ಚಿಕ್ಕಬಳ್ಳಾಪುರ: ಮುಂದಿನ ನಗರಸಭೆ ಚುನಾವಣೆಯಲ್ಲಿ ತಮ್ಮ ವಿರುದ್ಧ ಪ್ರಚಾರ ನಡೆಸುವುದಿರಲಿ,
ತಮ್ಮ ವಿರುದ್ಧವೇ ಗೆದ್ದು ತೋರಿಸಲಿ ಎಂದು ಶಾಸಕ ಪ್ರದೀಪ್ ಈಶ್ವರ್ ಅವರಿಗೆ ನಗರಸಭೆ ಮಾಜಿ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು ಪ್ರತಿ ಸವಾಲು ಹಾಕಿದರು.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಇತ್ತೀಚೆಗಷ್ಟೆ ಸುದ್ದಿಗೋಷ್ಠಿ ನಡೆಸಿದ ನಗರಸಭೆ ಸದಸ್ಯರಿಗೆ ಅವರು ಮುಂದಿನ ಚುನಾವಣೆಯಲ್ಲಿ ಠೇವಣಿಯನ್ನು ಪಡೆಯಲಿ ನೋಡೋಣ ಎಂದು ಹೇಳಿಕೆ ನೀಡಿದ್ದ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಪ್ರತಿಕ್ರಿಯಿಸಿರುವ ಅವರು,ಮುಂದಿನ ನಗರಸಭೆ ಚುನಾವಣೆವರೆಗೂ ಕಾಯುವುದು ಬೇಡ.ನಾಳೆಯೇ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನೀವು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನನ್ನ ವಿರುದ್ಧ ಸ್ಪರ್ಧೆಗೆ ಬನ್ನಿ ಎಂದು ಸವಾಲು ಹಾಕಿದರು. ನಗರದ 31ವಾರ್ಡ್‍ನಲ್ಲಿ ಯಾವ ವಾರ್ಡ್‍ನಲ್ಲಿ ಸ್ಪರ್ಧೆ ಮಾಡಬೇಕೆಂದು ನೀವೇ ಸೂಚಿಸಿ,ಅಲ್ಲಿಯೇ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವೆ.
ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸ್ಪರ್ಧಿಸಿ ಯಾರಿಗೆ ಠೇವಣಿ ಬರಲಿದೆ ನೋಡೋಣ.ಇಲ್ಲವಾದರೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸುವೆ.ನೀವು ಮತ್ತೊಮ್ಮೆ ಚುನಾವಣೆ ಎದುರಿಸಿ, ಯಾರು ಠೇವಣಿ ಕಳೆದುಕೊಳ್ಳುತ್ತಾರೆ ನೋಡೋಣ ಎಂದು ಗುಡುಗಿದರು.
ನಾನು 23 ವರ್ಷದಿಂದ ಜನರ ಸೇವೆ ಮಾಡಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ನಗರಸಭೆ ಅಧ್ಯಕ್ಷನಾಗಿ ಜನರ ಸೇವೆ ಮಾಡಿದ್ದೇನೆ.ಚಿಕ್ಕಬಳ್ಳಾಪುರಕ್ಕೆ ನಿಮ್ಮ ಕೊಡುಗೆ ಏನು? ಬೆಂಗಳೂರಿನಲ್ಲಿ ತಮ್ಮ ಖಾಸಗಿ ಸಂಸ್ಥೆಗೆ ಅಧಿಕಾರಿಗಳನ್ನು ಕರೆಸಿ ತರಗತಿಯ ಬೆಂಚ್‍ಗಳಲ್ಲಿ ಕೂರಿಸಿ ಸಭೆ ನಡೆಸಿರುವುದು ಚಿತ್ರಗಳಲ್ಲಿ ಸ್ಪಷ್ಟವಾಗಿ ಗೋಚರಿಸಿದರೂ ಸಭೆಯೇ ನಡೆದಿಲ್ಲ ಎಂದು ಸುಳ್ಳು ಹೇಳಿತ್ತಿರುವುದು ಹಾಸ್ಯಸ್ಪದವಾಗಿದೆ ಎಂದು ಕುಟುಕಿದರು.
ಮುಖಂಡ ಸಂತೋಷ್ ರಾಜ್ ಮಾತನಾಡಿ,ಚಿಕ್ಕಬಳ್ಳಾಪುರಕ್ಕೆ ಒಳ್ಳೆ ಇತಿಹಾಸವಿದೆ. ಉತ್ತಮ ನಾಯಕರು ಎನಿಸಿಕೊಂಡವರು ಶಾಸಕರಾಗಿ ಆಯ್ಕೆಗೊಂಡು ಜನ ಸೇವೆ ಮಾಡಿದ್ದಾರೆ ಆದರೆ ಶಾಸಕ ಪ್ರದೀಪ್ ಈಶ್ವರ್ ಅವರು ಸತ್ಯವನ್ನು ಮುಚ್ಚಿಟ್ಟು ಪ್ರತಿ ಸಾರಿ ಸುಳ್ಳು ಹೇಳಿದರೆ ಜನ ನಂಬುವುದಿಲ್ಲ ಎಂದು ಟೀಕಿಸಿದರು.ಹೈಟೆಕ್ ಹೂವಿನ ಮಾರುಕಟ್ಟೆಗೆ ಕುಪ್ಪಳ್ಳಿ ಕೆ.ಬಿ.ಪಿಳ್ಳಪ್ಪನವರ ಹೆಸರಿಡುತ್ತೇನೆ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ ಅದನ್ನು ನೆರವೇರಿಸಿ. ಇನ್ನೂ ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರು ಕ್ಷೇತ್ರಕ್ಕೆ ತಂದಿರುವ ಹೂವಿನ ಮಾರುಕಟ್ಟೆ,ಮೆಡಿಕಲ್ ಕಾಲೇಜು,
ನಂದಿ ರೋಪ್ ವೇಗೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಅನುದಾನ ತಂದು ಪೂರ್ಣಗೊಳಿಸಿದರೆ ಸಾಕು ಎಂದು ನುಡಿದರು.  
ಚಿಕ್ಕಬಳ್ಳಾಪುರದ ಅಭಿವೃದ್ಧಿ ಬಗ್ಗೆ ಮಾತನಾಡಿ ಎಂದು ನಗರಸಭೆ ಸದಸ್ಯರು ಪ್ರದೀಪ್ ಈಶ್ವರ್ ಗೆ ಪ್ರಶ್ನಿಸಿದರೆ, ಅವರು ಭ್ರಷ್ಟರು,
ಮುಂದಿನ ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳುತ್ತಾರೆ ಎಂದು ಉತ್ತರಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಹೇಳಿದರು,ಕಾಂಗ್ರೆಸ್ ಹಿರಿಯ ಮುಖಂಡರ,ಕಾರ್ಯಕರ್ತರ ಶ್ರಮ ಹಾಗೂ ಪಕ್ಷದ ಚಿಹ್ನೆಯಿಂದ ಪ್ರದೀಪ್ ಈಶ್ವರ್ ಗೆದ್ದಿರುವುದು ಎಂದು ನುಡಿದರು.ಈ ಸಂದರ್ಭದಲ್ಲಿ ಮುನಿರಾಜು ಮತ್ತಿತರರು ಇದ್ದರು.

ನನ್ನ ವಿರುದ್ಧ ಚುನಾವಣೆಯಲ್ಲಿ ಗೆದ್ದು ತೋರಿಸಲಿ
ಶಾಸಕ ಪ್ರದೀಪ್ ಈಶ್ವರ್ ಗೆ ಪ್ರತಿ ಸವಾಲು ಹಾಕಿದ ನಗರಸಭೆ ಮಾಜಿ ಅಧ್ಯಕ್ಷ ಆನಂದರೆಡ್ಡಿ ಬಾಬು

ಚಿಕ್ಕಬಳ್ಳಾಪುರ: ಮುಂದಿನ ನಗರಸಭೆ ಚುನಾವಣೆಯಲ್ಲಿ ತಮ್ಮ ವಿರುದ್ಧ ಪ್ರಚಾರ ನಡೆಸುವುದಿರಲಿ,
ತಮ್ಮ ವಿರುದ್ಧವೇ ಗೆದ್ದು ತೋರಿಸಲಿ ಎಂದು ಶಾಸಕ ಪ್ರದೀಪ್ ಈಶ್ವರ್ ಅವರಿಗೆ ನಗರಸಭೆ ಮಾಜಿ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು ಪ್ರತಿ ಸವಾಲು ಹಾಕಿದರು.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಇತ್ತೀಚೆಗಷ್ಟೆ ಸುದ್ದಿಗೋಷ್ಠಿ ನಡೆಸಿದ ನಗರಸಭೆ ಸದಸ್ಯರಿಗೆ ಅವರು ಮುಂದಿನ ಚುನಾವಣೆಯಲ್ಲಿ ಠೇವಣಿಯನ್ನು ಪಡೆಯಲಿ ನೋಡೋಣ ಎಂದು ಹೇಳಿಕೆ ನೀಡಿದ್ದ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಪ್ರತಿಕ್ರಿಯಿಸಿರುವ ಅವರು,ಮುಂದಿನ ನಗರಸಭೆ ಚುನಾವಣೆವರೆಗೂ ಕಾಯುವುದು ಬೇಡ.ನಾಳೆಯೇ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನೀವು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನನ್ನ ವಿರುದ್ಧ ಸ್ಪರ್ಧೆಗೆ ಬನ್ನಿ ಎಂದು ಸವಾಲು ಹಾಕಿದರು. ನಗರದ 31ವಾರ್ಡ್‍ನಲ್ಲಿ ಯಾವ ವಾರ್ಡ್‍ನಲ್ಲಿ ಸ್ಪರ್ಧೆ ಮಾಡಬೇಕೆಂದು ನೀವೇ ಸೂಚಿಸಿ,ಅಲ್ಲಿಯೇ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವೆ.
ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸ್ಪರ್ಧಿಸಿ ಯಾರಿಗೆ ಠೇವಣಿ ಬರಲಿದೆ ನೋಡೋಣ.ಇಲ್ಲವಾದರೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸುವೆ.ನೀವು ಮತ್ತೊಮ್ಮೆ ಚುನಾವಣೆ ಎದುರಿಸಿ, ಯಾರು ಠೇವಣಿ ಕಳೆದುಕೊಳ್ಳುತ್ತಾರೆ ನೋಡೋಣ ಎಂದು ಗುಡುಗಿದರು.
ನಾನು 23 ವರ್ಷದಿಂದ ಜನರ ಸೇವೆ ಮಾಡಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ನಗರಸಭೆ ಅಧ್ಯಕ್ಷನಾಗಿ ಜನರ ಸೇವೆ ಮಾಡಿದ್ದೇನೆ.ಚಿಕ್ಕಬಳ್ಳಾಪುರಕ್ಕೆ ನಿಮ್ಮ ಕೊಡುಗೆ ಏನು? ಬೆಂಗಳೂರಿನಲ್ಲಿ ತಮ್ಮ ಖಾಸಗಿ ಸಂಸ್ಥೆಗೆ ಅಧಿಕಾರಿಗಳನ್ನು ಕರೆಸಿ ತರಗತಿಯ ಬೆಂಚ್‍ಗಳಲ್ಲಿ ಕೂರಿಸಿ ಸಭೆ ನಡೆಸಿರುವುದು ಚಿತ್ರಗಳಲ್ಲಿ ಸ್ಪಷ್ಟವಾಗಿ ಗೋಚರಿಸಿದರೂ ಸಭೆಯೇ ನಡೆದಿಲ್ಲ ಎಂದು ಸುಳ್ಳು ಹೇಳಿತ್ತಿರುವುದು ಹಾಸ್ಯಸ್ಪದವಾಗಿದೆ ಎಂದು ಕುಟುಕಿದರು.
ಮುಖಂಡ ಸಂತೋಷ್ ರಾಜ್ ಮಾತನಾಡಿ,ಚಿಕ್ಕಬಳ್ಳಾಪುರಕ್ಕೆ ಒಳ್ಳೆ ಇತಿಹಾಸವಿದೆ. ಉತ್ತಮ ನಾಯಕರು ಎನಿಸಿಕೊಂಡವರು ಶಾಸಕರಾಗಿ ಆಯ್ಕೆಗೊಂಡು ಜನ ಸೇವೆ ಮಾಡಿದ್ದಾರೆ ಆದರೆ ಶಾಸಕ ಪ್ರದೀಪ್ ಈಶ್ವರ್ ಅವರು ಸತ್ಯವನ್ನು ಮುಚ್ಚಿಟ್ಟು ಪ್ರತಿ ಸಾರಿ ಸುಳ್ಳು ಹೇಳಿದರೆ ಜನ ನಂಬುವುದಿಲ್ಲ ಎಂದು ಟೀಕಿಸಿದರು.ಹೈಟೆಕ್ ಹೂವಿನ ಮಾರುಕಟ್ಟೆಗೆ ಕುಪ್ಪಳ್ಳಿ ಕೆ.ಬಿ.ಪಿಳ್ಳಪ್ಪನವರ ಹೆಸರಿಡುತ್ತೇನೆ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ ಅದನ್ನು ನೆರವೇರಿಸಿ. ಇನ್ನೂ ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರು ಕ್ಷೇತ್ರಕ್ಕೆ ತಂದಿರುವ ಹೂವಿನ ಮಾರುಕಟ್ಟೆ,ಮೆಡಿಕಲ್ ಕಾಲೇಜು,
ನಂದಿ ರೋಪ್ ವೇಗೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಅನುದಾನ ತಂದು ಪೂರ್ಣಗೊಳಿಸಿದರೆ ಸಾಕು ಎಂದು ನುಡಿದರು.  
ಚಿಕ್ಕಬಳ್ಳಾಪುರದ ಅಭಿವೃದ್ಧಿ ಬಗ್ಗೆ ಮಾತನಾಡಿ ಎಂದು ನಗರಸಭೆ ಸದಸ್ಯರು ಪ್ರದೀಪ್ ಈಶ್ವರ್ ಗೆ ಪ್ರಶ್ನಿಸಿದರೆ, ಅವರು ಭ್ರಷ್ಟರು,
ಮುಂದಿನ ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳುತ್ತಾರೆ ಎಂದು ಉತ್ತರಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಹೇಳಿದರು,ಕಾಂಗ್ರೆಸ್ ಹಿರಿಯ ಮುಖಂಡರ,ಕಾರ್ಯಕರ್ತರ ಶ್ರಮ ಹಾಗೂ ಪಕ್ಷದ ಚಿಹ್ನೆಯಿಂದ ಪ್ರದೀಪ್ ಈಶ್ವರ್ ಗೆದ್ದಿರುವುದು ಎಂದು ನುಡಿದರು.ಈ ಸಂದರ್ಭದಲ್ಲಿ ಮುನಿರಾಜು ಮತ್ತಿತರರು ಇದ್ದರು.

Leave a Reply

Your email address will not be published. Required fields are marked *