ಹುಬ್ಬಳ್ಳಿ :- ಅರ್ಧ ಶತಮಾನದಿಂದ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ ಪ್ರಾಣಿಗಳಂತೆ ಬದುಕುತ್ತಿರುವ ಅಣ್ಣಿಗೇರಿ ಆದಿವಾಸಿಗಳಿಗೆ ಹಕ್ಕು ಪತ್ರ ನೀಡಿ ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಹೇಳಿದರು.
ಹುಬ್ಬಳ್ಳಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಣ್ಣಿಗೆರೆಯಲ್ಲಿ ಅರ್ಧ ಶತಮಾನದಿಂದ ನಿರಾಶ್ರಿತರಾಗಿ ವಾಸಿಸುತ್ತಿರುವ ಅಲ್ಲಿನ 110 ಆದಿವಾಸಿ ಕುಟುಂಬಗಳಿಗೆ ಹಕ್ಕು ಪತ್ರ ಮತ್ತು ಮನೆಗಳನ್ನು ಮಂಜೂರು ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡುತ್ತೇವೆ.ಹಕ್ಕು ಪತ್ರ ಮತ್ತು ಮನೆಗಳನ್ನು ನೀಡದಿದ್ದರೆ ಉಗ್ರ ಹೋರಾಟಕ್ಕೆ ಮುಂದಾಗ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು . ರಾಜ್ಯ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಸಮಾಜದ ಕಳಕಳಿ ಹೊಂದಿರುವ ವ್ಯಕ್ತಿಯಾಗಿದ್ದು ಎಸ್ ಡಿ ಪಿ ಐ ಮನವಿಗೆ ಸ್ಪಂದಿಸಿ ಅರ್ಧ ದಶಕಗಳಿಂದ ಇರಲು ಮನೆ ಇಲ್ಲದೆ ಮೂಲ ಸೌಕರ್ಯಗಳ ವಂಚಿತರಾಗಿ ಪ್ರಾಣಿಗಳಂತೆ ಬದುಕುತ್ತಿರುವ ನೂರಕ್ಕೂ ಅಧಿಕ ಬಡ ಆದಿವಾಸಿಗಳ ಕುಟುಂಬಗಳಿಗೆ ಸ್ಪಂದಿಸುವ ಭರವಸೆ ಇದೆ ಎಂದು ತಿಳಿಸಿದರು.
ಎಸ್ ಡಿ ಪಿ ಐ ನಿಯೋಗ ಹರಣಿ ಶಿಕಾರಿ ಆದಿವಾಸಿಗಳ ಹಟ್ಟಿಗೆ ಬೆಟ್ಟಿ ನೀಡಿದ ಸಂದರ್ಭದಲ್ಲಿ ನಮ್ಮನ್ನು ದರಿದ್ರರು ಅಂತ ಹೇಳಿ ನಿಮಗೆ ಜಾಗ ಇಲ್ಲ ಮನೆ ಕೊಡಲ್ಲ ಊರು ಬಿಟ್ಟು ಹೋಗಿ ಎಂದು ದೌರ್ಜನ್ಯ ಸಿಗುತ್ತಿದ್ದಾರೆ. ಇದರ ಬದಲು ನಮಗೆ ವಿಷ ಕೊಟ್ಟು ಬಿಡಿ ಎಂದು ಅಲ್ಲಿನ ಜನ ಜೈ ಭೀಮ ಅಖಿಲ ಭಾರತ ದಲಿತ ಹೋರಾಟ ಸಮಿತಿ ಅಧ್ಯಕ್ಷ ಧರ್ಮರಾಜ ಹರಣಿ ಶಿಕಾರಿ ಹಾಗೂ ಉಪಾಧ್ಯಕ್ಷ ಬಸಣ್ಣ ಹರಣಿ ಶಿಕಾರಿ ಅವರ ನೇತೃತ್ವದಲ್ಲಿ ಅಲ್ಲಿನ ಜನರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಅವರ ನೋವಿಗೆ ಸರ್ಕಾರ ತಕ್ಷಣವೇ ಸ್ಪಂದಿಸಬೇಕು ಅವರಿಗೆ ನ್ಯಾಯ ಸಿಗುವವರೆಗೂ ಎಸ್ ಡಿ ಪಿ ಐ ಪಕ್ಷ ಅವರ ಪರವಾಗಿ ಹೋರಾಟದ ರೂಪದಲ್ಲಿ ಅವರ ಜೊತೆ ನಿಲ್ಲುತ್ತೇವೆ.
ಅಣ್ಣಿಗೇರಿ ಸ್ಥಳೀಯ ನಿವಾಸಿ ಮಾಬುಸಾಬ್ ಮೊಹಮ್ಮದ್ ಸಾಬ್ ಗಾಡಗೋಳಿ ಎಂಬುವವರು ನವಲಗುಂದ ರಸ್ತೆಯ ರೈಲ್ವೆ ಗೇಟ್ ಹತ್ತಿರ 4 ಎಕರೆ ಜಮೀನು ಖರೀದಿಸಲು ಆಶ್ರಯ ಸಮಿತಿಯಿಂದ ನೀಡಲು ನಿರ್ಧರಿಸಿದ್ದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ವರ್ಷಗಳ ಕಳೆದಿವೆ ಆದರೆ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಅದರ ಬಗ್ಗೆ ಜಿಲ್ಲಾಡಳಿತ ಮತ್ತು ಸ್ಥಳೀಯ ಶಾಸಕರು ಗಮನಹರಿಸಬೇಕು. ಆಗಸ್ಟ್ 9 ರಂದು ವಿಶ್ವ ಬುಡಕಟ್ಟು ಜನರ ದಿನಕ್ಕೆ ಅರ್ಥ ಬರಬೇಕಾದರೆ ಎಲ್ಲಾ ಆದಿವಾಸಿ ಅಲೆಮಾರಿಗಳು ನೆಮ್ಮದಿ ಜೀವನ ನಡೆಸಲು ಸಾಧ್ಯವಾಗಬೇಕು.ಆನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಹರಣ ಶಿಕಾರಿ ಬುಡಕಟ್ಟು ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಮನವಿ . ಈ ವೇಳೆ ಜೈ ಭೀಮ್ ಅಖಿಲ ಭಾರತ ದಲಿತ ಹೋರಾಟ ಸಮಿತಿ ಅಧ್ಯಕ್ಷ ಧರ್ಮರಾಜ ಹರಣಿ ಶಿಕಾರಿ, ಉಪಾಧ್ಯಕ್ಷ ಬಸಣ್ಣ ಹರಣಿ ಶಿಕಾರಿ, ಎಸ್ ಡಿ ಪಿ ಐ ಜಿಲ್ಲಾ ಅಧ್ಯಕ್ಷ ಮತ್ತು ಹುಸೇನ್ ಹೊಸಮನಿ ,ಪ್ರಧಾನ ಕಾರ್ಯದರ್ಶಿ ಗಪೂರ್ ಅಹಮದ್ ಕುರಟ್ಟಿ ,ಜಿಲ್ಲಾ ಉಪಾಧ್ಯಕ್ಷ ಡಾ. ವಿಜಯ ಎಮ್ ಗುಂಟ್ರಾಳ ಇದ್ದರು.

ಹರಣ ಶಿಕಾರಿ ಜನಾಂಗಕ್ಕೆ ನಿವೇಶನ ಒದಗಿಸುವಂತೆ ಮನವಿ.


ಹುಬ್ಬಳ್ಳಿ :- ಅರ್ಧ ಶತಮಾನದಿಂದ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ ಪ್ರಾಣಿಗಳಂತೆ ಬದುಕುತ್ತಿರುವ ಅಣ್ಣಿಗೇರಿ ಆದಿವಾಸಿಗಳಿಗೆ ಹಕ್ಕು ಪತ್ರ ನೀಡಿ ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಹೇಳಿದರು.
ಹುಬ್ಬಳ್ಳಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಣ್ಣಿಗೆರೆಯಲ್ಲಿ ಅರ್ಧ ಶತಮಾನದಿಂದ ನಿರಾಶ್ರಿತರಾಗಿ ವಾಸಿಸುತ್ತಿರುವ ಅಲ್ಲಿನ 110 ಆದಿವಾಸಿ ಕುಟುಂಬಗಳಿಗೆ ಹಕ್ಕು ಪತ್ರ ಮತ್ತು ಮನೆಗಳನ್ನು ಮಂಜೂರು ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡುತ್ತೇವೆ.ಹಕ್ಕು ಪತ್ರ ಮತ್ತು ಮನೆಗಳನ್ನು ನೀಡದಿದ್ದರೆ ಉಗ್ರ ಹೋರಾಟಕ್ಕೆ ಮುಂದಾಗ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು . ರಾಜ್ಯ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಸಮಾಜದ ಕಳಕಳಿ ಹೊಂದಿರುವ ವ್ಯಕ್ತಿಯಾಗಿದ್ದು ಎಸ್ ಡಿ ಪಿ ಐ ಮನವಿಗೆ ಸ್ಪಂದಿಸಿ ಅರ್ಧ ದಶಕಗಳಿಂದ ಇರಲು ಮನೆ ಇಲ್ಲದೆ ಮೂಲ ಸೌಕರ್ಯಗಳ ವಂಚಿತರಾಗಿ ಪ್ರಾಣಿಗಳಂತೆ ಬದುಕುತ್ತಿರುವ ನೂರಕ್ಕೂ ಅಧಿಕ ಬಡ ಆದಿವಾಸಿಗಳ ಕುಟುಂಬಗಳಿಗೆ ಸ್ಪಂದಿಸುವ ಭರವಸೆ ಇದೆ ಎಂದು ತಿಳಿಸಿದರು.
ಎಸ್ ಡಿ ಪಿ ಐ ನಿಯೋಗ ಹರಣಿ ಶಿಕಾರಿ ಆದಿವಾಸಿಗಳ ಹಟ್ಟಿಗೆ ಬೆಟ್ಟಿ ನೀಡಿದ ಸಂದರ್ಭದಲ್ಲಿ ನಮ್ಮನ್ನು ದರಿದ್ರರು ಅಂತ ಹೇಳಿ ನಿಮಗೆ ಜಾಗ ಇಲ್ಲ ಮನೆ ಕೊಡಲ್ಲ ಊರು ಬಿಟ್ಟು ಹೋಗಿ ಎಂದು ದೌರ್ಜನ್ಯ ಸಿಗುತ್ತಿದ್ದಾರೆ. ಇದರ ಬದಲು ನಮಗೆ ವಿಷ ಕೊಟ್ಟು ಬಿಡಿ ಎಂದು ಅಲ್ಲಿನ ಜನ ಜೈ ಭೀಮ ಅಖಿಲ ಭಾರತ ದಲಿತ ಹೋರಾಟ ಸಮಿತಿ ಅಧ್ಯಕ್ಷ ಧರ್ಮರಾಜ ಹರಣಿ ಶಿಕಾರಿ ಹಾಗೂ ಉಪಾಧ್ಯಕ್ಷ ಬಸಣ್ಣ ಹರಣಿ ಶಿಕಾರಿ ಅವರ ನೇತೃತ್ವದಲ್ಲಿ ಅಲ್ಲಿನ ಜನರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಅವರ ನೋವಿಗೆ ಸರ್ಕಾರ ತಕ್ಷಣವೇ ಸ್ಪಂದಿಸಬೇಕು ಅವರಿಗೆ ನ್ಯಾಯ ಸಿಗುವವರೆಗೂ ಎಸ್ ಡಿ ಪಿ ಐ ಪಕ್ಷ ಅವರ ಪರವಾಗಿ ಹೋರಾಟದ ರೂಪದಲ್ಲಿ ಅವರ ಜೊತೆ ನಿಲ್ಲುತ್ತೇವೆ.
ಅಣ್ಣಿಗೇರಿ ಸ್ಥಳೀಯ ನಿವಾಸಿ ಮಾಬುಸಾಬ್ ಮೊಹಮ್ಮದ್ ಸಾಬ್ ಗಾಡಗೋಳಿ ಎಂಬುವವರು ನವಲಗುಂದ ರಸ್ತೆಯ ರೈಲ್ವೆ ಗೇಟ್ ಹತ್ತಿರ 4 ಎಕರೆ ಜಮೀನು ಖರೀದಿಸಲು ಆಶ್ರಯ ಸಮಿತಿಯಿಂದ ನೀಡಲು ನಿರ್ಧರಿಸಿದ್ದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ವರ್ಷಗಳ ಕಳೆದಿವೆ ಆದರೆ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಅದರ ಬಗ್ಗೆ ಜಿಲ್ಲಾಡಳಿತ ಮತ್ತು ಸ್ಥಳೀಯ ಶಾಸಕರು ಗಮನಹರಿಸಬೇಕು. ಆಗಸ್ಟ್ 9 ರಂದು ವಿಶ್ವ ಬುಡಕಟ್ಟು ಜನರ ದಿನಕ್ಕೆ ಅರ್ಥ ಬರಬೇಕಾದರೆ ಎಲ್ಲಾ ಆದಿವಾಸಿ ಅಲೆಮಾರಿಗಳು ನೆಮ್ಮದಿ ಜೀವನ ನಡೆಸಲು ಸಾಧ್ಯವಾಗಬೇಕು.ಆನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಹರಣ ಶಿಕಾರಿ ಬುಡಕಟ್ಟು ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಮನವಿ . ಈ ವೇಳೆ ಜೈ ಭೀಮ್ ಅಖಿಲ ಭಾರತ ದಲಿತ ಹೋರಾಟ ಸಮಿತಿ ಅಧ್ಯಕ್ಷ ಧರ್ಮರಾಜ ಹರಣಿ ಶಿಕಾರಿ, ಉಪಾಧ್ಯಕ್ಷ ಬಸಣ್ಣ ಹರಣಿ ಶಿಕಾರಿ, ಎಸ್ ಡಿ ಪಿ ಐ ಜಿಲ್ಲಾ ಅಧ್ಯಕ್ಷ ಮತ್ತು ಹುಸೇನ್ ಹೊಸಮನಿ ,ಪ್ರಧಾನ ಕಾರ್ಯದರ್ಶಿ ಗಪೂರ್ ಅಹಮದ್ ಕುರಟ್ಟಿ ,ಜಿಲ್ಲಾ ಉಪಾಧ್ಯಕ್ಷ ಡಾ. ವಿಜಯ ಎಮ್ ಗುಂಟ್ರಾಳ ಇದ್ದರು.

Leave a Reply

Your email address will not be published. Required fields are marked *