ಸರ್ಕಾರದ ಆದೇಶಕ್ಕೆ ಕಿಂಚಿತ್ತು ಗೌರವ ಕೊಡದ ಅಧಿಕಾರಿಗಳು:
ಸರ್ಕಾರ 2021ರಲ್ಲಿ ಮಾನ್ಯ ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವ ಟಿಪ್ಪಣಿ ಸಂಖ್ಯೆ ಇ.ಕ.ಮತ್ತು ಸ.ಸ./ಟಿ/31/2021 ರಂತೆ ಶಾಲೆ ಮತ್ತು ಕಾಲೇಜುಗಳ ಮೇಲೆ ಹಾದುಹೋಗಿರುವ ವಿದ್ಯುತ್ ಮಾರ್ಗದ ತಂತಿಗಳನ್ನು ಸ್ಥಳಾಂತರಿಸುವಂತೆ ಮತ್ತು ಎ.ಬಿ.ಕೇಬಲ್ ಅಳವಡಿಸಲು ಆದೇಶ ನೀಡಿರುತ್ತದೆ, ಆದರೆ ಸ್ಥಳೀಯ ಬೆಸ್ಕಾಂ ಅಧಿಕಾರಿಗಳು ಸರ್ಕಾರದ ಆದೇಶಕ್ಕೆ ಕಿಂಚಿತ್ತು ಗೌರವ ಕೊಡದೆ ವಿದ್ಯಾರ್ಥಿಗಳ ಪ್ರಾಣದ ಜೊತೆ ಚೆಲ್ಲಾಟ ವಾಡುತ್ತಿದ್ದಾರೆ. ಮತ್ತು ಶಾಲೆಯ ಪಕ್ಕದಲ್ಲಿರುವ ವಾಸದಮನೆಯ ಗೋಡೆಗೆ ತಂತಿಗಳು ತಾಕಿಕೊಂಡಿದೆ, ಯಾರಿಗಾದರೂ ತಂತಿ ಸ್ಪರ್ಶವಾದಲ್ಲಿ ಸಾವು ಕಟ್ಟಿಟ್ಟ ಬುತ್ತಿ, ಗ್ರಾಮಸ್ಥರು ವಿದ್ಯಾರ್ಥಿಗಳು ತಮ್ಮ ಪ್ರಾಣವನ್ನು ಬಿಗಿಹಿಡಿದುಕೊಂಡು ಜೀವಿಸುವಂತಹ ದುಸ್ಥಿತಿ ನಿರ್ಮಾಣವಾಗಿದೆ.

ಗ್ರಾಮಸ್ಥರ ಆಕ್ರೋಶಕ್ಕೆ ತುತ್ತಾದ ಬೆಸ್ಕಾಂ,:
ಬೆಸ್ಕಾಂ ಅಧಿಕಾರಿಗಳನ್ನು ಬೇಜವಾಬ್ದಾರಿ ವರ್ತನೆಯ ಮುಂದುವರೆದ ಭಾಗವಾಗಿ ಬೈರನಾಯಕನಹಳ್ಳಿ ಹಾಗೂ ವಟ್ರುಕುಂಟೆ ಮಾರ್ಗ ಮಧ್ಯರಸ್ತೆಯ ಪಕ್ಕದಲ್ಲಿರುವ ಟಿ.ಸಿ. ಟ್ರಾನ್ಸ್ಫಾರ್ಮರ್ ಅಳವಡಿಸಿರುವ ಕಂಬಗಳು ಜೋತುಬಿದ್ದಿದ್ದು ತಂತಿಗಳು ಪಕ್ಕದ ರೈತರ ಜಮೀನಿನಲ್ಲಿರುವ ನೀಲಿಗಿರಿ ಗಿಡಗಳಿಗೆ ತಾಕಿಕೊಂಡಿದ್ದು ಕೈಗೆಟಕುವಷ್ಟು ಹತ್ತಿರದಲ್ಲಿದೆ, ಕಳೆದ ಒಂದು ವಾರದಿಂದ ಮೋಡಕವಿದ ವಾತಾವರಣವಿದ್ದು ಜಿಟಿ ಜಿಟಿ ಮಳೆ ಸುರಿಯುತ್ತಿದೆ ಇದರಿಂದ ಮಣ್ಣಿನ ಸವಕಳಿ ಉಂಟಾಗಿ ಯಾವ ಸಂದರ್ಭದಲ್ಲಿ ಬೇಕಾದರೂ ವಿದ್ಯುತ್ ತಂತಿಗಳು ಮತ್ತು ಕಂಬಗಳು ಕೆಳಗೆ ಬೀಳುವ ಸಂಭವವಿದೆ.

ಬಡ ರೈತರ ಬಗ್ಗೆ ವಿದ್ಯಾರ್ಥಿಗಳ ಬಗ್ಗೆ ಅಧಿಕಾರಿಗಳಿಗೇಕೆ ತಾತ್ಸಾರ ಮನೋಭಾವ:
ಜನಪ್ರತಿನಿಧಿಗಳ ಅಥವಾ ಶ್ರೀಮಂತ ವರ್ಗದ ಮನೆಯ ಮುಂದೆ ಈ ರೀತಿ ಘಟನೆಗಳು ಸಂಬಂಧಿಸಿದೆಯಾದಲ್ಲಿ ಕೂಡಲೇ ಬಗೆಹರಿಸುವ ಅಧಿಕಾರಿ ವರ್ಗ ಗ್ರಾಮೀಣ ಭಾಗದ ಬಡರೈತರ, ವಿದ್ಯಾರ್ಥಿಗಳ ಬಗ್ಗೆ ಏಕೆ ತತ್ಸಾರ ಮನೋಭಾವನೆಯನ್ನು ಹೊಂದಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕೇವಲ ಒಂದು ಗ್ರಾಮದಹೋದಲ್ಲಿ 3 ರಿಂದ 4 ಸಮಸ್ಯೆಗಳಿದ್ದರೆ ತಾಲೂಕಿನಾದ್ಯಂತ ಇನ್ನೆಷ್ಟು ಸಮಸ್ಯೆಗಳಿರಬಹುದು ಅಧಿಕಾರಿಗಳು ಏಕೆಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಅಂಶ ನಿಗೂಢವಾದ ಯಕ್ಷಪ್ರಶ್ನೆಯಾಗಿದೆ.

ಶಾಸಕರ ಮೌಖಿಕ ಆದೇಶಕ್ಕೆ ಬೆಲೆಕೊಡದ ಅಧಿಕಾರಿಗಳು:
ಶಾಸಕರು ಗ್ರಾಮಕ್ಕೆ ಭೇಟಿ ನೀಡಿದ ಸಮಯದಲ್ಲಿ ತಂತಿಗಳನ್ನು ಸ್ಥಳಾಂತರಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಮೌಖಿಕ ಆದೇಶ ನೀಡಿದ್ದರು, ಆದರೆ ಅಧಿಕಾರಿಗಳು ಶಾಸಕರ ಮಾತಿಗೆ ಕಿಂಚಿತ್ತು ಗೌರವ ನೀಡದೆ ವಿದ್ಯುತ್ ತಂತಿಗಳನ್ನು ಸ್ಥಳಾಂತರ ಮಾಡದೆ ಉದ್ಧಟತನ ತೋರುತ್ತಿದ್ದಾರೆ, ಸ್ಥಳೀಯ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಲವು ಬಾರಿ ಸಮಸ್ಯೆಯ ಬಗ್ಗೆ ಅಧಿಕಾರಿಗಳಿಗೆ ಮನವಿ ಕೊಟ್ಟರು ಯಾವುದೇ ಪ್ರಯೋಜನವಾಗಲಿಲ್ಲ, ನಾವು ಯಾರ ಬಳಿ ನಮ್ಮ ಸಂಕಷ್ಟ ಹೇಳಿಕೊಳ್ಳಬೇಕು ಎಂದು ಗ್ರಾಮಸ್ಥರು ತಮ್ಮ ಅಸಹಾಯಕತೆಯನ್ನು ವಿವರಿಸಿದರು.
ಇನ್ನಾದರೂ ಬೆಸ್ಕಾಂ ಅಧಿಕಾರಿಗಳು ಬಡವರ, ರೈತರ ಹಾಗೂ ಬಡ ವಿದ್ಯಾರ್ಥಿಗಳ ಬಗ್ಗೆ ಉದ್ದಟತನದ ನಿರ್ಲಕ್ಷ ಧೋರಣೆಯನ್ನು ಬದಿಗಿಟ್ಟು ಸಮಸ್ಯೆಯನ್ನು ಬಗೆಹರಿಸಿಕೊಟ್ಟಲ್ಲಿ ನಡೆಯಬಹುದಾದಂತಹ ಅವಘಡಗಳನ್ನು ತಪ್ಪಿಸಬಹುದು

ಬಂಗಾರಪೇಟೆ: ತಾಲೂಕಿನ ಚಿಕ್ಕಅಂಕಾಂಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಟ್ರಕುಂಟೆ ಗ್ರಾಮದ ಟಾಪ್ಮುಖ್ಯ ರಸ್ತೆಯಲ್ಲಿರುವ ಅಂಗನವಾಡಿ ಶಾಲಾ ಆವರಣದ ಕಟ್ಟಡಕ್ಕೆ ಮತ್ತು ಮರಕ್ಕೆ ವಿದ್ಯುತ್ ಕಂಬದ ತಂತಿಗಳು ಬೆರಳೆಣಿಕೆ ದೂರದಲ್ಲಿ ಕೈಗೆಟಕುವ ರೀತಿಯಲ್ಲಿ ಹಾದುಹೋಗಿದೆ, ಇದಕ್ಕೆ ಸಂಬಂಧಪಟ್ಟಂತೆ ಬೆಸ್ಕಾಂ ಅಧಿಕಾರಿಗಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಒಳಗೊಂಡಂತೆ ಸಾರ್ವಜನಿಕರು ತಿಳಿಸಿದರು ಯಾವುದೇ ಪ್ರಯೋಜನವಾಗಲಿಲ್ಲ.

ಸರ್ಕಾರದ ಆದೇಶಕ್ಕೆ ಕಿಂಚಿತ್ತು ಗೌರವ ಕೊಡದ ಅಧಿಕಾರಿಗಳು:
ಸರ್ಕಾರ 2021ರಲ್ಲಿ ಮಾನ್ಯ ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವ ಟಿಪ್ಪಣಿ ಸಂಖ್ಯೆ ಇ.ಕ.ಮತ್ತು ಸ.ಸ./ಟಿ/31/2021 ರಂತೆ ಶಾಲೆ ಮತ್ತು ಕಾಲೇಜುಗಳ ಮೇಲೆ ಹಾದುಹೋಗಿರುವ ವಿದ್ಯುತ್ ಮಾರ್ಗದ ತಂತಿಗಳನ್ನು ಸ್ಥಳಾಂತರಿಸುವಂತೆ ಮತ್ತು ಎ.ಬಿ.ಕೇಬಲ್ ಅಳವಡಿಸಲು ಆದೇಶ ನೀಡಿರುತ್ತದೆ, ಆದರೆ ಸ್ಥಳೀಯ ಬೆಸ್ಕಾಂ ಅಧಿಕಾರಿಗಳು ಸರ್ಕಾರದ ಆದೇಶಕ್ಕೆ ಕಿಂಚಿತ್ತು ಗೌರವ ಕೊಡದೆ ವಿದ್ಯಾರ್ಥಿಗಳ ಪ್ರಾಣದ ಜೊತೆ ಚೆಲ್ಲಾಟ ವಾಡುತ್ತಿದ್ದಾರೆ. ಮತ್ತು ಶಾಲೆಯ ಪಕ್ಕದಲ್ಲಿರುವ ವಾಸದಮನೆಯ ಗೋಡೆಗೆ ತಂತಿಗಳು ತಾಕಿಕೊಂಡಿದೆ, ಯಾರಿಗಾದರೂ ತಂತಿ ಸ್ಪರ್ಶವಾದಲ್ಲಿ ಸಾವು ಕಟ್ಟಿಟ್ಟ ಬುತ್ತಿ, ಗ್ರಾಮಸ್ಥರು ವಿದ್ಯಾರ್ಥಿಗಳು ತಮ್ಮ ಪ್ರಾಣವನ್ನು ಬಿಗಿಹಿಡಿದುಕೊಂಡು ಜೀವಿಸುವಂತಹ ದುಸ್ಥಿತಿ ನಿರ್ಮಾಣವಾಗಿದೆ.

ಗ್ರಾಮಸ್ಥರ ಆಕ್ರೋಶಕ್ಕೆ ತುತ್ತಾದ ಬೆಸ್ಕಾಂ,:
ಬೆಸ್ಕಾಂ ಅಧಿಕಾರಿಗಳನ್ನು ಬೇಜವಾಬ್ದಾರಿ ವರ್ತನೆಯ ಮುಂದುವರೆದ ಭಾಗವಾಗಿ ಬೈರನಾಯಕನಹಳ್ಳಿ ಹಾಗೂ ವಟ್ರುಕುಂಟೆ ಮಾರ್ಗ ಮಧ್ಯರಸ್ತೆಯ ಪಕ್ಕದಲ್ಲಿರುವ ಟಿ.ಸಿ. ಟ್ರಾನ್ಸ್ಫಾರ್ಮರ್ ಅಳವಡಿಸಿರುವ ಕಂಬಗಳು ಜೋತುಬಿದ್ದಿದ್ದು ತಂತಿಗಳು ಪಕ್ಕದ ರೈತರ ಜಮೀನಿನಲ್ಲಿರುವ ನೀಲಿಗಿರಿ ಗಿಡಗಳಿಗೆ ತಾಕಿಕೊಂಡಿದ್ದು ಕೈಗೆಟಕುವಷ್ಟು ಹತ್ತಿರದಲ್ಲಿದೆ, ಕಳೆದ ಒಂದು ವಾರದಿಂದ ಮೋಡಕವಿದ ವಾತಾವರಣವಿದ್ದು ಜಿಟಿ ಜಿಟಿ ಮಳೆ ಸುರಿಯುತ್ತಿದೆ ಇದರಿಂದ ಮಣ್ಣಿನ ಸವಕಳಿ ಉಂಟಾಗಿ ಯಾವ ಸಂದರ್ಭದಲ್ಲಿ ಬೇಕಾದರೂ ವಿದ್ಯುತ್ ತಂತಿಗಳು ಮತ್ತು ಕಂಬಗಳು ಕೆಳಗೆ ಬೀಳುವ ಸಂಭವವಿದೆ.

ಬಡ ರೈತರ ಬಗ್ಗೆ ವಿದ್ಯಾರ್ಥಿಗಳ ಬಗ್ಗೆ ಅಧಿಕಾರಿಗಳಿಗೇಕೆ ತಾತ್ಸಾರ ಮನೋಭಾವ:
ಜನಪ್ರತಿನಿಧಿಗಳ ಅಥವಾ ಶ್ರೀಮಂತ ವರ್ಗದ ಮನೆಯ ಮುಂದೆ ಈ ರೀತಿ ಘಟನೆಗಳು ಸಂಬಂಧಿಸಿದೆಯಾದಲ್ಲಿ ಕೂಡಲೇ ಬಗೆಹರಿಸುವ ಅಧಿಕಾರಿ ವರ್ಗ ಗ್ರಾಮೀಣ ಭಾಗದ ಬಡರೈತರ, ವಿದ್ಯಾರ್ಥಿಗಳ ಬಗ್ಗೆ ಏಕೆ ತತ್ಸಾರ ಮನೋಭಾವನೆಯನ್ನು ಹೊಂದಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕೇವಲ ಒಂದು ಗ್ರಾಮದಹೋದಲ್ಲಿ 3 ರಿಂದ 4 ಸಮಸ್ಯೆಗಳಿದ್ದರೆ ತಾಲೂಕಿನಾದ್ಯಂತ ಇನ್ನೆಷ್ಟು ಸಮಸ್ಯೆಗಳಿರಬಹುದು ಅಧಿಕಾರಿಗಳು ಏಕೆಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಅಂಶ ನಿಗೂಢವಾದ ಯಕ್ಷಪ್ರಶ್ನೆಯಾಗಿದೆ.

ಶಾಸಕರ ಮೌಖಿಕ ಆದೇಶಕ್ಕೆ ಬೆಲೆಕೊಡದ ಅಧಿಕಾರಿಗಳು:
ಶಾಸಕರು ಗ್ರಾಮಕ್ಕೆ ಭೇಟಿ ನೀಡಿದ ಸಮಯದಲ್ಲಿ ತಂತಿಗಳನ್ನು ಸ್ಥಳಾಂತರಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಮೌಖಿಕ ಆದೇಶ ನೀಡಿದ್ದರು, ಆದರೆ ಅಧಿಕಾರಿಗಳು ಶಾಸಕರ ಮಾತಿಗೆ ಕಿಂಚಿತ್ತು ಗೌರವ ನೀಡದೆ ವಿದ್ಯುತ್ ತಂತಿಗಳನ್ನು ಸ್ಥಳಾಂತರ ಮಾಡದೆ ಉದ್ಧಟತನ ತೋರುತ್ತಿದ್ದಾರೆ, ಸ್ಥಳೀಯ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಲವು ಬಾರಿ ಸಮಸ್ಯೆಯ ಬಗ್ಗೆ ಅಧಿಕಾರಿಗಳಿಗೆ ಮನವಿ ಕೊಟ್ಟರು ಯಾವುದೇ ಪ್ರಯೋಜನವಾಗಲಿಲ್ಲ, ನಾವು ಯಾರ ಬಳಿ ನಮ್ಮ ಸಂಕಷ್ಟ ಹೇಳಿಕೊಳ್ಳಬೇಕು ಎಂದು ಗ್ರಾಮಸ್ಥರು ತಮ್ಮ ಅಸಹಾಯಕತೆಯನ್ನು ವಿವರಿಸಿದರು.
ಇನ್ನಾದರೂ ಬೆಸ್ಕಾಂ ಅಧಿಕಾರಿಗಳು ಬಡವರ, ರೈತರ ಹಾಗೂ ಬಡ ವಿದ್ಯಾರ್ಥಿಗಳ ಬಗ್ಗೆ ಉದ್ದಟತನದ ನಿರ್ಲಕ್ಷ ಧೋರಣೆಯನ್ನು ಬದಿಗಿಟ್ಟು ಸಮಸ್ಯೆಯನ್ನು ಬಗೆಹರಿಸಿಕೊಟ್ಟಲ್ಲಿ ನಡೆಯಬಹುದಾದಂತಹ ಅವಘಡಗಳನ್ನು ತಪ್ಪಿಸಬಹುದು

Leave a Reply

Your email address will not be published. Required fields are marked *