




ಹಿಂದೂ ಜನಜಾಗೃತಿ ಸಮಿತಿ ಮತ್ತು ಮಂದಿರ ಮಹಾಸಂಘದ ವತಿಯಿಂದ ಮಂದಿರಗಳನ್ನು ಸರಕಾರದ ನಿಯಂತ್ರಣದಿಂದ ಮುಕ್ತ ಮಾಡಲು, ಮಂದಿರಗಳ ರಕ್ಷಣೆಗಾಗಿ ಮತ್ತು ಮಂದಿರಗಳ ಮೂಲಕ ಹಿಂದೂ ಧರ್ಮದ ಪ್ರಚಾರ ಮಾಡಲು, ಕಲಬುರ್ಗಿ ಜಿಲ್ಲಾ ಮಟ್ಟದ ಮಂದಿರ ಅಧಿವೇಶನವು ಅತ್ಯಂತ ಯಶಸ್ವಿಯಾಗಿ ನಡೆಯಿತು. 200 + ಮಂದಿರಗಳ ವಿಶ್ವಸ್ಥರು ಮಂದಿರಗಳ ಮೂಲಕ ಹಿಂದೂ ಸಮಾಜವನ್ನು ಸಂಘಟನೆ ಮಾಡಲು ಸಂಕಲ್ಪ ಮಾಡಿದರು. ಇದರಲ್ಲಿ ಶ್ರೀ ಕರುಣೇಶ್ವರ ಮಠದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಸೇರಿದಂತೆ ಅನೇಕ ಸ್ವಾಮೀಜಿಗಳು ಭಾಗವಹಿಸಿ ಮಾರ್ಗದರ್ಶನ ಮಾಡಿದರು.