





ಶ್ರೀ ನೃಪತುಂಗ ಡಾ|| ರಾಜ್ ಕುಮಾರ್ ಅಭಿಮಾನಿಗಳ ಸಂಘದವರು ಯಲಹಂಕ ಜಕ್ಕೂರಿನಲ್ಲಿ ಆಯೋಜಿಸಿದ್ದ 69ನೇ ವರ್ಷದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಗುರು ವಿದೂಷಿ ಶ್ರೀಮತಿ ಸುನಿತಾ ಸುಕುಮಾರನ್ ರವರು ಸ್ಥಾಪಿಸಿರುವ ಶ್ರೀ ಕೃಷ್ಣ ಕಲಾಲಯದ ವಿದ್ಯಾರ್ಥಿಗಳು ಹಲವಾರು ಬಗೆಬಗೆಯಾದ ನೃತ್ಯ ಪ್ರದರ್ಶನವನ್ನು ನೀಡಿ ನೋಡುಗರ ಮನ ಸೆಳೆದಿದ್ದಾರೆ. ಈ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಕಾರ್ಯಕ್ರಮ ಆಯೋಜನ ಮಾಡಿದ ಮುಖ್ಯಸ್ಥರು ಸಂಘದ ಎಲ್ಲಾ ಪದಾಧಿಕಾರಿಗಳು ಸುತ್ತಮುತ್ತಲಿ ಗ್ರಾಮಸ್ಥರು ಭಾಗವಹಿಸಿ ಶ್ರೀ ಕೃಷ್ಣ ಕಲಾಲಯದ ವಿದ್ಯಾರ್ಥಿಗಳಿಗೆ ಶುಭ ಕೋರಿ ಕಾರ್ಯಕ್ರಮ ಬಹಳ ಸಂಭ್ರಮದಿಂದ ಯಶಸ್ವಿಗೊಳಿಸಿದರು