





ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವ ಕೃಷ್ಣಬೈರೇಗೌಡ ಚಾಲನೆ :
ಬ್ಯಾಟರಾಯನಪುರ : ಕ್ಷೇತ್ರದ ಕೊಡಿಗೇಹಳ್ಳಿ ವಾರ್ಡ್ ವ್ಯಾಪ್ತಿಯ ಎನ್.ಟಿ.ಐ.ಬಡಾವಣೆ, ವಿದ್ಯಾರಣ್ಯಪುರ ವಾರ್ಡ್ ವ್ಯಾಪ್ತಿಯ ನಂಜಪ್ಪ ಬಡಾವಣೆ, ಚಾಮುಂಡೇಶ್ವರಿ ಬಡಾವಣೆ, ಸಿ.ರಾಮಯ್ಯ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಸುಮಾರು 5 ಕೋಟಿ ರು.ಅಂದಾಜು ವೆಚ್ಚದ ರಸ್ತೆ ಡಾಂಬರೀಕರಣ, ಚರಂಡಿ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಕೃಷ್ಣಬೈರೇಗೌಡ ಭಾನುವಾರ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾಜಿ ಬಿಬಿಎಂಪಿ ಸದಸ್ಯ ಚೇತನ್, ಕೊಡಿಗೇಹಳ್ಳಿ ವಾರ್ಡ್ ನ ಕಾಂಗ್ರೆಸ್ ಮುಖಂಡರಾದ ಹನುಮಂತಿ, ವೆಂಕಟಸ್ವಾಮಿ, ಅಮರ್, ಮಹೇಶ್, ರವಿಶಂಕರ್ ಗೌಡ, ವಿದ್ಯಾರಣ್ಯಪುರ ವಾರ್ಡ್ ನ ಕಾಂಗ್ರೆಸ್ ಮುಖಂಡರಾದ ವಿ.ಹರಿ, ಲಕ್ಷ್ಮಿ ಹರಿ, ಬಿ.ಸಿ.ಸುರೇಶ್, ಕಾಮೇಶ್, ನಾಗರಾಜ್, ರಾಜಣ್ಣ, ಮಾಜಿ ನಗರಸಭಾ ಸದಸ್ಯ ಆರ್.ಎಂ. ಶ್ರೀನಿವಾಸ್, ಸತೀಶ್ ನಾಯ್ಡು, ಮಧುನಾಯ್ಡು, ಹೇಮಾವತಿ, ರಾಜೇಶ್ವರಿ, ಮೋನಾ, ಜಮುನಾ, ಸಹಾಯಕ ಅಭಿಯಂತ ರರಾದ ಅರ್ಚನ, ಗುತ್ತಿಗೆದಾರರಾದ ಹಾರ್ದಿಕ್ ಗೌಡ ಸೇರಿದಂತೆ ಬಡಾವಣೆಯ ನಿವಾಸಿಗಳಿದ್ದರು.