆ ಕೆಂಪೇಗೌಡರ ಪ್ರತಿಮೆಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಹಮ್ಮಿಕೊಳ್ಳಲಾಗಿದ್ದು ಅದರಂತೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿಯು ಸಹ ಬಹಳ ವಿಜೃಂಭಣೆಯಿಂದ ನೆರವೇರಿಸಲಾಯಿತು ಇದಕ್ಕೆ ಎಲ್ಲಾ ಸಮುದಾಯದವರು ಸಾಕ್ಷಿಯಾಗಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ/ ಧನುಂಜಯರೆಡ್ಡಿಯವರು ಕೆಂಪೇಗೌಡರು ಪ್ರತಿ ಸಮುದಾಯಕ್ಕೂ ಮಾರ್ಗದರ್ಶಕರು ಹಾಗೂ ಅವರ ಪ್ರಾಮಾಣಿಕ ಆಡಳಿತದಿಂದ ಒಂದು ಒಳ್ಳೆಯ ನಗರ ಕಟ್ಟಲು ಸಾಧ್ಯವಾಯಿತು ಬೆಂಗಳೂರು ಎಂಬ ಬೃಹತ್ ರಾಜ್ಯಧಾನಿಯಿಂದ ಇಂದು ಕರ್ನಾಟಕದ ಹೆಸರು ಇಡೀ ಪ್ರಪಂಚದಲ್ಲೇ ಹೆಸರುವಾಸಿಯಾಯಿತ. 16ನೇ ಶತಮಾನದಲ್ಲಿ ಕರ್ನಾಟಕದ ಹೆಚ್ಚಿನ ಭಾಗಗಳನ್ನು ಆಳಿದ ಮುಖ್ಯಸ್ಥರಾಗಿದ್ದರು. ಇತಿಹಾಸವು ಇವರನ್ನು ಒಳ್ಳೆಯ ಮಾನವೀಯ ಆಡಳಿತಗಾರ ಎಂಬ ಬಿರುದನ್ನು ಕೊಟ್ಟು ಗೌರವಿಸಿದೆ ಎಂದು ಕೆಂಪೇಗೌಡರ ಬಗ್ಗೆ ಹೊಗಳಿದರು.

ದಿಬ್ಬೂರಹಳ್ಳಿ ಹಾಗೂ ಸುತ್ತಮುತ್ತಲಿನ ಎಲ್ಲಾ ಗ್ರಾಮಗಳ ಸಮುದಾಯದವರು ಈ ದಿನ ಈ ಬೃಹತ್ ಸಮಾವೇಶಕ್ಕೆ ಆಗಮಿಸಿ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವುದು ಅವರು ಮಾಡಿರುವ ಸಾಧನೆಗಳಿಗೆ ಘನತೆ ಗೌರವವನ್ನು ಸೂಚಿಸುತ್ತಿದೆ. ಅವರ ಅಂದಿನ ಸೃಜನಾತ್ಮಕ ತತ್ವ ಸಿದ್ಧಾಂತಗಳು ಇಂದಿಗೂ ಎಲ್ಲಾ ನವ ಸಮುದಾಯಕ್ಕೆ ನಾಂದಿ, ಅವರು ಕೇವಲ ವಕ್ಕಲಿಗರ ಸಮುದಾಯಕ್ಕೆ ಮಾತ್ರ ಸೀಮಿತವಲ್ಲ ಇಡೀ ಆಧುನಿಕ ಜಗತ್ತಿನ ಸಾಮಾಜಿಕ ಯುವ ಚೈತನ್ಯರಿಗೆ ಮಾರ್ಗದರ್ಶನ ಎಂದು ಯುವ ಮುಖಂಡರಾದ ವಿಜಯ್ ಬಾವರೆಡ್ಡಿಯವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಜಾತ್ಯತೀತವಾಗಿ ಎಲ್ಲಾ ಗ್ರಾಮಗಳ ಸಮುದಾಯ‌ದವರು ಭಾಗವಹಿಸಿದ್ದರು.

ವರದಿ -ಸದಾನಂದ

Leave a Reply

Your email address will not be published. Required fields are marked *