



ಯಲಹಂಕ ಗ್ರಾ.ಮಂಡಲ ರೈತ ಮೋರ್ಚಾ ಪದಾಧಿಕಾರಿಗಳಿಂದ ಎಸ್.ಆರ್.ವಿಶ್ವನಾಥ್ ರವರಿಗೆ ಸನ್ಮಾನ :
ಯಲಹಂಕ : ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ರೈತ ಮೋರ್ಚಾಗೆ ಆಯ್ಕೆಯಾಗಿರುವ ನೂತನ ಪದಾಧಿಕಾರಿಗಳು ತಮಗೆ ಹುದ್ದೆಯ ಜವಾಬ್ದಾರಿ ನೀಡಿರುವ ಸಹಕಾರವನ್ನು ಸ್ಮರಿಸಿ ಶಾಸಕ ಎಸ್ ಆರ್ ವಿಶ್ವನಾಥ್ ಅವರಿಗೆ ಗೌರವ ಸನ್ಮಾನ ನೀಡಿ ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಜಿ.ಜೆ.ಮೂರ್ತಿ, ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ರಾಮಮೂರ್ತಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಬಿಜೆಪಿ ಮುಖಂಡ ಚೊಕ್ಕನಹಳ್ಳಿ ವೆಂಕಟೇಶ್, ಯಲಹಂಕ ಗ್ರಾಮಾಂತರ ಮಂಡಲ ರೈತ ಮೋರ್ಚಾ ಅಧ್ಯಕ್ಷ ಎಚ್.ಸಿ.ರಾಜೇಶ್, ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ಬೈರಾಪುರ, ಮಂಜುನಾಥ್ ಕೆ.ಪಿ., ಉಪಾಧ್ಯಕ್ಷರಾದ ಮಂಜೇಶ್ ಎಚ್.ಬಿ., ಬಸವರಾಜು, ಸೋಮಶೇಖರ್ ರೆಡ್ಡಿ, ಸುರೇಂದ್ರಬಾಬು, ನಂಜೇಗೌಡ, ಹನುಮೇಗೌಡ, ನಂಜಪ್ಪ, ವೀರಪ್ಪ ದೇವು, ಕಾರ್ಯದರ್ಶಿಗಳಾದ ಪದ್ಮ, ವೆಂಕಟಾಚಲ, ಮುನೇಗೌಡ, ರಾಮಯ್ಯ ಎಂ.ಪಿ., ತ್ರಿವೇಣಿ, ರಘು, ನವೀನ್, ಮಧು, ಖಜಾಂಚಿ ಎಲ್.ಜಿ.ಮಧು ಸೇರಿದಂತೆ ಇನ್ನಿತರರಿದ್ದರು.