ಮಹದೇವಪುರ: ಸ್ಲಂ ಬೋರ್ಡ್ ವತಿಯಿಂದ
ಮಹದೇವಪುರ  ಕ್ಷೇತ್ರದ ಕೊಡತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂಲಿಕುಂಟೆ ಗ್ರಾಮದಲ್ಲಿ ನಿರ್ಮಿಸಿರುವ ಮನೆಗಳನ್ನ  ಶೇಕಡಾ  50 ರಷ್ಟು  ವಸತಿ ಗೃಹಗಳನ್ನ  ಕ್ಷೇತ್ರದ ಫಲಾನುಭವಿಗಳಿಗೆ ನೀಡದೆ,ಬೇರೆ ಕ್ಷೇತ್ರದ ಜನರಿಗೆ‌ ನೀಡುತ್ತಿರುವುದರ ಬಗ್ಗೆ ಖಂಡಿಸಿ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ
ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಅವರು ಕಾಂಗ್ರೆಸ್ ಸರ್ಕಾರ  ಕ್ಷೇತ್ರದ ನಿವಾಗಳಿಗೆ ಅನ್ಯಾಯ ಮಾಡುವ ಕಾರ್ಯ ಮಾಡುತ್ತಿದೆ ಕ್ಷೇತ್ರದ ನಿವಾಸಿಗಳಿಗೆ ಅನ್ಯಾಯವಾದರೆ ಉಗ್ರ ಹೋರಾಟ ಮಾಡಲಾಗುವುದೆಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜೀವ್ ಗಾಂಧಿ ವಸತಿ ಯೋಜನೆಯಡಿ ನಿರ್ಮಿಸಿರುವ ಸುಮಾರು ೯೦೦ ಮನೆಗಳಲ್ಲಿ
ಸ್ಥಳೀಯರಿಗೆ 50 – 50 ಅನುಪಾತದಲ್ಲಿ ಮನೆಗಳನ್ನು ನೀಡುವಂತೆ ಒತ್ತಾಯಿಸಿದರು. ‌

ಸ್ಥಳೀಯರಿಗೆ ಅವಕಾಶ ಮಾಡಿಕೊಡದೆ,ಅನ್ಯರಿಗೆ  ಕ್ಷೇತ್ರದ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ನೀಡಿದರೆ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.

ಶೇ 50 ರಷ್ಟು ಮೀಸಲಾತಿ ಅಡಿಯಲ್ಲಿ ಬರುವ ಸ್ಲಂ ಬೋರ್ಡ್ ಮನೆಗಳನ್ನು ಸ್ಥಳೀಯರಿಗೆ ನೀಡದ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿದ ಅವರು  ಸ್ಥಳಕ್ಕೆ ಬಂದಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮಹದೇವಪುರ ಕ್ಷೇತ್ರದಲ್ಲಿ ನಲೆಸಿರುವ ನಿವಾಸಿಗಳಿಗೆ ನೀಡಬೇಕಾಗಿದ್ದ ಮನೆಗಳನ್ನ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯವರು ಸ್ವಾಧೀನಕ್ಕೆ ತೆಗೆದುಕೊಂಡು ತಮ್ಮಗೆ ಇಷ್ಟ ಬಂದವರಿಗೆ ಮನೆಗಳನ್ನ ಹಂಚಿಕೆ ಮಾಡುತ್ತಿದ್ದಾರೆ.ನಮ್ಮ ಕ್ಷೇತ್ರಕ್ಕೆ ಹಂಚಕೆ ಮಾಡಬೇಕಾಗಿದ್ದ ಪಾಲನ್ನ ನಮಗೆ ನೀಡಿ ಎಂದು ಸರ್ಕಾಕ್ಕೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷ ಮನೋಹರ ರೆಡ್ಡಿ, ಮಹದೇವಪುರ ಟಾಸ್ಕ್ ಫೋರ್ಸ್‌ನ ಸಾಮಾಜಿಕ ಮತ್ತು ಸಬಲೀಕರಣ ಅಧ್ಯಕ್ಷ  ವೆಂಕಟಸ್ವಾಮಿ ರೆಡ್ಡಿ, ಮುಖಂಡರಾದ ಹೂಡಿ ಪೀಳಪ್ಪ, ಮಹಿಳಾ ಮುಖಂಡರಾದ ಶೃತಿ ಸತೀಶ್, ಸ್ಥಳೀಯ ಗ್ರಾ.ಪ ಅಧ್ಯಕ್ಷ ಶಿವಕುಮಾರ್, ಭೂನ್ಯಾಯ ಮಂಡಳಿ ಸದಸ್ಯ ಬಾಬುರೆಡ್ಡಿ,  ಸೇರಿದಂತೆ ಮುಖಂಡರು ಸ್ಥಳೀಯರು ಉಪಸ್ಥಿತರಿದ್ದರು.

ಸ್ಲಂ ಬೋರ್ಡ್ ವತಿಯಿಂದ ನಿರ್ಮಾನವಾದ ಮನೆಗಳ ವಿತರಣೆಯಲ್ಲಿ ಕ್ಷೇತಕ್ಕೆ ಅನ್ಯಾಯ: ಮಂಜುಳಾ ಅರವಿಂದ ಲಿಂಬಾವಳಿ.

ಮಹದೇವಪುರ: ಸ್ಲಂ ಬೋರ್ಡ್ ವತಿಯಿಂದ
ಮಹದೇವಪುರ  ಕ್ಷೇತ್ರದ ಕೊಡತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂಲಿಕುಂಟೆ ಗ್ರಾಮದಲ್ಲಿ ನಿರ್ಮಿಸಿರುವ ಮನೆಗಳನ್ನ  ಶೇಕಡಾ  50 ರಷ್ಟು  ವಸತಿ ಗೃಹಗಳನ್ನ  ಕ್ಷೇತ್ರದ ಫಲಾನುಭವಿಗಳಿಗೆ ನೀಡದೆ,ಬೇರೆ ಕ್ಷೇತ್ರದ ಜನರಿಗೆ‌ ನೀಡುತ್ತಿರುವುದರ ಬಗ್ಗೆ ಖಂಡಿಸಿ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ
ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಅವರು ಕಾಂಗ್ರೆಸ್ ಸರ್ಕಾರ  ಕ್ಷೇತ್ರದ ನಿವಾಗಳಿಗೆ ಅನ್ಯಾಯ ಮಾಡುವ ಕಾರ್ಯ ಮಾಡುತ್ತಿದೆ ಕ್ಷೇತ್ರದ ನಿವಾಸಿಗಳಿಗೆ ಅನ್ಯಾಯವಾದರೆ ಉಗ್ರ ಹೋರಾಟ ಮಾಡಲಾಗುವುದೆಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜೀವ್ ಗಾಂಧಿ ವಸತಿ ಯೋಜನೆಯಡಿ ನಿರ್ಮಿಸಿರುವ ಸುಮಾರು ೯೦೦ ಮನೆಗಳಲ್ಲಿ
ಸ್ಥಳೀಯರಿಗೆ 50 – 50 ಅನುಪಾತದಲ್ಲಿ ಮನೆಗಳನ್ನು ನೀಡುವಂತೆ ಒತ್ತಾಯಿಸಿದರು. ‌

ಸ್ಥಳೀಯರಿಗೆ ಅವಕಾಶ ಮಾಡಿಕೊಡದೆ,ಅನ್ಯರಿಗೆ  ಕ್ಷೇತ್ರದ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ನೀಡಿದರೆ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.

ಶೇ 50 ರಷ್ಟು ಮೀಸಲಾತಿ ಅಡಿಯಲ್ಲಿ ಬರುವ ಸ್ಲಂ ಬೋರ್ಡ್ ಮನೆಗಳನ್ನು ಸ್ಥಳೀಯರಿಗೆ ನೀಡದ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿದ ಅವರು  ಸ್ಥಳಕ್ಕೆ ಬಂದಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮಹದೇವಪುರ ಕ್ಷೇತ್ರದಲ್ಲಿ ನಲೆಸಿರುವ ನಿವಾಸಿಗಳಿಗೆ ನೀಡಬೇಕಾಗಿದ್ದ ಮನೆಗಳನ್ನ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯವರು ಸ್ವಾಧೀನಕ್ಕೆ ತೆಗೆದುಕೊಂಡು ತಮ್ಮಗೆ ಇಷ್ಟ ಬಂದವರಿಗೆ ಮನೆಗಳನ್ನ ಹಂಚಿಕೆ ಮಾಡುತ್ತಿದ್ದಾರೆ.ನಮ್ಮ ಕ್ಷೇತ್ರಕ್ಕೆ ಹಂಚಕೆ ಮಾಡಬೇಕಾಗಿದ್ದ ಪಾಲನ್ನ ನಮಗೆ ನೀಡಿ ಎಂದು ಸರ್ಕಾಕ್ಕೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷ ಮನೋಹರ ರೆಡ್ಡಿ, ಮಹದೇವಪುರ ಟಾಸ್ಕ್ ಫೋರ್ಸ್‌ನ ಸಾಮಾಜಿಕ ಮತ್ತು ಸಬಲೀಕರಣ ಅಧ್ಯಕ್ಷ  ವೆಂಕಟಸ್ವಾಮಿ ರೆಡ್ಡಿ, ಮುಖಂಡರಾದ ಹೂಡಿ ಪೀಳಪ್ಪ, ಮಹಿಳಾ ಮುಖಂಡರಾದ ಶೃತಿ ಸತೀಶ್, ಸ್ಥಳೀಯ ಗ್ರಾ.ಪ ಅಧ್ಯಕ್ಷ ಶಿವಕುಮಾರ್, ಭೂನ್ಯಾಯ ಮಂಡಳಿ ಸದಸ್ಯ ಬಾಬುರೆಡ್ಡಿ,  ಸೇರಿದಂತೆ ಮುಖಂಡರು ಸ್ಥಳೀಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *