ಚಿಕ್ಕಬಳ್ಳಾಪುರ: ಮಾಜಿ ಶಾಸಕರು ರಾಜಕೀಯ ಮುತ್ಸದ್ದಿ ಶಿಕ್ಷಣ ಪ್ರೇಮಿ ಸಿ ವಿ ವೆಂಕಟರಾಯಪ್ಪನವರ108 ಜನ್ಮದಿನ ಹಾಗೂ ಸಿವಿವಿ ಮತ್ತು ಪಂಚಗಿರಿ ದತ್ತಿ ದಿನಾಚರಣೆ ಅಂಗವಾಗಿ ಪ್ರತಿವರ್ಷ ರಕ್ತಧಾನ ಶಿಬಿರ ಹಮ್ಮಿಕೊಳ್ಳುವ ಮೂಲಕ ಸಾವಿರಾರು ಜನರ ಜೀವ ರಕ್ಷಕರಾಗುತ್ತಿರುವ ಎರಡೂ ದತ್ತಿಗಳ ಅಧ್ಯಕ್ಷ ನವೀನ್ ಕಿರಣ್ ರವರನ್ನ ಅಭಿನಂದಿಸುತ್ತೇನೆ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಪ್ರಶಂಸೆ ವ್ಯಕ್ತಪಡಿಸಿದರು.
ನಗರದ ಹೊರವಲಯ ಸಿವಿ ಮತ್ತು ಪಂಚಗಿರಿ ವಿದ್ಯಾದತ್ತಿಗಳ 27 ವರ್ಷಾಚರಣೆ ಅಂಗವಾಗಿ ಕೆ ವಿ ಒಳಾಂಗಣ ಕ್ರೀಡಾಂಗಣದಲ್ಲಿ ಬೃಹತ್ ರಕ್ತಧಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು ಶಿಬಿರ ಉದ್ಘಾಟನೆಯಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಹಾಗು ಜಿಲ್ಲಾದಿಕಾರಿ ಪಿ.ಎನ್ ರವೀಂದ್ರ ಪಾಲ್ಗೊಂಡಿದ್ದರು.ಈ ವೇಳೆ ಮಾತನಾಡಿದ ಡಾ.ಕೆ.ಸುಧಾಕರ್ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ರಕ್ತಧಾನ ನಡೆಸುತ್ತಿರುವ ನನ್ನ ಮಿತ್ರ ನವೀನ್ ಕಿರಣ್ ರವರ ಸೇವೆಗೆ ನಾವು ಕೈ ಜೋಡಿಸೋಣ ಈ ಭಾರಿ1500 ಯೂನಿಟ್ ರಕ್ತ ಸಂಗ್ರಹದ ಕನಸು ಈಡೇರಲಿ ಆ ಮೂಲಕ ಸಾವಿರಾರು ಜೀವಗಳ ಪ್ರಾಣ ರಕ್ಷಣೆಗೆ ನಾಂದಿಯಾಗಲಿ ಅಂದ್ರು ದೇಶದಲ್ಲಿರುವ ಶೇಖಡಾ ಒಂದುರಷ್ಟು ಜನ ವರ್ಷಕ್ಕೊಮ್ಮೆ ರಕ್ತಧಾನ ಮಾಡಿದರೆ ರಕ್ತದ ಕೊರತೆಯೆ ಇರೋದಿಲ್ಲ, ನಾನು ಕೂಡ ಎಲ್ಲೆ ಇದ್ರು ವರ್ಷಕ್ಕೊಮ್ಮೆ ರಕ್ತ ಕೊಡುತ್ತೇನೆ ಎಂದರು.
ಕೆ.ವಿ.ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಅಧ್ಯಕ್ಷ ಕೆ .ವಿ. ನವೀನ್ ಕಿರಣ್ ಮಾತನಾಡಿ ರಕ್ತದಾನ ಮಾಡುವುದು ಅತ್ಯಂತ ಶ್ರೇಷ್ಠವಾದ ದಾನವಾಗಿದ್ದು ಜೀವನ್ಮರಣ ಹೋರಾಟದಲ್ಲಿ ರಕ್ತದ ಅವಶ್ಯಕತೆ ಇರುವ ರೋಗಿಗಳಿಗೆ ರಕ್ತದಾನ ಮಾಡುವುದು ಅತ್ಯಂತ ಶ್ರೇಷ್ಠವಾದದ್ದು ಎಂದು ತಿಳಿಸಿದರು.
ಸಮಾಜದಲ್ಲಿನ ಪ್ರತಿಯೊಬ್ಬರು ತಮ್ಮ ತಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಲು ಯಾವುದಾದರೂ ಒಂದು ರಚನಾತ್ಮಕವಾದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂಬುದು ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಸಿ.ವಿ.ವೆಂಕಟರಾಯಪ್ಪ ರವರ ಸಂದೇಶವಾಗಿದ್ದು ಈ ನಿಟ್ಟಿನಲ್ಲಿ 1997ರಿಂದ ನಿರಂತರವಾಗಿ ಪ್ರತಿ ವರ್ಷ ರಕ್ತದಾನ ಶಿಬಿರಗಳನ್ನು ಮಾಡಿಕೊಂಡು ಬರುತ್ತಿದ್ದು ನಮ್ಮದೇ ದಾಖಲೆಯಾಗಿರುವ ಒಂದೇ ಶಿಬಿರದಲ್ಲಿ ಸಂಗ್ರಹವಾಗುವ 1500ಕ್ಕೂ ಹೆಚ್ಚು ಯೂನಿಟ್ ಗಳ ರಕ್ತ ಸಂಗ್ರಹಣೆಯನ್ನು ಈ ದಿನ ಮಾಡುವ ಗುರಿ ಬಂದಿದ್ದು, ಬೆಳಗ್ಗೆ ಎಂಟು ಗಂಟೆಗೆ ನೂರಾರು ಮಂದಿ ರಕ್ತಧಾನಿಗಳು ಆಗಮಿಸಿದ್ದು ಇದು ಒಂದು ರಕ್ತದಾನದ ಕ್ರಾಂತಿಯಾಗಿದೆ ಎಂದರು.ಇನ್ನು ಬೃಹತ್ ರಕ್ತದಾನಕ್ಕೆ ಸಹಕಾರ ನೀಡಿದ ಎಲ್ಲಾ ವಿದ್ಯಾಸ್ಂಸ್ತೆಗಳ ಮುಖ್ಯಸ್ಥರು,ವಿದ್ಯಾರ್ಥಿಗಳು ಸ್ವಯಂ ಸೇವಕರು ಹಳೇ ವಿದ್ಯಾರ್ಥಿಗಳ ಬೆಂಬಲದಿಂದ ಯಶಸ್ವಿಯಾಗುತ್ತಿದೆ. ಕಳೆದ ಬಾರಿಯ ನಮ್ಮ ರೆಕಾರ್ಡನ್ನ ನಾವೇ ಬ್ರೇಕ್ ಮಾಡುವ ಖುಷಿಯಲ್ಲಿ ಬೃಹತ್ ರಕ್ತಧಾನ ನಡೆಸುತಿದ್ದೇವೆ ಅಂತ ಹೇಳಿದರು.
ಕೆ ವಿ ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಸಿಬ್ಬಂದಿ ವರ್ಗ, ವಿದ್ಯಾರ್ಥಿನಿಯರು ನಗರದ ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಜಿಲ್ಲಾ ಕೇಂದ್ರದ ಪತ್ರಕರ್ತರುಗಳು ಕೆ .ವಿ. ನವೀನ್ ಕಿರಣ್ ರವರ ಅಭಿಮಾನಿ ರಕ್ತದಾನ ಶಿಬಿರದಲ್ಲಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಉತ್ತಮವಾದ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಿದರು.
ಇಂದು ಒಂದೇ ದಿನ 1187 ಯೂನಿಟ್ ಗೋ ಹೆಚ್ಚು ರಕ್ತದಾನ ಮಾಡುವ ಗುರಿಯೊಂದಿಗೆ ಈ ರಕ್ತದಾನ ಶಿಬಿರ ನಡೆದಿದೆ.
